ಆ್ಯಪ್ನಗರ

ಅಧಿವೇಶನದಲ್ಲಿ ಮಹಿಳಾ ಸದಸ್ಯರ ಆಕ್ರೋಶ: 'ರೇಪ್‌' ಪದ ಬಳಸದಂತೆ ಶಾಸಕಿ ಮನವಿ!

ಮೈಸೂರಿನಲ್ಲಿ ಜರುಗಿದ ಸಾಮೂಹಿಕ ಅತ್ಯಾಚಾರ ಪ್ರಕರಣ ಬುಧವಾರ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯ್ತು. ಸಿದ್ದರಾಮಯ್ಯ ಸೇರಿ ವಿರೋಧ ಪಕ್ಷದ ನಾಯಕರು ಸರಕಾರದ ವಿರುದ್ಧ ಮುಗಿಬಿದ್ದಿದ್ದರು. ಇನ್ನೊಂದೆಡೆ ಶಾಸಕಿಯರು ಪಕ್ಷ ಭೇದ ಮರೆತು ಅತ್ಯಾಚಾರ ಪ್ರಕರಣವನ್ನು ಖಂಡಿಸಿದರು. 'ರೇಪ್‌' ಪದ ಮನವಿ ಮಾಡಿದರು.

Vijaya Karnataka 23 Sep 2021, 1:34 pm

ಹೈಲೈಟ್ಸ್‌:

  • ಸಾಂಸ್ಕೃತಿಕನಗರಿ ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ
  • ಪಕ್ಷಾತೀತವಾಗಿ ಅತ್ಯಾಚಾರವನ್ನು ಖಂಡಿಸಿದ ಮಹಿಳಾ ಸದಸ್ಯರ
  • ರೇಪ್‌ ಪದ ಬಳಸದಂತೆ ಸರಕಾರಕ್ಕೆ ಮನವಿ ಮಾಡಿದ ಶಾಸಕಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web roopakala mla
ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಇತ್ತೀಚೆಗೆ ಜರುಗಿದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಆರೋಪಿಸಿ ಮಹಿಳಾ ಶಾಸಕರು ಸರಕಾರದ ಮೇಲೆ ಮುಗಿಬಿದ್ದರು. ರಾಜ್ಯದ ನಾನಾ ಕಡೆ ನಡೆದ ಅತ್ಯಾಚಾರಗಳನ್ನು ಖಂಡಿಸಿದರು. ಶಾಸಕಿ ರೂಪಕಲಾ ಮತ್ತು ಅಂಜಲಿ ಗದ್ದದಿತರಾಗಿ ಮಾತನಾಡಿದರು.
'ರೇಪ್‌' ಪದ ಬಳಸಬೇಡಿ:

'ರೇಪ್‌' ಪದ ಬಳಕೆ ಪುರುಷರಿಗೆ ಸಾಮಾನ್ಯ. ಮಹಿಳೆಯಾಗಿ 'ರೇಪ್‌' ಎಂಬ ಪದ ತೀವ್ರ ನೋವು ಕೊಡುತ್ತದೆ. ಸದನದಲ್ಲಿ ಯಾರೂ ಪದಬಳಕೆ ಮಾಡಬೇಡಿ ಎಂದು ಕೆಜಿಎಫ್‌ ಶಾಸಕಿ ರೂಪಕಲಾ ಎಂ ಗದ್ಗದಿತರಾದರು. ಅತ್ಯಾಚಾರಿಗಳಿಗೆ ಚಪ್ಪಲಿ ಸೇವೆ ಮಾಡುವಷ್ಟು ರಕ್ತ ಕುದಿಯುತ್ತಿದೆ. ಚಿತ್ರದುರ್ಗದ ಮಹಿಳೆಯೋರ್ವಳಿಗೆ ದೈಹಿಕ ಹಿಂಸೆ ನೀಡಿ ಸಿಗರೇಟ್‌ನಿಂದ ಸುಟ್ಟ ವಿಡಿಯೊ ವೈರಲ್‌ ಆಗಿತ್ತು. ಇವೆಲ್ಲವೂ ತಲೆ ತಗ್ಗಿಸುವ ವಿಷಯ. ಪಕ್ಷಾತೀತವಾಗಿ ಖಂಡಿಸಬೆಕು.

ರಾಜಕೀಯ ಬೇಡ: ಸೌಮ್ಯರೆಡ್ಡಿ
'ಯತ್ರ ನಾರಿ ಪೂಜ್ಯಂತೆ, ತತ್ರ ರಮಂತೆ ದೇವತಾ'' ಶ್ಲೋಕದ ಪ್ರಕಾರ ಮಹಿಳೆಗೆ ಗೌರವ ಸಲ್ಲಬೇಕು. ಆನ್‌ಲೈನ್‌ನಲ್ಲಿ ನಡೆಯುವ ಮಹಿಳೆಯರ ದೌರ್ಜನ್ಯ ಪ್ರಕರಣ ತಡೆಗೂ ಕಾನೂನು ಬೇಕಿದೆ. ನಿರ್ಭಯ ನಿಧಿ ಬಳಸಿ ಸಿಸಿ ಕ್ಯಾಮೆರಾ ಅಳವಡಿಸುವ ಕೆಲಸವಾಗಬೇಕು. ಮೈಸೂರು ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರು 6 ಗಂಟೆ ನಂತರ ವಿಹರಿಸುವುದನ್ನು ನಿರ್ಬಂಧಿಸಿದ್ದ ಕುಲಪತಿಯನ್ನು ಅನುಮಾನತು ಮಾಡಿ. ಆ ನಿರ್ಬಂಧ ಗಂಡುಮಕ್ಕಳಿಗೆ ಅನ್ವಯಿಸಿ ಎಂದು ಶಾಸಕಿ ಸೌಮ್ಯರೆಡ್ಡಿ ಹೇಳಿದರು.

ಸಮರ್ಥನೆ ಅನಗತ್ಯ: ಅಂಜಲಿ ನಿಂಬಾಳ್ಕರ್‌

ಅತ್ಯಾಚಾರ ಪ್ರಕರಣಗಳನ್ನು ಅಂಕಿ ಅಂಶಗಳ ಸಮೇತ ಸರಕಾರ ಸಮರ್ಥಿಸಿಕೊಳ್ಳುವುದು ಎಷ್ಟು ಸೂಕ್ತ. ಅತ್ಯಾಚಾರ ಮಹಿಳಾ ಜೀವನಕ್ಕೆ ಸಂಬಂಧಿಸಿದ್ದೇ ವಿನಹ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ನಿರ್ಭಯ ಅಪರಾಧಿಗಳಿಗೆ ಶಿಕ್ಷ ನೀಡಿದಂತೆ ರಾಜ್ಯದಲ್ಲಿ ಕಠಿಣ ಕಾನೂನು ಜಾರಿ ಮಾಡಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್‌ ಮನವಿ ಮಾಡಿದರು.

ಮೈಸೂರು ಸಾಮೂಹಿಕ ಅತ್ಯಾಚಾರ : ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಸಂತ್ರಸ್ತೆ

ಮಹಿಳಾ ಠಾಣೆ ಹೆಚ್ಚಿಸಿ ಎಂದ ಲಕ್ಷ್ಮಿ ಹೆಬ್ಬಾಳ್ಕರ್‌

ಪ್ರತಿ ತಾಲೂಕಿಗೆ ಒಂದರಂತೆ ಮಹಿಳಾ ಪೊಲೀಸ್‌ ಠಾಣೆಗಳನ್ನು ತೆರೆಯುವ ಮೂಲಕ ಮಹಿಳಾ ಸುರಕ್ಷತೆಗೆ ಆಧ್ಯತೆ ನೀಡಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಆಗ್ರಹಿಸಿದರು.

ಸಂಕಟ ತರುತ್ತಿದೆ!
ಸಣ್ಣ ಸಣ್ಣ ಮಕ್ಕಳ ಮೇಲೆಯೂ ಅತ್ಯಾಚಾರ ನಡೆಸುತ್ತಿರುವುದು ಬೆಳಕಿಗೆ ಬರುತ್ತಿದೆ. ಇದು ಒಬ್ಬ ತಾಯಿಯಾದ ನನಗೆ ವಿಷಯ ಕೇಳಿದರೆ ಸಂಕಟ ಬರುತ್ತಿದೆ. ಕಾನೂನು ಬಿಗಿ ಮಾಡುವ ಅಶ್ಯಕತೆ ಇದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

ಘಟನೆ ವಿವರ!
ಆ.24 ರಂದು ವಾಯುವಿಹಾರಕ್ಕೆ ಚಾಮುಂಡಿಬೆಟ್ಟದ ತಪ್ಪಲಿಗೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿತ್ತು. ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಒಟ್ಟು 5 ಮಂದಿಯನ್ನು ಆ.28 ರಂದು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು.

ಈ ವೇಳೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದಲ್ಲಿಒಟ್ಟು 6 ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದರೆ ಎಂದು ತಿಳಿದು ಬಂತು. ಬಳಿಕ ಆ.31 ರಂದು ತಮಿಳುನಾಡಿನಲ್ಲಿ 6ನೇ ಆರೋಪಿಯನ್ನು ಬಂಧಿಸಲಾಗಿತ್ತು. ಆತನನ್ನು ವಿಚಾರಣೆ ನಡೆಸಿದ ಸಂದರ್ಭ ಒಟ್ಟು 7 ಆರೋಪಿಗಳು ಭಾಗಿಯಾಗಿರುವ ಕುರಿತು ಮಾಹಿತಿ ಸಿಕ್ಕಿದ್ದು, ಬಳಿಕ 7ನೇ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ