ಆ್ಯಪ್ನಗರ

ಪ್ರತಿಭಟಿಸಲು ಪೊಲೀಸರಿಗೆ ಅವಕಾಶ ಇಲ್ಲ: ಸಿಎಂ

ಶಿಸ್ತಿನ ಇಲಾಖೆಯಲ್ಲಿರುವ ಪೊಲೀಸರಿಗೆ ಬೀದಿಗಿಳಿದು ಪ್ರತಿಭಟಿಸಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಕ ಸುದ್ದಿಲೋಕ 4 Jun 2016, 4:00 am

-ಸಿಪಾಯಿ ದಂಗೆ ಮಾಡ್ತೀವಿ ಅಂದವನ ಬಂಧಿಸಿದ್ವಿ-

ಚಿಕ್ಕಮಗಳೂರು: ಶಿಸ್ತಿನ ಇಲಾಖೆಯಲ್ಲಿರುವ ಪೊಲೀಸರಿಗೆ ಬೀದಿಗಿಳಿದು ಪ್ರತಿಭಟಿಸಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನರಸಿಂಹರಾಜಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪೊಲೀಸರು ಸಮಸ್ಯೆ ಪರಿಹರಿಸಿ ಅಂತ ಯಾವತ್ತೂ ಸರಕಾರದ ಬಳಿ ಕೇಳಿಲ್ಲ. ವೇತನ ಪರಿಷ್ಕರಣೆ ಸೇರಿದಂತೆ ಅವರ ಬೇಡಿಕೆಗಳ ಬಗ್ಗೆ ಸರಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಪೊಲೀಸರು ಪ್ರಚೋದನೆಗೆ ಒಳಗಾಗಬಾರದು,'' ಎಂದರು.

''ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸರಿಗೆ ಆರೋಗ್ಯ ಭಾಗ್ಯ, ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ, ಎಕ್ಸ್‌ಗ್ರೆಷಿಯಾ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ,'' ಎಂದರು.

ಎಸಿಬಿಗೆ ಸಂಬಳ ನಿಂತಿಲ್ಲ

''ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2 ತಿಂಗಳಿಂದ ಸಂಬಳ ಸಿಗದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಎಸಿಬಿಗೆ ಹೊಸ ನೇಮಕ ಮಾಡಿಲ್ಲ. ಹೊರಗಿನಿಂದ ಯಾರನ್ನೂ ತಂದು ಹಾಕಿಲ್ಲ. ವೇತನ ಕೊಡದಿರಲು ಸಾಧ್ಯವೇ ಇಲ್ಲ. ಈ ಕುರಿತ ಆರೋಪದ ಪರಿಶೀಲಿಸಲಾಗುವುದು,'' ಎಂದು ಉತ್ತರಿಸಿದರು.

-----

Vijaya Karnataka Web police strike siddaramaiah
ಪ್ರತಿಭಟಿಸಲು ಪೊಲೀಸರಿಗೆ ಅವಕಾಶ ಇಲ್ಲ: ಸಿಎಂ



''ಈಗ ಪೊಲೀಸ್‌ ಹುದ್ದೆಯಲ್ಲಿ ಇಲ್ಲದ, 1997-98ರಲ್ಲಿ ಕಾನ್ಸ್‌ಟೇಬಲ್‌ ಹುದ್ದೆಯಿಂದ ವಜಾಗೊಂಡಿದ್ದ ವ್ಯಕ್ತಿಯೊಬ್ಬ ಪ್ರಚೋದನೆ ನೀಡಿದ್ದ. ತನಿಖೆ ನಡೆಸಿದಾಗ ಆತ ಶಶಿಧರ್‌ ಎಂಬುದು ಗೊತ್ತಾಗಿದೆ. ಸಿಪಾಯಿ ದಂಗೆ ಮಾಡ್ತೀವಿ, ಸರಕಾರ ಉರುಳಿಸ್ತೀವಿ ಅಂತ ಹೇಳುತ್ತ ಸರಕಾರದ ವಿರುದ್ಧ ಆತ ಕೆಲಸ ಮಾಡಿದ್ದಾನೆ. ಆದ್ದರಿಂದ ಆತನನ್ನು ಬಂಧಿಸಿದ್ದೇವೆ,''

-ಸಿದ್ದರಾಮಯ್ಯ ಮುಖ್ಯಮಂತ್ರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ