ಆ್ಯಪ್ನಗರ

ಅಪ್ಪಿತಪ್ಪಿ ಹಾವು, ಹುಚ್ಚುನಾಯಿ ಕಚ್ಚಿದರೆ ಔಷಧವಿಲ್ಲದೆ ಸಾಯಬೇಕಾಗುತ್ತದೆ ಜೋಕೆ!

ಕರ್ನಾಟಕದಲ್ಲಿ ಅಪ್ಪಿತಪ್ಪಿ ಯಾರಿಗಾದರೂ ವಿಷದ ಹಾವು ಕಚ್ಚಿದರೆ ಅಥವಾ ಹುಚ್ಚುನಾಯಿ ಕಚ್ಚಿದರೆ ಸೂಕ್ತ ಔಷದ ಸಿಗದೆ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಚ್ಚುನಾಯಿ, ಹಾವು ಕಡಿದರೆ ಸಾವು ನಿಶ್ಚಿತ ಎಂಬ ವಾತಾವರಣ ಉಂಟಾಗಿದೆ.

TIMESOFINDIA.COM 15 Nov 2019, 6:00 pm
ಬೆಂಗಳೂರು: ಅಪ್ಪಿತಪ್ಪಿ ಯಾರಿಗಾದರೂ ವಿಷದ ಹಾವು ಕಚ್ಚಿದರೆ ಅಥವಾ ಹುಚ್ಚುನಾಯಿ ಕಚ್ಚಿದರೆ ಸೂಕ್ತ ಔಷದ ಸಿಗದೆ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ರಾಜ್ಯದಲ್ಲಿ. ಅತ್ಯವಶ್ಯ ಲಸಿಕೆಗಳಾದ ಸ್ನೇಕ್‌ ಆಂಟಿವಿನೋಮ್‌ (ಹಾವು ಕಡಿತಕ್ಕೆ ನೀಡುವ ಔಷಧ) ರೇಬಿಸ್‌ ಮತ್ತು ಟೆಟನಸ್‌ ಲಸಿಕೆಗಳ ತೀವ್ರ ಕೊರತೆ ಉದ್ಭವಿಸಿದೆ. ಸರಕಾರಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳ ಪರಿಸ್ಥಿತಿಯಂತೂ ಮತ್ತಷ್ಟು ಭೀಕರವಾಗದಿ.
Vijaya Karnataka Web snake antivenom
ಸಾಂದರ್ಭಿಕ ಚಿತ್ರ


ಸರಕಾರವು ಖರೀದಿ ನೀತಿಗಳನ್ನು ಕಠಿಣಗೊಳಿಸಿರುವುದರಿಂದಲೇ ಈ ಬಿಕ್ಕಟ್ಟು ಉದ್ಭವವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ನಾಯಿ ಕಡಿತ, ಹಾವು ಕಡಿತ ಹಾಗೂ ಧನುರ್ವಾಯು ಸೋಂಕಿಗೆ ಒಳಗಾದವರಿಗೆ ಸೂಕ್ತ ಸಮಯದಲ್ಲಿ ಲಸಿಕೆ ಸಿಗದೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆಗಳು ಲಭ್ಯವಿಲ್ಲದ ಕಾರಣ ಬೇರೆ ದಾರಿ ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ತೆತ್ತು ಚಿಕಿತ್ಸೆ ಪಡೆಯಬೇಕಿದೆ.

ರೇಸ್‌ಕೋರ್ಸ್‌ನಲ್ಲಿ ರೇಸ್ ರದ್ದಾಗಿದ್ದಕ್ಕೆ ಜೂಜುಪ್ರಿಯರು ಕೆಂಡಾಮಂಡಲ: ಕಚೇರಿ ಕುರ್ಚಿ, ಮೇಜು, ಟಿವಿ ದ್ವಂಸ

ಅಗತ್ಯ ಔಷಧಗಳ ಖರೀದಿ ಪ್ರಕ್ರಿಯೆಯನ್ನು ಕೇಂದ್ರೀಕರಿಸಿರುವ ಕಾರಣ ಟೆಟನಸ್‌ ಟಾಕ್ಸಾಯ್ಡ್‌ (ಟಿಟಿ) ಚುಚ್ಚುಮದ್ದು ಲಭ್ಯವಿಲ್ಲದಂತಾಗಿದೆ. ಜಿಲ್ಲಾ ಆಸ್ಪತ್ರೆಗಳ ದಾಸ್ತಾನು ಮಳಿಗೆಗಳಲ್ಲಿಯೇ ಹಾವು ಕಡಿತ ಮತ್ತು ನಾಯಿ ಕಡಿತಕ್ಕೆ ನೀಡುವ ಲಸಿಕೆಗಳು ಲಭ್ಯವಿಲ್ಲದಂತಾಗಿದೆ ಎಂಬ ವಿಚಾರವನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಹಾವು ಕಡಿತಕ್ಕೆ ಚಿಕಿತ್ಸೆ ಸಿಗುತ್ತಿಲ್ಲ:
ಗ್ರಾಮೀಣ ಭಾಗದ ಜನರಿಗೆ ಹುಚ್ಚುನಾಯಿ ಇಲ್ಲವೇ ಹಾವು ಕಚ್ಚಿದಾಗ ಸರಕಾರಿ ಆಸ್ಪತ್ರೆಗಳಿಗೆ ಹೋದರೆ ಲಸಿಕೆ ಸಿಗುತ್ತಿಲ್ಲ. ಮೈಗೆ ವಿಷ ಏರಿದವರನ್ನು ತಾಲೂಕು ಇಲ್ಲವೇ ಜಿಲ್ಲಾ ಆಸ್ಪತ್ರೆ ತಲುಪುವುದರೊಳಗೆ ಪ್ರಾಣಪಕ್ಷಿ ಹಾರಿಹೋಗುವ ಅಪಾಯವಿರುತ್ತದೆ. ನಾಯಿ ಕಡಿತಕ್ಕೆ ಸಂಬಂಧಿಸಿದ ಲಸಿಕೆ ಕೊರತೆ ಮಧ್ಯೆಯೂ ಅಷ್ಟೋ, ಇಷ್ಟೋ ಪೂರೈಕೆಯಾಗುತ್ತಿದೆ. ಆದರೆ, ಇದು ನಗರಪ್ರದೇಶದ ಆಸ್ಪತ್ರೆಗಳಿಗೆ ಸೀಮಿತವಾಗಿದೆ. ಇನ್ನು ಹಾವು ಕಡಿತದ ಔಷಧ ಪೂರೈಸುವಂತೆ ರಾಜ್ಯದ ನಾನಾ ಭಾಗಗಳಿಂದ ಡ್ರಗ್ ಲಾಜಿಸ್ಟಿಕ್‌ಗೆ ಬೇಡಿಕೆ ಬರುತ್ತಿದ್ದರೂ ಇತ್ತ ಕಡೆಯಿಂದ ‘ನೋ ಸ್ಟಾಕ್’ ಎಂಬ ಹಿಂಬರಹ ರವಾನೆಯಾಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಇದೇ ಸ್ಥಿತಿಯಿದ್ದು, ಹಾವು ಕಡಿದರೆ ಸಾವು ನಿಶ್ಚಿತ ಎಂಬ ವಾತಾವರಣ ಮೂಡಿಸುತ್ತಿದೆ.

ಅನಿರೀಕ್ಷಿತ ಕಾರಣಗಳಿಂದಂತೆ ಗಾಂಧಿ ಸತ್ತಿದ್ದು! : ಒಡಿಶಾ ಶಾಲಾ ಕೈಪಿಡಿಯಲ್ಲಿದೆ ಈ ಹೊಸ ಮಾಹಿತಿ!

ರಾಜ್ಯದ ಒಟ್ಟು 30 ಜಿಲ್ಲಾ ದಾಸ್ತಾನು ಮಳಿಗೆಗಳ ಪಯಕಿ ಕೇವಲ ಎರಡರಲ್ಲಿ ಮಾತ್ರವೇ ಟಿಟಿ ಇಂಜೆಕ್ಷನ್ ಲಭ್ಯವಿದೆ. ಆದಾಸ್ತಾನು ಮಳಿಗೆಳಲ್ಲಿ ವಾರ್ಷಿಕವಾಗಿ ಅಗತ್ಯವಿರುವ ಹಾವು ಕಡಿತ ಮತ್ತು ನಾಯಿ ಕಡಿತ ಲಸಿಕೆಗಳ ಪೈಕಿ ಕೇವಲ ಶೇ.20ರಷ್ಟು ದಾಸ್ತಾನು ಹೊಂದಿವೆ. ಬೆಂಗಳೂರು ಸೇರಿದಂತೆ 14 ಜಿಲ್ಲೆಗಳಲ್ಲಿ ನಾಯಿಗಳ ಕಡಿತಕ್ಕೆ ನೀಡುವ ಲಸಿಕೆ ಲಭ್ಯವಿಲ್ಲದಂತಾಗಿದೆ. ಇದರ ಪರಿಣಾಮ ಕಳೆದ ಎರಡು ವರ್ಷಗಳಲ್ಲಿ ರೇಬಿಸ್‌ನಿಂದ ಸತ್ತವರ ಸಂಖ್ಯೆ 30ಕ್ಕೇರಿದೆ.

ಔಷಧ ಕೊರತೆಗೆ ಕಾರಣ:
2012-13ರಲ್ಲಿ 340 ರೂ.ಗೆ ಒಂದರಂತೆ ಆ್ಯಂಟಿ ಸ್ನೇಕ್ ವೆನಮ್ ಎಂಬ ಔಷಧ ಖರೀದಿಸಲಾಗಿತ್ತು. ಆರೋಗ್ಯ ಇಲಾಖೆ ಈಗಲೂ ಅದೇ ದರದಲ್ಲಿ ಪೂರೈಸುವಂತೆ ಕೇಳುತ್ತಿದೆ. ಆದರೆ, ಅದೇ ಔಷಧವನ್ನು ಖಾಸಗಿಯಾಗಿ ಮಾರಾಟ ಮಾಡಿದರೆ 1300ರಿಂದ 1500 ರೂ.ವರೆಗೆ ಬೆಲೆ ಇದೆ. ಕಂಪನಿಗಳು ಕನಿಷ್ಠ 800-900 ರೂ. ನೀಡುವಂತೆ ಸರಕಾರವನ್ನು ಕೇಳುತ್ತಿವೆ. ಆದರೆ, ಈ ಸಂಬಂಧದ ಕಡತ ಕಳೆದೊಂದು ವರ್ಷದಿಂದಲೂ ಸರಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿಯೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ