ಆ್ಯಪ್ನಗರ

ಕೇಂದ್ರ ಯೋಜನೆ,ಪ್ರಗತಿ, ತೊಡಕುಗಳ ಮಾಹಿತಿಗೆ ಪಿಎಂ ತಾಕೀತು

ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕೇಂದ್ರದ ಯೋಜನೆ ಅನುಷ್ಠಾನ, ಪ್ರಗತಿ, ಲೋಪಗಳು ಮತ್ತು ಸುಧಾರಣೆಯ ಕುರಿತ ಮಾಹಿತಿಯನ್ನು ಒಪ್ಪಿಸುವಂತೆ ಪ್ರಧಾನಿ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಬಿಜೆಪಿ ಸಂಸದರಿಗೆ ತಾಕೀತು ಮಾಡಿದ್ದಾರೆ.

ವಿಕ ಸುದ್ದಿಲೋಕ 12 Sep 2016, 4:00 am

-ಸರಣಿ ಸಭೆಗಳಲ್ಲಿ ಬ್ಯುಸಿಯಾದ ಬಿಜೆಪಿ ಸಂಸದರು-

Vijaya Karnataka Web plan progress difficulties pm ordered to information
ಕೇಂದ್ರ ಯೋಜನೆ,ಪ್ರಗತಿ, ತೊಡಕುಗಳ ಮಾಹಿತಿಗೆ ಪಿಎಂ ತಾಕೀತು


ಬೆಂಗಳೂರು: ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕೇಂದ್ರದ ಯೋಜನೆ ಅನುಷ್ಠಾನ, ಪ್ರಗತಿ, ಲೋಪಗಳು ಮತ್ತು ಸುಧಾರಣೆಯ ಕುರಿತ ಮಾಹಿತಿಯನ್ನು ಒಪ್ಪಿಸುವಂತೆ ಪ್ರಧಾನಿ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಬಿಜೆಪಿ ಸಂಸದರಿಗೆ ತಾಕೀತು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸಂಸದರು ಚುರುಕಾಗಿದ್ದಾರೆ. ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡು ಮಾಹಿತಿ ಪಡೆಯುವುದನ್ನು ಬಿಟ್ಟು ನೇರವಾಗಿ ಸರಕಾರಿ ಕಚೇರಿಗಳಲ್ಲಿ ಸರಣಿ ಸಭೆ ಹಾಗೂ ಜನರಿಂದ ಮಾಹಿತಿ ಪಡೆಯುವ ಕಾರ‍್ಯದಲ್ಲಿ ಮಗ್ನರಾಗಿದ್ದಾರೆ.

ಈ ಮಾಹಿತಿ ಪಟ್ಟಿಯನ್ನೂ ಮುಂದಿನ ಸಂಸತ್‌ ಅಧಿವೇಶನದೊಳಗೆ ತರುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಸಂಸದರು ಸ್ಥಳೀಯ ಸಂಗತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವೂ ಇದೆ. ಅಧಿವೇಶನ ಅವಧಿಯಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಂಸದೀಯ ಸಭೆಯಲ್ಲೂ ಪ್ರಸ್ತಾಪಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಮುಖ್ಯವಾಗಿ, ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಕುರಿತೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಸಚಿವ ಡಿ.ವಿ.ಸದಾನಂದಗೌಡರು ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿನ ರೈಲ್ವೆ ಯೋಜನೆಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ