ಮಂಜುನಾಥ್ ನಾಗಲೀಕರ್
ಬೆಂಗಳೂರು: ತಂಪು ಪಾನೀಯ ಮೌಂಟೇನ್ ಡ್ಯೂ ಬಾಟಲಿಯಲ್ಲಿ ಪ್ಲಾಸ್ಟಿಕ್ ಕಾಗದದ ತುಂಡು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಉತ್ಪಾದಕ ಕಂಪನಿ ಪೆಪ್ಸಿಕೋ, ಸರಬರಾಜುದಾರ ಹಾಗೂ ಬಾಟಲಿ ಮಾರಾಟ ಮಾಡಿದ ಹೊಟೇಲ್ ಮಾಲೀಕ ಜಂಟಿಯಾಗಿ ಗ್ರಾಹಕನಿಗೆ 27,015 ರೂ. ಪರಿಹಾರ ನೀಡಬೇಕು ಎಂದು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ಆದೇಶ ನೀಡಿದೆ.
ಕಲಬುರಗಿಯ ಕಲ್ಯಾಣ ನಗರ ನಿವಾಸಿ ಚಂದ್ರಶೇಖರ್ ಎಂಬುವರು ಶರಣಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ವಿಜಯಲಕ್ಷ್ಮೇ ಹೊಟೇಲ್ನಲ್ಲಿ 2015ರ ಡಿ.26ರಂದು 15 ರೂ. ಪಾವತಿಸಿ 200 ಎಂ.ಎಲ್ನ ಮೌಂಟೆನ್ ಡ್ಯೂ ತೆಗೆದುಕೊಂಡಿದ್ದರು. ಖರೀದಿ ಕುರಿತು ಹೊಟೇಲ್ನಿಂದ ಬಿಲ್ ಕೂಡಾ ತೆಗೆದುಕೊಂಡಿದ್ದರು. ಆದರೆ, ಬಾಟಲಿಯ ಮುಚ್ಚಳ ತೆರೆಯುವ ಮೊದಲೇ ಅದರಲ್ಲಿ ಪ್ಲಾಸ್ಟಿಕ್ ಕಾಗದ ಕಂಡು ಬಂದಿತ್ತು. ಇದರಿಂದ ಆತಂಕಗೊಂಡ ಅವರು, ಒಂದು ವೇಳೆ ಪ್ಲಾಸ್ಟಿಕ್ ನೋಡದೆ ಸೇವಿಸಿದ್ದರೆ ಅನಾರೋಗ್ಯ ಉಂಟಾಗುತ್ತಿತ್ತು. ಹೀಗಾಗಿ, ಉತ್ಪಾದಕ ಕಂಪನಿ, ಸರಬರಾಜುದಾರ ಹಾಗೂ ಹೊಟೇಲ್ ಮಾಲೀಕರನ್ನು ಪ್ರತಿವಾದಿಗಳನ್ನು ಮಾಡಿ 2016ರ ಫೆ.12ರಂದು ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಸೇವೆಯಲ್ಲಿ ಲೋಪ, ಅನಾರೋಗ್ಯದ ಅಪಾಯ, ಮಾನಸಿಕ ತೊಂದರೆ ಹಾಗೂ ಕಾನೂನು ಪ್ರಕ್ರಿಯೆ ಶುಲ್ಕವಾಗಿ 5.15 ಲಕ್ಷ ರೂ. ಪರಿಹಾರ ಕೋರಿದ್ದರು.
ಕಂಪನಿಯ ವಾದ:
ಅರ್ಜಿ ವಿಚಾರಣೆ ನಡೆಸಿದ ವೇದಿಕೆಗೆ ಪತ್ರದ ಮೂಲಕ ವಾದ ಮಂಡಿಸಿದ ಪೆಪ್ಸಿಕೋ ಕಂಪನಿ, ಮೌಂಟೇನ್ ಡ್ಯೂ ಸೇರಿದಂತೆ ಇನ್ನಿತರ ಉತ್ಪನ್ನಗಳು ಸ್ವಯಂಚಾಲಿತ ಘಟಕಗಳಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಸೂಕ್ತ ಗುಣಮಟ್ಟ ಕಾಪಾಡಿಕೊಂಡು ಅತ್ಯಂತ ಕಾಳಜಿಯಿಂದ ಬಾಟಲಿಯಲ್ಲಿ ಯಾವುದೇ ಹೊರಗಿನ ವಸ್ತು ಸೇರದಂತೆ ನೋಡಲಾಗುತ್ತದೆ. ಹೀಗಾಗಿ, ಬಾಟಲಿಯಲ್ಲಿ ಬೇರೆ ವಸ್ತು ಸೇರಲು ಸಾಧ್ಯವಿಲ್ಲ. ಅದನ್ನು ಉದ್ದೇಶಪೂರ್ಕವಾಗಿ ಹಾಕಿರಬಹುದು. ಅಲ್ಲದೇ, ಪಾನೀಯದ ಗರಿಷ್ಠ ದರ 10 ರೂ. ಆಗಿದೆ. ಆದರೆ, 15 ರೂ. ಬಿಲ್ ಅಸಲಿಯತ್ತಿನ ಬಗ್ಗೆ ಅನುಮಾನವಿದೆ. ಗ್ರಾಹಕ ಅದನ್ನು ಸೇವಿಸಿಲ್ಲ. ಹೀಗಾಗಿ, ಪರಿಹಾರಕ್ಕೆ ಅರ್ಹವಲ್ಲ ಎಂದು ತಿಳಿಸಿತ್ತು.
ವಿಚಾರಣೆ ವೇಳೆ ಬಾಟಲಿ ಮಾರಾಟ ಮಾಡಿದ್ದ ಹೊಟೇಲ್ ಮಾಲೀಕರು ಗ್ರಾಹಕರ ವೇದಿಕೆಗೆ ಹಾಜರಾಗಿ ಯಾವುದೇ ವಾದ ಮಂಡಿಸಲಿಲ್ಲ.
ಈ ವೇಳೆ ವೇದಿಕೆಯು ದೂರುದಾರರು ಹಾಜರುಪಡಿಸಿದ್ದ ಬಾಟಲಿಯನ್ನು ಪರಿಶೀಲಿಸಿದಾಗ, ''ಬಾಟಲಿಯ ಸೀಲ್ ಪರಿಪೂರ್ಣವಾಗಿ ಮುಚ್ಚಿದ ಸ್ಥಿತಿಯಲ್ಲಿದೆ. ಅದರ ಮುಚ್ಚುವಿಕೆಯ ಕುರಿತು ಯಾವುದೇ ತಕರಾರು ಇಲ್ಲ. ಆದರೆ, ಅದರೊಳಗಿನ ವಸ್ತುವಿನ ಬಗ್ಗೆ ತಕರಾರು ಇದೆ. ಬಾಟಲಿಯಲ್ಲಿ ಬರೀ ಕಣ್ಣಿಗೆ ಪ್ಲಾಸ್ಟಿಕ್ ಕಾಗದ ಕಾಣಿಸುತ್ತದೆ. ಅದನ್ನು ನೋಡಿ ಎಚ್ಚರಗೊಂಡ ದೂರುದಾರ ಸೇವಿಸಿಲ್ಲ. ಅವರು ಸೇವಿಸಿಲ್ಲ ಎಂದ ಮಾತ್ರಕ್ಕೆ ಅರ್ಜಿಯನ್ನು ವಜಾಗೊಳಿಸಲು ಬರುವುದಿಲ್ಲ. ಹೀಗಾಗಿ, ಬಾಟಲಿಯಲ್ಲಿ ಪಾನೀಯ ತುಂಬುವ ವೇಳೆ ಲೋಪ ಇರುವುದು ಕಂಡು ಬಂದಿದೆ. ಹೀಗಾಗಿ, ಉತ್ಪಾದಕರು, ಸರಬರಾಜುದಾರರು ಮತ್ತು ರಿಟೇಲ್ ಮಾರಾಟಗಾರರು ಜಂಟಿಯಾಗಿ ದೂರುದಾರರಿಗೆæ ಪರಿಹಾರ ನೀಡಬೇಕು,'' ಎಂದು ಆದೇಶ ನೀಡಿದೆ.
ಬೆಂಗಳೂರು: ತಂಪು ಪಾನೀಯ ಮೌಂಟೇನ್ ಡ್ಯೂ ಬಾಟಲಿಯಲ್ಲಿ ಪ್ಲಾಸ್ಟಿಕ್ ಕಾಗದದ ತುಂಡು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಉತ್ಪಾದಕ ಕಂಪನಿ ಪೆಪ್ಸಿಕೋ, ಸರಬರಾಜುದಾರ ಹಾಗೂ ಬಾಟಲಿ ಮಾರಾಟ ಮಾಡಿದ ಹೊಟೇಲ್ ಮಾಲೀಕ ಜಂಟಿಯಾಗಿ ಗ್ರಾಹಕನಿಗೆ 27,015 ರೂ. ಪರಿಹಾರ ನೀಡಬೇಕು ಎಂದು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ಆದೇಶ ನೀಡಿದೆ.
ಕಲಬುರಗಿಯ ಕಲ್ಯಾಣ ನಗರ ನಿವಾಸಿ ಚಂದ್ರಶೇಖರ್ ಎಂಬುವರು ಶರಣಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ವಿಜಯಲಕ್ಷ್ಮೇ ಹೊಟೇಲ್ನಲ್ಲಿ 2015ರ ಡಿ.26ರಂದು 15 ರೂ. ಪಾವತಿಸಿ 200 ಎಂ.ಎಲ್ನ ಮೌಂಟೆನ್ ಡ್ಯೂ ತೆಗೆದುಕೊಂಡಿದ್ದರು. ಖರೀದಿ ಕುರಿತು ಹೊಟೇಲ್ನಿಂದ ಬಿಲ್ ಕೂಡಾ ತೆಗೆದುಕೊಂಡಿದ್ದರು. ಆದರೆ, ಬಾಟಲಿಯ ಮುಚ್ಚಳ ತೆರೆಯುವ ಮೊದಲೇ ಅದರಲ್ಲಿ ಪ್ಲಾಸ್ಟಿಕ್ ಕಾಗದ ಕಂಡು ಬಂದಿತ್ತು. ಇದರಿಂದ ಆತಂಕಗೊಂಡ ಅವರು, ಒಂದು ವೇಳೆ ಪ್ಲಾಸ್ಟಿಕ್ ನೋಡದೆ ಸೇವಿಸಿದ್ದರೆ ಅನಾರೋಗ್ಯ ಉಂಟಾಗುತ್ತಿತ್ತು. ಹೀಗಾಗಿ, ಉತ್ಪಾದಕ ಕಂಪನಿ, ಸರಬರಾಜುದಾರ ಹಾಗೂ ಹೊಟೇಲ್ ಮಾಲೀಕರನ್ನು ಪ್ರತಿವಾದಿಗಳನ್ನು ಮಾಡಿ 2016ರ ಫೆ.12ರಂದು ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಸೇವೆಯಲ್ಲಿ ಲೋಪ, ಅನಾರೋಗ್ಯದ ಅಪಾಯ, ಮಾನಸಿಕ ತೊಂದರೆ ಹಾಗೂ ಕಾನೂನು ಪ್ರಕ್ರಿಯೆ ಶುಲ್ಕವಾಗಿ 5.15 ಲಕ್ಷ ರೂ. ಪರಿಹಾರ ಕೋರಿದ್ದರು.
ಕಂಪನಿಯ ವಾದ:
ಅರ್ಜಿ ವಿಚಾರಣೆ ನಡೆಸಿದ ವೇದಿಕೆಗೆ ಪತ್ರದ ಮೂಲಕ ವಾದ ಮಂಡಿಸಿದ ಪೆಪ್ಸಿಕೋ ಕಂಪನಿ, ಮೌಂಟೇನ್ ಡ್ಯೂ ಸೇರಿದಂತೆ ಇನ್ನಿತರ ಉತ್ಪನ್ನಗಳು ಸ್ವಯಂಚಾಲಿತ ಘಟಕಗಳಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಸೂಕ್ತ ಗುಣಮಟ್ಟ ಕಾಪಾಡಿಕೊಂಡು ಅತ್ಯಂತ ಕಾಳಜಿಯಿಂದ ಬಾಟಲಿಯಲ್ಲಿ ಯಾವುದೇ ಹೊರಗಿನ ವಸ್ತು ಸೇರದಂತೆ ನೋಡಲಾಗುತ್ತದೆ. ಹೀಗಾಗಿ, ಬಾಟಲಿಯಲ್ಲಿ ಬೇರೆ ವಸ್ತು ಸೇರಲು ಸಾಧ್ಯವಿಲ್ಲ. ಅದನ್ನು ಉದ್ದೇಶಪೂರ್ಕವಾಗಿ ಹಾಕಿರಬಹುದು. ಅಲ್ಲದೇ, ಪಾನೀಯದ ಗರಿಷ್ಠ ದರ 10 ರೂ. ಆಗಿದೆ. ಆದರೆ, 15 ರೂ. ಬಿಲ್ ಅಸಲಿಯತ್ತಿನ ಬಗ್ಗೆ ಅನುಮಾನವಿದೆ. ಗ್ರಾಹಕ ಅದನ್ನು ಸೇವಿಸಿಲ್ಲ. ಹೀಗಾಗಿ, ಪರಿಹಾರಕ್ಕೆ ಅರ್ಹವಲ್ಲ ಎಂದು ತಿಳಿಸಿತ್ತು.
ವಿಚಾರಣೆ ವೇಳೆ ಬಾಟಲಿ ಮಾರಾಟ ಮಾಡಿದ್ದ ಹೊಟೇಲ್ ಮಾಲೀಕರು ಗ್ರಾಹಕರ ವೇದಿಕೆಗೆ ಹಾಜರಾಗಿ ಯಾವುದೇ ವಾದ ಮಂಡಿಸಲಿಲ್ಲ.
ಈ ವೇಳೆ ವೇದಿಕೆಯು ದೂರುದಾರರು ಹಾಜರುಪಡಿಸಿದ್ದ ಬಾಟಲಿಯನ್ನು ಪರಿಶೀಲಿಸಿದಾಗ, ''ಬಾಟಲಿಯ ಸೀಲ್ ಪರಿಪೂರ್ಣವಾಗಿ ಮುಚ್ಚಿದ ಸ್ಥಿತಿಯಲ್ಲಿದೆ. ಅದರ ಮುಚ್ಚುವಿಕೆಯ ಕುರಿತು ಯಾವುದೇ ತಕರಾರು ಇಲ್ಲ. ಆದರೆ, ಅದರೊಳಗಿನ ವಸ್ತುವಿನ ಬಗ್ಗೆ ತಕರಾರು ಇದೆ. ಬಾಟಲಿಯಲ್ಲಿ ಬರೀ ಕಣ್ಣಿಗೆ ಪ್ಲಾಸ್ಟಿಕ್ ಕಾಗದ ಕಾಣಿಸುತ್ತದೆ. ಅದನ್ನು ನೋಡಿ ಎಚ್ಚರಗೊಂಡ ದೂರುದಾರ ಸೇವಿಸಿಲ್ಲ. ಅವರು ಸೇವಿಸಿಲ್ಲ ಎಂದ ಮಾತ್ರಕ್ಕೆ ಅರ್ಜಿಯನ್ನು ವಜಾಗೊಳಿಸಲು ಬರುವುದಿಲ್ಲ. ಹೀಗಾಗಿ, ಬಾಟಲಿಯಲ್ಲಿ ಪಾನೀಯ ತುಂಬುವ ವೇಳೆ ಲೋಪ ಇರುವುದು ಕಂಡು ಬಂದಿದೆ. ಹೀಗಾಗಿ, ಉತ್ಪಾದಕರು, ಸರಬರಾಜುದಾರರು ಮತ್ತು ರಿಟೇಲ್ ಮಾರಾಟಗಾರರು ಜಂಟಿಯಾಗಿ ದೂರುದಾರರಿಗೆæ ಪರಿಹಾರ ನೀಡಬೇಕು,'' ಎಂದು ಆದೇಶ ನೀಡಿದೆ.