ಆ್ಯಪ್ನಗರ

ಆದಾಯ ತೆರಿಗೆ ಮಾಜಿ ಡಿಜಿ ಕಿರುಕುಳ ಆರೋಪ: ಪೊಲೀಸರ ತನಿಖೆ?

ಸಿದ್ಧಾರ್ಥ ಅವರ ಸಾವಿನ ಪ್ರಕರಣದ ಬಗ್ಗೆ ಐಟಿ ಇಲಾಖೆ ಹಿಂದಿನ ಡಿಜಿ ಬಾಲಕೃಷ್ಣನ್‌ ಅವರಿಂದ ಹೇಳಿಕೆ ಪಡೆದುಕೊಳ್ಳಲಾಗುತ್ತದೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ.

Vijaya Karnataka Web 31 Jul 2019, 6:31 pm
ಬೆಂಗಳೂರು: ಸಿದ್ಧಾರ್ಥ ಅವರ ದುರಂತ ಅಂತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆದಾಯ ತೆರಿಗೆ ಮಾಜಿ ಡಿಜಿ ಬಿ.ಆರ್‌. ಬಾಲಕೃಷ್ಣನ್‌ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
Vijaya Karnataka Web balkrishna


ಅನೇಕ ಜನರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆದುಕೊಳ್ಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂಎ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರ ತಂಡ, ಆದಾಯ ತೆರಿಗೆ ಯ ತನಿಖಾ ವಿಭಾಗದ ಮಾಜಿ ಡಿಜಿ ಬಾಲಕೃಷ್ಣನ್‌ ಅವರ ಹೇಳಿಕೆಯನ್ನು ಪಡೆಯಲಿದ್ದಾರೆ ಎಂದು ಹಿತಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬುಧವಾರವೇ ಬಾಲಕೃಷ್ಣನ್‌ ಅವರ ಸೇವೆಯ ಕೊನೆ ದಿನವಾಗಿದ್ದು, ಸಂಪರ್ಕಿಸುವುದು ಸಾಧ್ಯವಾಗಿಲ್ಲ ಎಂದು ಎಕಾನಾಮಿಕ್ಸ್‌ ಟೈಮ್ಸ್‌ ವರದಿ ಮಾಡಿದೆ. ಇದೇ ವೇಳೆ ಮಂಗಳೂರು ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಹೇಳಿಕೆ ನೀಡಲು ಅಲಭ್ಯವಾಗಿದ್ದಾರೆ.

ಸಿದ್ದಾರ್ಥ ಕೊನೆ ಪತ್ರದತ್ತ ಎಲ್ಲರ ಚಿತ್ತ: ಅಧಿಕೃತತೆ ಬಗ್ಗೆ ಸಿಕ್ಕಾಪಟ್ಟೆ ಡೌಟು!!

ಕೊನೆಯದಾಗಿ ಅವರು ಬರೆದಿದ್ದ ಪತ್ರದಲ್ಲಿ ಐಟಿ ಇಲಾಖೆ ಹಿಂದಿನ ಡಿಜಿ ಅವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಸ್ಪಷ್ಟೀಕರಣ ನೀಡಿದ್ದ ಐಟಿ ಇಲಾಖೆ, ಯಾವುದೇ ಸಂದರ್ಭದಲ್ಲೂ ಇಲಾಖೆ ಸಿದ್ದಾರ್ಥ ಅವರಿಗೆ ಕಿರುಕುಳ ನೀಡಿಲ್ಲ ಎಂದು ಹೇಳಿಕೆ ನೀಡಿದೆ.
ಪ್ರಭಾವಿಗಳ ಮನೆಯಲ್ಲಿ ಆದಾಯ ಇಲಾಖೆ ಶೋಧಕಾರ್ಯ ನಡೆಸುವ ವೇಳೆ, ಸಿದ್ಧಾರ್ಥಗೆ ಸಂಬಂಧಿಸಿದ ಕೆಲ ದಾಖಲೆಗಳು ಸಿಕ್ಕಿದ್ದವು. ಇದನ್ನು ಆಧರಿಸಿ, ಅವರ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಐಟಿ ಇಲಾಖೆ ಸ್ಪಷ್ಟೀಕರಣ ನೀಡಿದೆ.

ಕಪ್ಪು ಹಣ ಇರುವುದನ್ನು ಒಪ್ಪಿಕೊಂಡಿದ್ದ ಸಿದ್ದಾರ್ಥ:

ಅಲ್ಲದೆ ಐಟಿ ಇಲಾಖೆ ತಮಗೆ ಸಂಬಂಧಿಸಿದ ಷೇರುಗಳನ್ನೂ ವಶಪಡಿಸಿಕೊಂಡಿದೆ ಎಂದು ಪತ್ರದಲ್ಲಿ ಹೇಳಿದ್ದರು. ಆದರೆ ಈ ಆರೋಪವನ್ನೂ ಇಲಾಖೆ ಸಂಪೂರ್ಣವಾಗಿ ತಿರಸ್ಕರಿಸಿದೆ. ಅಲ್ಲದೆ, ಷರತ್ತುಗಳನ್ನು ವಿಧಿಸಿ, ಎಲ್ಲ ಷೇರುಗಳನ್ನು ಅವರಿಗೆ ವಾಪಸ್‌ ನೀಡಿತ್ತು. ಸಾಲ ಮರು ಪಾವತಿಗೆ ಅವಕಾಶವನ್ನೂ ಕಲ್ಪಿಸಲಾಗಿತ್ತೆಂದು ಐಟಿ ಇಲಾಖೆ ಹೇಳಿದೆ. ಷೇರುಗಳನ್ನು ಜಪ್ತಿ ಮಾಡಿರುವುದರಿಂದ ಆರ್ಥಿಕವಾಗಿ ಕಷ್ಟಕ್ಕೆ ಸಿಲುಕಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಿದ್ದಾರ್ಥ ಅವರ ಬಗೆಗಿನ ಈ ಸುದ್ದಿಗಳನ್ನೂ ಓದಿರಿ:
ಸಿದ್ಧಾರ್ಥ ಕೊನೆ ಪತ್ರ: ನಾನು ಸೋತೆ, ಎಲ್ಲ ಪ್ರಯತ್ನವನ್ನೂ ಕೈಬಿಡುತ್ತಿದ್ದೇನೆ'

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ