ಆ್ಯಪ್ನಗರ

ಲಾಕ್‌ಡೌನ್‌ ನಡುವೆ 'ವರ್ಷದ ತೊಡಕು' ಆಚರಣೆಗೆ ಮುಗಿಬಿದ್ದವರಿಂದ ಸಮಾಜಕ್ಕೇ ತೊಡಕು!

ಕೊರೊನಾ ವೈರಸ್‌ ಎಂಬ ಮಹಾಮಾರಿಯನ್ನು ಹೊಡೆದೋಡಿಸಬೇಕು ಎಂದು ವಿಶ್ವಾದ್ಯಾಂತ ಹಗಲು ರಾತ್ರಿ ಕಷ್ಟ ಪಡುತ್ತಿದ್ದರೆ ಒಂದಷ್ಟು ಮಂದಿಗೆ ಹಬ್ಬದ ಆಚರಣೆಯೇ ಮುಖ್ಯವೆನಿಸಿದೆ. ಮನೆಯಲ್ಲೇ ಇದ್ದುಕೊಂಡು ಸರಳವಾಗಿ ಆಚರಿಸಿದರೆ ಸಮಸ್ಯೆಯಿಲ್ಲ. ಆದರೆ ಹೀಗೆ ಮಾರುಕಟ್ಟೆ ಬಂದು ಮುಗಿಬಿದ್ದು ಮಾಂಸ ಕೊಳ್ಳುವವರಿಗೆ ಏನು ಹೇಳಬೇಕು?

Vijaya Karnataka Web 26 Mar 2020, 10:10 am
ಬೆಂಗಳೂರು: ಕೊರೊನಾ ವೈರಸ್‌ ತಡೆಗೆ ರಾಷ್ಟ್ರಾದ್ಯಂತ 21 ದಿನಗಳ ವರೆಗೆ ಲಾಕ್‌ಡೌನ್‌ ಘೋಷಣೆ ನಡುವೆಯೂ ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬ ಯುಗಾದಿ ಹಬ್ಬದ ಮರುದಿನ ಆಚರಿಸುವ ವರ್ಷದ ತೊಡಕಿಗೆ ರಾಜ್ಯದ ಅಲ್ಲಲ್ಲಿ ಮಾಂಸ ಕೊಳ್ಳಲು ಮಂದಿ ಸಾಲುಗಟ್ಟಿ ನಿಂತಿದ್ದು ಕಂಡು ಬಂತು.
Vijaya Karnataka Web Varshada Todaku
ಕುರುಬರಹಳ್ಳಿಯ ಜೆಸಿ ನಗರದ ಮಟನ್‌ ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಜನ


21 ದಿನಗಳ ಕಾಲ ಮನೆಯಿಂದ ಅನಗತ್ಯವಾಗಿ ಹೊರಗೆ ಬರಬೇಡಿ. ಮಾರುಕಟ್ಟೆಯಲ್ಲಿ ಗುಂಪಾಗಿ ಸೇರಬೇಡಿ. ಸ್ವಚ್ಛತೆ ಬಗ್ಗೆ ನಿಗಾ ವಹಿಸಿ. ಸುರಕ್ಷತೆಗೆ ಗಮನಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತಿ ಎಲ್ಲರೂ ಹೇಳುತ್ತಿದ್ದರು ಜನರಿಗೆ ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲದಾಗಿದೆ. ಒಂದು ಬಾರಿ ಹಬ್ಬವನ್ನು ಸರಳವಾಗಿ ಆಚರಿಸದಿದ್ದರೆ ಪ್ರಾಣ ಹೋಗಿಬಿಡುತ್ತದೇನೋ ಎಂಬಂತೆ ವರ್ತಿಸುತ್ತಿರುವುದು ಸೋಚನೀಯವಾಗಿದೆ.

ವರ್ಷದ ತೊಡಕು ಬಂತೆಂದರೆ ಕೋಳಿ, ಕುರಿ, ಮೇಕೆಯ ಬೇಡಿಕೆ ಸಹಜವಾಗೇ ಹೆಚ್ಚಿರುತ್ತದೆ. ಆದರೆ ಈ ವರ್ಷ ಹಕ್ಕಿ ಜ್ವರ, ಹಂದಿ ಜ್ವರ ಸೇರಿದಂತೆ ಕೊರೊನಾ ವೈರಸ್‌ ಭೀತಿಯಿಂದ ಮಾಂಸ ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾ ಸೋಂಕು ಕೋಳಿ ಮಾಂಸ ತಿನ್ನುವುದರಿಂದ ತಗಲುವುದಿಲ್ಲ ಎಂಬ ವರದಿಗಳು ಪ್ರಕಟವಾದರೂ ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ.

ದೇಶವೇ ಲಾಕ್‌ಡೌನ್‌: ದಿನ ಬಳಕೆಯ ವಸ್ತುಗಳ ಪೂರೈಕೆಗೆ ಕೇಂದ್ರ, ರಾಜ್ಯ ಸರಕಾರಗಳು ಅಭಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ