ಆ್ಯಪ್ನಗರ

PM Modi: ಕಾಂಗ್ರೆಸ್ ಪಕ್ಷ ನನ್ನ ಸಮಾಧಿಗೆ ಗುಂಡಿ ತೋಡುವ ಕನಸು ಕಾಣ್ತಿದೆ: ಪ್ರಧಾನಿ ಮೋದಿ ಗುಡುಗು

Bengaluru - Mysuru Expressway: ಬಹು ಚರ್ಚಿತ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಮತ್ತೊಮ್ಮೆ ಅಭಿವೃದ್ಧಿ ಮಂತ್ರ ಪಠಿಸಿದ್ದಾರೆ. ಮಾರ್ಚ್ 12, ಭಾನುವಾರ ಮಂಡ್ಯದಲ್ಲಿ ಎಕ್ಸ್‌ಪ್ರೆಸ್ ವೇ ಹೆದ್ದಾರಿ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ ಅವರಿಗೆ ಸಾಂಸ್ಕೃತಿಕ ಕಲಾ ತಂಡಗಳು ಭವ್ಯ ಸ್ವಾಗತ ಕೋರಿದವು. ಮಂಡ್ಯದಲ್ಲಿ ರೋಡ್ ಶೋ ಕೂಡಾ ನಡೆಸಿದ ಪ್ರಧಾನಿ ಮೋದಿ ಸಕ್ಕರೆ ನಾಡಿನಲ್ಲಿ ಸಂಭ್ರಮಕ್ಕೆ ಸಾಕ್ಷಿಯಾದರು.

Authored byದಿಲೀಪ್ ಡಿ. ಆರ್. | Vijaya Karnataka Web 12 Mar 2023, 4:45 pm

ಹೈಲೈಟ್ಸ್‌:

  • ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ
  • ನನ್ನ ಸಮಾಧಿಗೆ ಗುಂಡಿ ತೋಡುವ ಕನಸನ್ನು ಕಾಂಗ್ರೆಸ್ ಪಕ್ಷ ಕಾಣುತ್ತಿದೆ
  • ಆದರೆ ನಾನು ಮಾತ್ರ ಅಭಿವೃದ್ದಿ ಕಾರ್ಯಗಳತ್ತ ಗಮನ ಹರಿಸಿದ್ದೇನೆ ಎಂದ ಪ್ರಧಾನಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web PM Modi
PM Modi (File Pic)
ಮಂಡ್ಯ: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಆಗಿದೆ. ರಾಜ್ಯಾದ್ಯಂತ ಭಾರೀ ಚರ್ಚೆಯಲ್ಲಿ ಇರುವ ಈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ತಾಯಿ ಭುವನೇಶ್ವರಿಗೆ ನಮನ ಸಲ್ಲಿಸುವ ಮೂಲಕ ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದರು. ಕಾಂಗ್ರೆಸ್ ಪಕ್ಷದ ವಿರುದ್ಧ ಅಬ್ಬರಿಸಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು ಇಂತಿವೆ:
Bengaluru - Mysuru Expressway Inauguration: ಮೈಸೂರು ಬೆಂಗಳೂರು ದಶಪಥಕ್ಕೆ ಪ್ರಧಾನಿ ಮೋದಿ ಅಧಿಕೃತ ಚಾಲನೆ; ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ವೇ
  • ಆದಿ ಚುಂಚನಗಿರಿ ಹಾಗೂ ಮೇಲುಕೋಟೆ ಪುಣ್ಯ ಕ್ಷೇತ್ರಗಳನ್ನು ಸ್ಮರಿಸಿದ ಪ್ರಧಾನಿ ಮೋದಿ
  • ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನ ನೋಡಿ ಕಂಗಾಲಾಗಿರುವ ಕಾಂಗ್ರೆಸ್ ಪಕ್ಷ ಮೋದಿಯವರ ವಿರುದ್ಧ ಕೆಲಸ ಮಾಡುತ್ತಿದೆ
  • ಪ್ರಧಾನಿ ಮೋದಿ ಅವರ ಸಮಾಧಿ ನಿರ್ಮಾಣಕ್ಕೆ ಗುಂಡಿ ತೆಗೆಯುವಲ್ಲಿ ಕಾಂಗ್ರೆಸ್ ನಿರತವಾಗಿದೆ
  • ಆದರೆ, ಪ್ರಧಾನಿ ಮೋದಿ ಅವರು ಎಕ್ಸ್‌ಪ್ರೆಸ್ ವೇ ನಿರ್ಮಿಸುವಲ್ಲಿ ನಿರತರಾಗಿದ್ದಾರೆ
  • ಸಕ್ಕರೆ ನಾಡು ಮಂಡ್ಯ ಜನರ ಆಶೀರ್ವಾದದಲ್ಲೇ ಸಿಹಿ ಇದೆ
  • ಕರ್ನಾಟಕದ ನಿರಂತರ, ಸಮಗ್ರ ಅಭಿವೃದ್ಧಿಯ ಭರವಸೆ ನೀಡಿದ ಪ್ರಧಾನಿ ಮೋದಿ
  • ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಕುರಿತಾಗಿ ಭಾರೀ ಚರ್ಚೆಯಾಗುತ್ತಿದೆ
  • ಇಂಥಾ ಅತ್ಯಾಧುನಿಕ ಎಕ್ಸ್‌ಪ್ರೆಸ್ ವೇ ಭಾರತದಾದ್ಯಂತ ಇರಬೇಕು ಎಂದು ದೇಶದ ಯುವ ಜನತೆ ಹೇಳುತ್ತಿದೆ
  • ಈ ಎಕ್ಸ್‌ಪ್ರೆಸ್ ವೇ ನಿಂದಾಗಿ ಬೆಂಗಳೂರು - ಮೈಸೂರು ನಡುವಣ ಪ್ರಯಾಣದ ಅವಧಿ ಸಾಕಷ್ಟು ಕಡಿಮೆ ಆಗಿದೆ
  • ಮೈಸೂರು - ಕುಶಾಲನಗರ ರಸ್ತೆ ಅಭಿವೃದ್ಧಿಗೂ ಶಿಲಾನ್ಯಾಸ ಮಾಡಲಾಗಿದೆ
  • ಈ ಎಲ್ಲಾ ಯೋಜನೆಗಳ ಜಾರಿಗೆ ಸಹಕರಿಸುತ್ತಿರುವ ಜನತೆಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ
  • ಕೃಷ್ಣರಾಜ ಒಡೆಯರ್ & ಸರ್‌ಎಂವಿಶ್ವೇಶ್ವರಯ್ಯ ಹೆಸರನ್ನು ಸ್ಮರಿಸಿದ ಪ್ರಧಾನಿ ಮೋದಿ
  • ಹಳೇ ಮೈಸೂರು ಭಾಗದ ಅಭಿವೃದ್ಧಿಗೆ ಈ ಇಬ್ಬರೂ ಗಣ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ
  • ಹೆದ್ದಾರಿಗಳು ಔದ್ಯೋಗಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿವೆ
  • ಮೂಲ ಸೌಕರ್ಯಗಳು ಹೆಚ್ಚಾದಂತೆ ರಾಜ್ಯಕ್ಕೆ ಹರಿದುಬರುವ ಹೂಡಿಕೆಯೂ ಹೆಚ್ಚಾಗುತ್ತದೆ

  • ಕರ್ನಾಟಕದಲ್ಲಿ ಬೆಂಗಳೂರು - ಮೈಸೂರು ಎರಡೂ ಪ್ರಮುಖ ನಗರಗಳು
  • ಇದೀಗ ಎಕ್ಸ್‌ಪ್ರೆಸ್ ವೇ ಕಾರಣದಿಂದಾಗಿ ಈ ಎರಡೂ ನಗರಗಳ ನಡುವೆ ಪ್ರಯಾಣಾವಧಿ ಒಂದೂವರೆ ಗಂಟೆಗೆ ತಗ್ಗಿದೆ
  • ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಮುನ್ನ ಈ ರಸ್ತೆಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿತ್ತು
  • ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಮಾತ್ರವಲ್ಲ.. ಕಾವೇರಿ ಉಗಮ ಸ್ಥಳ ಕೊಡಗಿಗೂ ಸಂಪರ್ಕ ಕಲ್ಪಿಸುತ್ತದೆ
  • ಮಳೆಗಾಲದಲ್ಲಿ ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಭೂ ಕುಸಿತವಾದರೆ ಮೈಸೂರು - ಕುಶಾಲನಗರ ಮಾರ್ಗ ಪರ್ಯಾಯವಾಗುತ್ತದೆ
  • ಬಡವರಿಗೆ ಸೂರು, ನೀರು, ಉಜ್ವಲಾ ಗ್ಯಾಸ್, ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ, ಆಸ್ಪತ್ರೆ ಸೌಲಭ್ಯ ಕಲ್ಪಿಸೋದು ಬಿಜೆಪಿಯ ಆದ್ಯತೆ
PM Modi In Mandya: ಮಂಡ್ಯ ಈಸ್ ಇಂಡಿಯಾ ಅನ್ನುವ ಹಾಗೆ ಅಭಿವೃದ್ಧಿ ಮಾಡುತ್ತೇವೆ- ಸಿಎಂ ಬೊಮ್ಮಾಯಿ
  • ಕೋಟ್ಯಂತರ ಬಡವರಿಗೆ ಸೌಲಭ್ಯ ಕಲ್ಪಿಸಲು ಕಳೆದ 9 ವರ್ಷಗಳಿಂದ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ
  • ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದೆ
  • ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಾವು ಮುಂದಾಗಿದ್ದೇವೆ
  • ರೈತರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪಿಎಂ ಕಿಸಾನ್ ಯೋಜನೆ ಅಡಿ ಅವರ ಖಾತೆಗಳಿಗೆ ನೇರವಾಗಿ ಹಣ ಹಾಕಲಾಗುತ್ತಿದೆ
  • ಕರ್ನಾಟಕದ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿ 12 ಸಾವಿರ ಕೋಟಿ ರೂ ಹಣ ನೀಡಲಾಗಿದೆ
  • ಮಂಡ್ಯದ ಮೂರು ಮುಕ್ಕಾಲು ಲಕ್ಷ ರೈತರಿಗೆ 600 ಕೋಟಿ ರೂ.ಗೂ ಹೆಚ್ಚು ಹಣ ನೀಡಲಾಗಿದೆ
  • ಎಥೆನಾಲ್ ಉತ್ಪಾದನೆ ಮೂಲಕ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಆದಾಯ ಲಭ್ಯವಾಗುತ್ತಿದೆ
  • ಐಟಿ, ಬಿಟಿ ಮಾತ್ರವಲ್ಲ ರಕ್ಷಣಾ ಉತ್ಪಾದನೆ, ವಿದ್ಯುತ್ ವಾಹನಗಳ ಉತ್ಪಾದನೆಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ