ಆ್ಯಪ್ನಗರ

ಕೊರೊನಾ ಸೋಂಕಿತರನ್ನು ಕಳಂಕಿತರಂತೆ ನೋಡಬೇಡಿ, ಗೌರವದಿಂದ ಕಾಣಿ: ಡಾ.ಸುಧಾಕರ್ ಮನವಿ

ಕೊರೊನಾ ಸೋಂಕಿತರನ್ನು ಕಳಂಕಿತರಂತೆ ನೋಡುತ್ತಿರುವುದು ನಾಗರೀಕ ಸಮಾಜದ ದುರಾದೃಷ್ಟವಾಗಿದೆ. ದಯವಿಟ್ಟು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರನ್ನು ಈ ಸಮಾಜ ಗೌರವದಿಂದ ಕಾಣಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಹೇಳಿದರು.

Vijaya Karnataka Web 10 Aug 2020, 10:36 pm
ಬೆಂಗಳೂರು: ಕೊರೊನಾ ಸೋಂಕಿತರನ್ನು ಕಳಂಕಿತರಂತೆ ನೋಡುತ್ತಿರುವುದು ನಾಗರೀಕ ಸಮಾಜದ ದುರಾದೃಷ್ಟವಾಗಿದೆ. ಅದೊಂದು ಜಾಗತಿಕವಾಗಿ ಕಾಡುತ್ತಿರುವ ಸಾಮಾನ್ಯ ಕಾಯಿಲೆಯಾಗಿದ್ದು, ಯಾರಿಗೇ ಬೇಕಾದರೂ ಬರಬಹುದು. ದಯವಿಟ್ಟು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರನ್ನು ಈ ಸಮಾಜ ಗೌರವದಿಂದ ಕಾಣಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಹೇಳಿದರು.
Vijaya Karnataka Web please give respect to coronavirus infected persons says dr k sudhakar
ಕೊರೊನಾ ಸೋಂಕಿತರನ್ನು ಕಳಂಕಿತರಂತೆ ನೋಡಬೇಡಿ, ಗೌರವದಿಂದ ಕಾಣಿ: ಡಾ.ಸುಧಾಕರ್ ಮನವಿ


ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಆನ್‌ಲೈನ್ ಮೂಲಕ ಹಮ್ಮಿಕೊಂಡಿದ್ದ "ಕೋವಿಡ್ ಕಳಂಕ: ಚಿಂತನಾ-ಮಂಥನಾ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು, ಗುಣಮುಖರಾದವರನ್ನು ಗೌರವದಿಂದ ಕಾಣಬೇಕು, ಅದೊಂದು ಕಳಂಕ ಎಂಬಂತೆ ಯಾರು ಸಹ ನಡೆದುಕೊಳ್ಳಬಾರದು, ಈ ಕಳಂಕವನ್ನು ಹೋಗಲಾಡಿಸುವುದರಲ್ಲಿ ಸಮಾಜದ ಪಾತ್ರ ಅತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಜಯದೇವ ಹೃದ್ರೋಗ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಮಂಜುನಾಥ್ ಮಾತನಾಡಿ, ಈ ರೋಗದಿಂದ ಸತ್ತವರಿಗಿಂತ, ಈ ರೋಗದ ಭಯದಿಂದ ಸತ್ತವರು ಹೆಚ್ಚಾಗಿರುವುದು ಈ ಸಮಾಜದ ಮನಸ್ಥಿತಿಯನ್ನು ತೋರಿಸುತ್ತದೆ. ಇದೊಂದು ಸಾಮಾನ್ಯವಾಗಿ ಬಂದು ಹೋಗುವ ಕಾಯಿಲೆಯಾಗಿದ್ದು, ಯಾರು ಸಹ ಭಯಪಡಬಾರದು. ಜನರಲ್ಲಿ ಧೈರ್ಯ ತುಂಬುವ ಸಕರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವ ದೊಡ್ಡ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ತಗ್ಗಿದ ಕೊರೊನಾ..! ಹೊಸ‌ ಪಾಸಿಟಿವ್‌ ಕೇಸ್‌ನಲ್ಲಿ‌ ಇಳಿಕೆ; ಲಕ್ಷದ ಗಡಿಯಲ್ಲಿ ಡಿಸ್ಚಾರ್ಜ್‌

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕೋವಿಡ್ ಕಳಂಕವನ್ನು ಹೋಗಲಾಡಿಸುವುದು ಹೇಗೆ ಎನ್ನುವುದಾಗಿದ್ದು, ರೋಗವನ್ನಾಗಲಿ ಅಥವಾ ಸೋಂಕಿತರನ್ನಾಗಲಿ ವೈಭವೀಕರಿಸುವ ಅಗತ್ಯವಿಲ್ಲ. ಗುಣಮುಖರಾದಾಗ ಅವರು ಎಲ್ಲರಂತೆಯೇ ಆರೋಗ್ಯರು ಎಂಬುದನ್ನು ಮರೆತು ಮಾನವೀಯತೆ ಕಳೆದುಕೊಳ್ಳಬಾರದು ಎಂದರು.

ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್‌ ಮಾತನಾಡಿ ತಾವು ಸಹ ಈ ಸೋಂಕಿಗೆ ತುತ್ತಾದ ಅನುಭವಗಳನ್ನು ಹಂಚಿಕೊಂಡು ಇದೊಂದು ಸಾಮಾನ್ಯ ಕಾಯಿಲೆಯನ್ನು ಪೆಡಂಭೂತವಾಗಿ ಚಿತ್ರಿಸಲಾಗುತ್ತಿದೆ, ಇದರಿಂದ ವಾಸಿಯಾದ ಅನೇಕ ವಿಐಪಿಗಳನ್ನು ಹಾಗೂ ಸಾಮಾನ್ಯ ಜನರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ತಗ್ಗದ ಕೊರೊನಾ ವೇಗ..! 5,985 ಪಾಸಿಟಿವ್‌ ಕೇಸ್‌, ಲಕ್ಷದ ಗಡಿಯಲ್ಲಿ ಗುಣಮಖ

ಈ ಆನ್‌ಲೈನ್ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರಾದ ಶ್ರೀಮತಿ ತಾರಾ, ರಶ್ಮಿಕಾ, ಪ್ರಕೃತಿ ಸೇರಿ ಮಾಧ್ಯಮ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಕೋವಿಡ್ ಕಳಂಕವನ್ನು ಸ್ವತಃ ಅನುಭವಿಸಿರುವ ಹಾಗೂ ಗುಣವಾಗಿರುವ ಭಗವಾನ್ ಹಾಗೂ ವೆಂಕಟರಾಮ್ ಅವರು ಸೇರಿ ಇತರರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ರಾಜ್ಯದಲ್ಲಿ ಕೊರೊನಾ ನಾಗಾಲೋಟ..! 7 ಸಾವಿರ ಸಮೀಪ ಹೊಸ ಕೇಸ್‌; ಚೇತರಿಕೆಯಲ್ಲಿ ಏರಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ