ಆ್ಯಪ್ನಗರ

ಶಾಲೆಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ಜಾಗೃತಿ

ರಾಜ್ಯದ ಶಾಲೆಗಳ ಒಳಗೆ ಹಾಗೂ ಹೊರಗೆ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವುದು ಏಕೆ ...

Vijaya Karnataka 2 Oct 2019, 5:00 am
ಬೆಂಗಳೂರು: ರಾಜ್ಯದ ಶಾಲೆಗಳ ಒಳಗೆ ಹಾಗೂ ಹೊರಗೆ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವುದು ಏಕೆ ಎಂಬ ಕುರಿತು ಅ.2ರ ಗಾಂಧಿ ಜಯಂತಿ ದಿನದಂದು ಶಾಲಾ ಮಕ್ಕಳ ಮೂಲಕ ಜಾಥಾ, ಬೀದಿ ನಾಟಕಗಳ ಪ್ರದರ್ಶನ ಏರ್ಪಡಿಸುವುದರ ಜತೆಗೆ, ಮಕ್ಕಳಿಂದ ಪ್ರತಿಜ್ಞಾ ಸ್ವೀಕಾರ ಮಾಡಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.
Vijaya Karnataka Web plastic ban awareness
ಶಾಲೆಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ಜಾಗೃತಿ


ಪ್ರಧಾನಿ ನರೇಂದ್ರ ಮೋದಿ ಅವರು 73ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಸಂದರ್ಭದಲ್ಲಿರಾಷ್ಟ್ರವನ್ನು ಪ್ಲಾಸ್ಟಿಕ್‌ ಬಳಕೆ ಮುಕ್ತ ಭಾರತವನ್ನಾಗಿಸುವುದಾಗಿ ಘೋಷಿಸಿದ್ದರು. ಪ್ಲಾಸ್ಟಿಕ್‌ ನಿಷೇಧಿಸಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿಅದರಲ್ಲಿಯಶ ಕಂಡಿಲ್ಲ. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ವಿದ್ಯಾರ್ಥಿಗಳಲ್ಲಿಅರಿವು ಮೂಡಿಸಿದಲ್ಲಿಭವಿಷ್ಯದ ಪ್ರಜೆಗಳಾದರೂ ಪ್ಲಾಸ್ಟಿಕ್‌ ಬಳಕೆಯಿಂದ ದೂರ ಉಳಿಯಲಿದ್ದಾರೆ ಎಂಬ ನಿರೀಕ್ಷೆಯೊಂದಿಗೆ ಇಲಾಖೆ ಈ ಸುತ್ತೋಲೆ ಹೊರಡಿಸಿದೆ.

ಈ ನಿಟ್ಟಿನಲ್ಲಿಪ್ಲಾಸ್ಟಿಕ್‌ ನಿಷೇಧದ ಬಗ್ಗೆ ವಿದ್ಯಾರ್ಥಿಗಳಲ್ಲಿಅರಿವು ಮೂಡಿಸುವುದರ ಜತೆಗೆ, ಶಾಲಾ ಆವರಣದ ಒಳಗೆ ಹಾಗೂ ಹೊರಗೆ ಪ್ಲಾಸ್ಟಿಕ್‌ಮುಕ್ತ ವಾತಾವರಣ ನಿರ್ಮಿಸಲು ವೇದಿಕೆ ಸಿದ್ಧಗೊಳಿಸುವಂತೆ ಸುತ್ತೋಲೆಯಲ್ಲಿನಿರ್ದೇಶನ ನೀಡಲಾಗಿದೆ.

ಇಂದಿನ ಜನಾಂಗವು ಪ್ಲಾಸ್ಟಿಕ್‌ ಬಳಕೆಗೆ ಮಾರು ಹೋಗುತ್ತಿರುವುದರಿಂದ ಅತೀ ಹೆಚ್ಚು ಪ್ರಮಾಣದ ಪ್ಲಾಸ್ಟಿಕ್‌ ಮಣ್ಣನ್ನು ಸೇರಿ ಕೊಳೆಯದೆ ಕ್ರಮೇಣ ಅದು ಪರಿಸರವನ್ನೇ ಹಾನಿಗೀಡು ಮಾಡುತ್ತಿದೆ. ಪ್ಲಾಸ್ಟಿಕ್‌ ಒಂದು ವಿಷಕಾರಿ ವಸ್ತುವಾಗಿರುವುದರಿಂದ ಅದರ ವಿಲೇವಾರಿ ಬಹಳ ಕಠಿಣ. ಇದು ಪರಿಸರಕ್ಕೆ ಮಾತ್ರವಲ್ಲದೆ, ಪಶು-ಪಕ್ಷಿ, ಜಾನುವಾರುಗಳ ಜೀವಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳುವುದರ ಜತೆಗೆ, ಶಾಲಾ ಮಕ್ಕಳಲ್ಲೂಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರದಿಂದ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರಾಥಮಿಕ) ಎಂ.ಪಿ. ಮಾದೇಗೌಡ ಈ ಸುತ್ತೋಲೆ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ