ಆ್ಯಪ್ನಗರ

ದೇವೇಗೌಡರ ಸೋಲಿಸಲು ಡಿಸಿಎಂ ಪ್ಲಾನ್‌: ಸುರೇಶ್‌ಗೌಡ ಬಾಂಬ್‌

ದೇವೇಗೌಡರನ್ನು ಸೋಲಿಸಲು ಡಿಸಿಎಂ ಜಿ.ಪರಮೇಶ್ವರ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್‌ ಗೌಡ ಹೇಳಿದ್ದಾರೆ.

Vijaya Karnataka 8 May 2019, 5:00 am
ಬೆಂಗಳೂರು: ದೇವೇಗೌಡರನ್ನು ಸೋಲಿಸಲು ಡಿಸಿಎಂ ಜಿ.ಪರಮೇಶ್ವರ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್‌ ಗೌಡ ಹೇಳಿದ್ದಾರೆ.
Vijaya Karnataka Web suresh-gowda


ಸುದ್ದಿಗಾರರ ಜತೆ ಮಾತನಾಡಿ, ''ದೇವೇಗೌಡರ ವಿರುದ್ಧ ಮಧುಗಿರಿ ರಾಜಣ್ಣ, ಸಣ್ಣ ಕೈಗಾರಿಕಾ ಸಚಿವ ಗುಬ್ಬಿ ಶ್ರೀನಿವಾಸ್‌ ಹಾಗೂ ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಗೌರಿಶಂಕರ್‌ ಕೆಲಸ ಮಾಡಿದ್ದಾರೆ,'' ಎಂದು ತಿಳಿಸಿದರು.

''ಮುದ್ದಹನುಮೇಗೌಡರಿಗೆ ಟಿಕೆಟ್‌ ತಪ್ಪಿಸಿದ್ದು, ನಾಮಪತ್ರ ವಾಪಾಸ್‌ ಪಡೆಯಲು ಮುದ್ದುಹನುಮೇಗೌಡರು ಹಣ ಪಡೆದಿದ್ದಾರೆ ಎಂಬ ಆಡಿಯೊ ಬಿಡುಗಡೆ ಮಾಡಿಸಿದ್ದರ ಹಿಂದೆಯೂ ಪರಮೇಶ್ವರ ಕೈವಾಡವಿದೆ,''ಎಂದು ಹೇಳಿದರು.

ಕಾಯಲಿ

ಈ ತಿಂಗಳ 23 ರವರೆಗೆ ಸುರೇಶ್‌ಗೌಡರು ಕಾಯಲಿ, ಆ ದಿನ ಅವರಿಗೆ ಉತ್ತರ ಸಿಗಲಿದೆ.
-ಎಂ.ಬಿ.ಪಾಟೀಲ್‌,ಗೃಹ ಸಚಿವ (ಬೆಂಗಳೂರಲ್ಲಿ)

ಸೋಲುವ ಭೀತಿ
''ತುಮಕೂರಿನಲ್ಲಿ ದೇವೇಗೌಡರು ಗೆಲ್ಲುತ್ತಾರೆ. ಸೋಲುವ ಭೀತಿಯಲ್ಲಿ ಇಂತಹ ಮಾತುಗಳನ್ನು ಹೇಳುತ್ತಿದ್ದಾರೆ,''
-ಜಿ.ಪರಮೇಶ್ವರ್‌, ಡಿಸಿಎಂ(ಕಲಬುರಗಿಯಲ್ಲಿ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ