ಬೆಂಗಳೂರು: ಹಾಸನದಲ್ಲಿ ಆನೆ ದಾಳಿಗೆ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಜೆಡಿಎಸ್ ಶಾಸಕರು ಬುಧವಾರ ಪ್ರತಿಭಟನೆ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾದ ಎಟಿ ರಾಮಸ್ವಾಮಿ, ಹೆಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಳೆ ಸುರಿದರೂ ಲೆಕ್ಕಿಸದೆ ಶಾಸಕರು ಪ್ರತಿಭಟನೆ ನಡೆಸಿದರು. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಕಾಸಸೌಧ ಮೆಟ್ಟಿಲುಗಳ ಮೇಲೆ ಧರಣಿ ಕುಳಿತರು. ಸಿಎಂ ಬರುವ ವರೆಗೂ ಪ್ರತಿಭಟನೆ ಕೈ ಬಿಡಲ್ಲ ಎಂದು ಜೆಡಿಎಸ್ ಶಾಸಕರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ನಿರಂತರವಾಗಿ ಮನುಷ್ಯರ ಮೇಲೆ ಆನೆ ದಾಳಿ ಆಗುತ್ತಿದೆ. ನಿನ್ನೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ನಾವು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಆದರೆ ಸರ್ಕಾರ ಏನೂ ಮಾಡುತ್ತಿಲ್ಲ. ಪರಿಹಾರ ಧನವನ್ನು ಹೆಚ್ಚಿಸುವಂತೆ ನಾವು ಒತ್ತಾಯ ಮಾಡುತ್ತಾ ಬಂದಿದ್ದೇವೆ. ಭರವಸೆ ಕೊಟ್ಟಿದ್ದ ಸರ್ಕಾರ ಹಾಗೆ ಮಾಡಿಲ್ಲ. ಕ್ಷೇತ್ರದಲ್ಲಿ ಜನರು ನಮ್ಮನ್ನು ಪ್ರಶ್ನಿಸುತ್ತಾರೆ ಎಂದರು.
ಆನೆಗಳಿಂದ ರೈತರಿಗೆ ಸಂಕಷ್ಟ
ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿಲ್ಲುವ ಸೂಚನೆಗಳೇ ಕಾಣುತ್ತಿಲ್ಲ, ಮಳೆ ನಿಂತರೂ ಕಾರ್ಮಿಕರು ಗದ್ದೆ, ತೋಟದ ಕೆಲಸಕ್ಕೆ ಹೋಗಲು ಆತಂಕ ಪಡುವ ಸ್ಥಿತಿ ಮುಂದುವರಿದಿದೆ. ಆಲೂರು, ಸಕಲೇಶಪುರ ತಾಲೂಕಿನಲ್ಲಿ 60ರಿಂದ 70 ಆನೆಗಳ ಹಿಂಡು ಪ್ರತ್ಯೇಕ ಗುಂಪುಗಳಾಗಿ ಕಾಫಿತೋಟ, ಗದ್ದೆ, ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳೆದ ಬೆಳೆಯನ್ನು ರಾತ್ರೋರಾತ್ರಿ ತಿಂದು ಇಲ್ಲವೇ ತುಳಿದು ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿ ರೈತರ ಸಂಕಷ್ಟಕ್ಕೆ ಆನೆಗಳು ಕಾರಣವಾಗುತ್ತಿವೆ.
ಪ್ರಸಕ್ತ ಸಾಲಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಜೀವ ತೆತ್ತಿದ್ದಾರೆ. ಅವರ ಕುಟುಂಬಕ್ಕೆ ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ನೀಡಿದೆ. ಇನ್ನಿಬ್ಬರು ದಾಳಿಗೆ ಸಿಲುಕಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸಾ ವೆಚ್ಚದ ಬಿಲ್ ಕೈಸೇರಿದ ಬಳಿಕ ಹಣ ನೀಡಲಾಗುವುದು ಎನ್ನುತ್ತಾರೆ ಡಿಎಫ್ಒ ಬಸವರಾಜು. ಆನೆ ದಾಳಿ, ಗಾಯ ಇಲ್ಲವೇ ಸಾವು, ಪರಿಹಾರ ಇದೆಲ್ಲವನ್ನು ಬದಿಗಿಟ್ಟು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಗಂಭೀರ ಪ್ರಯತ್ನಗಳು ದಶಕಗಳ ಕಾಲದಿಂದಲೂ ಆಗುತ್ತಿಲ್ಲ. ಆನೆ ದಾಳಿಯಿಂದ ಸತ್ತಾಗ ಸಾಂತ್ವನ, ಹೋರಾಟ ಬಿಟ್ಟರೆ ಪುನಃ ಗ್ರಾಮೀಣ ಪ್ರದೇಶದ ಜನರು ಸಮಸ್ಯೆ ಎದುರಿಸುವುದು ತಪ್ಪುತ್ತಿಲ್ಲ.
ಕಾಡಾನೆಗಳ ಚಲನವಲನ ಗಮನಿಸಿ ಕಾಡಿಗೆ ಓಡಿಸಲು ಸಹಕಾರಿಯಾಗುವಂತೆ ಎರಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರಕಾರ ಅನುಮತಿ ನೀಡಿದ್ದು, ಮಳೆಯ ಅಡ್ಡಿಯ ಕಾರಣ ಕಾರ್ಯಾಚರಣೆ ಮುಂದೂಡುತ್ತಲೇ ಇದ್ದು, ಇನ್ನಷ್ಟೇ ದಿನಾಂಕ ನಿಗದಿಯಾಗಬೇಕಿದೆ. ಆಲೂರು, ಸಕಲೇಶಪುರ ತಾಲೂಕಿಗೆ ಸೀಮಿತವಾಗಿದ್ದ ಕಾಡಾನೆ ಸಮಸ್ಯೆ ಬೇಲೂರು, ಅರಕಲಗೂಡು ತಾಲೂಕಿಗೂ ವಿಸ್ತರಿಸಿ ಆ ಭಾಗದ ಜನರ ನಿದ್ದೆಗೆಡಿಸಿದೆ. ಕಾಡಾನೆಗಳು ನಡೆಸುತ್ತಿರುವ ಮಾನವ ಹತ್ಯೆಗಳನ್ನು ಕಣ್ಣಾರೆ ಕಾಣುತ್ತಿರುವ ಒರಿಸ್ಸಾ, ಬಾಂಗ್ಲಾ, ಅಸ್ಸಾಂನ ಸಾವಿರಾರು ಕಾರ್ಮಿಕರು ಜೀವ ಉಳಿಸಿಕೊಂಡರೆ ಎಲ್ಲಾದರೂ ಬದುಕಬಹುದು ಎಂಬ ನಿರ್ಧಾರಕ್ಕೆ ಬಂದು ಕಟ್ಟಡ ನಿರ್ಮಾಣ ಕೆಲಸ, ಕೈಗಾರಿಕೆ ಹೀಗೆ ಅನ್ಯಕೆಲಸಗಳತ್ತ ಮುಖ ಮಾಡುತ್ತಿದ್ದಾರೆ.
ಶಾಸಕರಾದ ಎಟಿ ರಾಮಸ್ವಾಮಿ, ಹೆಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಳೆ ಸುರಿದರೂ ಲೆಕ್ಕಿಸದೆ ಶಾಸಕರು ಪ್ರತಿಭಟನೆ ನಡೆಸಿದರು. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಕಾಸಸೌಧ ಮೆಟ್ಟಿಲುಗಳ ಮೇಲೆ ಧರಣಿ ಕುಳಿತರು. ಸಿಎಂ ಬರುವ ವರೆಗೂ ಪ್ರತಿಭಟನೆ ಕೈ ಬಿಡಲ್ಲ ಎಂದು ಜೆಡಿಎಸ್ ಶಾಸಕರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ನಿರಂತರವಾಗಿ ಮನುಷ್ಯರ ಮೇಲೆ ಆನೆ ದಾಳಿ ಆಗುತ್ತಿದೆ. ನಿನ್ನೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ನಾವು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಆದರೆ ಸರ್ಕಾರ ಏನೂ ಮಾಡುತ್ತಿಲ್ಲ. ಪರಿಹಾರ ಧನವನ್ನು ಹೆಚ್ಚಿಸುವಂತೆ ನಾವು ಒತ್ತಾಯ ಮಾಡುತ್ತಾ ಬಂದಿದ್ದೇವೆ. ಭರವಸೆ ಕೊಟ್ಟಿದ್ದ ಸರ್ಕಾರ ಹಾಗೆ ಮಾಡಿಲ್ಲ. ಕ್ಷೇತ್ರದಲ್ಲಿ ಜನರು ನಮ್ಮನ್ನು ಪ್ರಶ್ನಿಸುತ್ತಾರೆ ಎಂದರು.
ಆನೆಗಳಿಂದ ರೈತರಿಗೆ ಸಂಕಷ್ಟ
ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿಲ್ಲುವ ಸೂಚನೆಗಳೇ ಕಾಣುತ್ತಿಲ್ಲ, ಮಳೆ ನಿಂತರೂ ಕಾರ್ಮಿಕರು ಗದ್ದೆ, ತೋಟದ ಕೆಲಸಕ್ಕೆ ಹೋಗಲು ಆತಂಕ ಪಡುವ ಸ್ಥಿತಿ ಮುಂದುವರಿದಿದೆ. ಆಲೂರು, ಸಕಲೇಶಪುರ ತಾಲೂಕಿನಲ್ಲಿ 60ರಿಂದ 70 ಆನೆಗಳ ಹಿಂಡು ಪ್ರತ್ಯೇಕ ಗುಂಪುಗಳಾಗಿ ಕಾಫಿತೋಟ, ಗದ್ದೆ, ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳೆದ ಬೆಳೆಯನ್ನು ರಾತ್ರೋರಾತ್ರಿ ತಿಂದು ಇಲ್ಲವೇ ತುಳಿದು ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿ ರೈತರ ಸಂಕಷ್ಟಕ್ಕೆ ಆನೆಗಳು ಕಾರಣವಾಗುತ್ತಿವೆ.
ಪ್ರಸಕ್ತ ಸಾಲಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಜೀವ ತೆತ್ತಿದ್ದಾರೆ. ಅವರ ಕುಟುಂಬಕ್ಕೆ ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ನೀಡಿದೆ. ಇನ್ನಿಬ್ಬರು ದಾಳಿಗೆ ಸಿಲುಕಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸಾ ವೆಚ್ಚದ ಬಿಲ್ ಕೈಸೇರಿದ ಬಳಿಕ ಹಣ ನೀಡಲಾಗುವುದು ಎನ್ನುತ್ತಾರೆ ಡಿಎಫ್ಒ ಬಸವರಾಜು. ಆನೆ ದಾಳಿ, ಗಾಯ ಇಲ್ಲವೇ ಸಾವು, ಪರಿಹಾರ ಇದೆಲ್ಲವನ್ನು ಬದಿಗಿಟ್ಟು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಗಂಭೀರ ಪ್ರಯತ್ನಗಳು ದಶಕಗಳ ಕಾಲದಿಂದಲೂ ಆಗುತ್ತಿಲ್ಲ. ಆನೆ ದಾಳಿಯಿಂದ ಸತ್ತಾಗ ಸಾಂತ್ವನ, ಹೋರಾಟ ಬಿಟ್ಟರೆ ಪುನಃ ಗ್ರಾಮೀಣ ಪ್ರದೇಶದ ಜನರು ಸಮಸ್ಯೆ ಎದುರಿಸುವುದು ತಪ್ಪುತ್ತಿಲ್ಲ.
ಕಾಡಾನೆಗಳ ಚಲನವಲನ ಗಮನಿಸಿ ಕಾಡಿಗೆ ಓಡಿಸಲು ಸಹಕಾರಿಯಾಗುವಂತೆ ಎರಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರಕಾರ ಅನುಮತಿ ನೀಡಿದ್ದು, ಮಳೆಯ ಅಡ್ಡಿಯ ಕಾರಣ ಕಾರ್ಯಾಚರಣೆ ಮುಂದೂಡುತ್ತಲೇ ಇದ್ದು, ಇನ್ನಷ್ಟೇ ದಿನಾಂಕ ನಿಗದಿಯಾಗಬೇಕಿದೆ. ಆಲೂರು, ಸಕಲೇಶಪುರ ತಾಲೂಕಿಗೆ ಸೀಮಿತವಾಗಿದ್ದ ಕಾಡಾನೆ ಸಮಸ್ಯೆ ಬೇಲೂರು, ಅರಕಲಗೂಡು ತಾಲೂಕಿಗೂ ವಿಸ್ತರಿಸಿ ಆ ಭಾಗದ ಜನರ ನಿದ್ದೆಗೆಡಿಸಿದೆ. ಕಾಡಾನೆಗಳು ನಡೆಸುತ್ತಿರುವ ಮಾನವ ಹತ್ಯೆಗಳನ್ನು ಕಣ್ಣಾರೆ ಕಾಣುತ್ತಿರುವ ಒರಿಸ್ಸಾ, ಬಾಂಗ್ಲಾ, ಅಸ್ಸಾಂನ ಸಾವಿರಾರು ಕಾರ್ಮಿಕರು ಜೀವ ಉಳಿಸಿಕೊಂಡರೆ ಎಲ್ಲಾದರೂ ಬದುಕಬಹುದು ಎಂಬ ನಿರ್ಧಾರಕ್ಕೆ ಬಂದು ಕಟ್ಟಡ ನಿರ್ಮಾಣ ಕೆಲಸ, ಕೈಗಾರಿಕೆ ಹೀಗೆ ಅನ್ಯಕೆಲಸಗಳತ್ತ ಮುಖ ಮಾಡುತ್ತಿದ್ದಾರೆ.