ಆ್ಯಪ್ನಗರ

ಪ್ರಧಾನಿಯಿಂದ ಸೇಡಿನ ರಾಜಕಾರಣ: ಉಗ್ರಪ್ಪ ಆರೋಪ

ಮಾಜಿ ಸಚಿವ ಡಿಕೆಶಿವಕುಮಾರ್‌ ಆರ್ಥಿಕ ಅಪರಾಧ ಮಾಡಿಲ್ಲಅವರು ಪಕ್ಷದ ನಿಷ್ಠಾವಂತ ಸಂಘಟಕರಾಗಿದ್ದಾರೆ...

Vijaya Karnataka 1 Sep 2019, 5:00 am
ಕೊಪ್ಪಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆರ್ಥಿಕ ಅಪರಾಧ ಮಾಡಿಲ್ಲ.ಅವರು ಪಕ್ಷದ ನಿಷ್ಠಾವಂತ ಸಂಘಟಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ ಆರೋಪಿಸಿದರು.
Vijaya Karnataka Web ugrap


ಸುದ್ದಿಗಾರರೊಂದಿಗೆ ಮಾತನಾಡಿದ ಅವರು,''ಕೋಲಾರದ ಶಾಸಕರ ಮನೆಯಲ್ಲಿ 5 ಕೋಟಿ ರೂ. ಹಣ ನೀಡಿದ್ದು, ಯಾದಗಿರಿ ಶಾಸಕರ ಪುತ್ರನೊಂದಿಗೆ ಹಣದ ವ್ಯವಹಾರ ಮಾತನಾಡಿರುವುದರ ಬಗ್ಗೆ ಐಟಿ ಇಲಾಖೆ ಕೇಸು ದಾಖಸಲಿಸಬಹುದಿತ್ತು. ಆದರೆ, ಬಿಜೆಪಿ, ತನ್ನ ಮುಖಂಡರಿಗೆ ಕ್ಲೀನ್‌ ಚಿಟ್‌ ನೀಡುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್‌ ಮುಖಂಡರ ವಿರುದ್ಧ ಇಡಿ, ಸಿಬಿಐ ಬಳಕೆ ಮಾಡುತ್ತಿದೆ'' ಎಂದು ದೂರಿದರು.

ಸ್ವಾಭಿಮಾನಿಯಾಗಿದ್ದರೆ ರಾಜೀನಾಮೆ ಸಲ್ಲಿಸಲಿ:

''ಸಚಿವ ಬಿ.ಶ್ರೀರಾಮುಲು ಅವರು ಸ್ವಾಭಿಮಾನಿಯಾಗಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬರಬೇಕು. ಚುನಾವಣೆ ಪೂರ್ವದಲ್ಲಿ ಬಿಜೆಪಿಯವರು, ಶ್ರೀ ರಾಮುಲು ಅವರನ್ನು ಡಿಸಿಎಂ ಮಾಡುವುದಾಗಿ ಘೋಷಿಸಿದ್ದರು. ಮೂವರನ್ನು ಡಿಸಿಎಂ ಮಾಡಿದ್ದರೂ ರಾಮುಲು ಅವರನ್ನು ಕಡೆಗಣಿಸಲಾಗಿದೆ. ಬಿಜೆಪಿ ಸರಕಾರ ರಚಿಸಿದ 24 ತಾಸಿನೊಳಗೆ ಎಸ್ಟಿಗೆ ಮೀಸಲಾತಿ ಹೆಚ್ಚಿಸಲಾಗುವುದು ಎಂದು ಶ್ರೀರಾಮುಲು ಭರವಸೆ ನೀಡಿದ್ದರು. ಆದರೆ, ಅವರ ಭರವಸೆ ಈವರೆಗೆ ಈಡೇರಿಲ್ಲ. ಬಿಜೆಪಿ, ವಾಲ್ಮೀಕಿ ಸಮುದಾಯಕ್ಕೆ ಆಸೆ ತೋರಿಸಿದ್ದು, ರಾಮುಲು ಅವರು ಯಾರದೋ ಒತ್ತಡಕ್ಕೆ ಮಣಿದು ಪ್ರತಿಭಟನೆ ಮಾಡದಿರುವಂತೆ ಮನವಿ ಮಾಡುತ್ತಿದ್ದಾರೆ'' ಎಂದು ವಿ.ಎಸ್‌.ಉಗ್ರಪ್ಪ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ