ಆಯುಧ ಪೂಜೆ ಸಂಭ್ರಮ: ಕುಟುಂಬದೊಂದಿಗೆ ಹಬ್ಬ ಆಚರಿಸಿದ ರಾಜಕಾರಣಿಗಳು
ಆಯುಧ ಪೂಜೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ತಮ್ಮ ಕುಟುಂಬದ ಸದಸ್ಯರ ಜೊತೆಗೆ ಪೂಜೆ ನೆರವೇರಿಸಿದರು. ಯಾರೆಲ್ಲಾ ರಾಜಕಾರಣಿಗಳು ತಮ್ಮ ಕುಟುಂಬದ ಜೊತೆಗೆ ಆಯುಧ ಪೂಜೆ , ವಿಜಯದಶಮಿ ಆಚರಣೆ ಮಾಡಿದರು ಎಂಬ ವಿವರ ಇಲ್ಲಿದೆ.
Vijaya Karnataka Web 25 Oct 2020, 3:43 pm
ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಆಯುಧಪೂಜೆ ಸಂಭ್ರಮ. ಆಯುಧ ಪೂಜೆಯ ಅಂಗವಾಗಿ ಜನಪ್ರತಿನಿಧಿಗಳು ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರ ಜೊತೆಗೆ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಯುಧಪೂಜೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಶುಭಾಶಯ ಸಲ್ಲಿಸಿದ್ದಾರೆ. ದೇಶ ರಕ್ಷಣೆ ಹಾಗೂ ಶತ್ರುಗಳನ್ನು ಮಣಿಸಲು ಸಾಧನವಾದ ಆಯುಧಗಳನ್ನು ಪೂಜಿಸುವ ಪರಂಪರೆ, ಆಚರಣೆಗಳ ಜೊತೆಗೆ ಪ್ರಸಕ್ತ ಈ ಕೊರೋನಾ ವಿರುದ್ಧ ನಮ್ಮ ಹೋರಾಟದಲ್ಲಿ ನಮ್ಮ ಆಯುಧಗಳಾಗಿರುವ ಮಾಸ್ಕ್ ಧಾರಣೆ, ಕೈಗಳ ಸ್ವಚ್ಛತೆ, ಭೌತಿಕ ಅಂತರಗಳನ್ನು ಗೌರವಿಸೋಣ, ಅವುಗಳನ್ನು ಕಡ್ಡಾಯ ಪಾಲಿಸೋಣ ಎಂದು ಮನವಿ ಮಾಡಿದ್ದಾರೆ.
ಡಿಕೆಶಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಎಸ್ ಟಿ ಸೋಮಶೇಖರ್ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಬೆಂಗಳೂರಿನಲ್ಲಿರುವ ನಿವಾಸದಲ್ಲಿ ಕುಟುಂಬದ ಸದಸ್ಯರ ಜೊತೆಗೆ ಆಯುಧ ಪೂಜೆಯನ್ನು ಆಚರಿಸಿದರು. ಸದಾಶಿವನಗರದ ನಿವಾಸದಲ್ಲಿ ಆಯುಧಪೂಜೆ, ವಿಜಯದಶಮಿ ನಿಮಿತ್ತ ಗೋಪೂಜೆ ನೆರವೇರಿಸಿದರು.
ಸಚಿವ ಬಿ.ಸಿ ಪಾಟೀಲ್ ತಮ್ಮ ನಿವಾಸದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ಆಚರಣೆ ಮಾಡಿದರು. ತಮ್ಮ ಕುಟುಂಬ ಸದಸ್ಯರ ಜೊತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆ ಮಾಡಿದರು. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೊನ್ನಾಳಿಯ ಪಟ್ಟಣಪಂಚಾಯಿತಿ ವತಿಯಿಂದ ನಡೆದ ಆಯುಧ ಪೂಜೆಯಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಯುಧಪೂಜೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಶುಭಾಶಯ ಸಲ್ಲಿಸಿದ್ದಾರೆ. ದೇಶ ರಕ್ಷಣೆ ಹಾಗೂ ಶತ್ರುಗಳನ್ನು ಮಣಿಸಲು ಸಾಧನವಾದ ಆಯುಧಗಳನ್ನು ಪೂಜಿಸುವ ಪರಂಪರೆ, ಆಚರಣೆಗಳ ಜೊತೆಗೆ ಪ್ರಸಕ್ತ ಈ ಕೊರೋನಾ ವಿರುದ್ಧ ನಮ್ಮ ಹೋರಾಟದಲ್ಲಿ ನಮ್ಮ ಆಯುಧಗಳಾಗಿರುವ ಮಾಸ್ಕ್ ಧಾರಣೆ, ಕೈಗಳ ಸ್ವಚ್ಛತೆ, ಭೌತಿಕ ಅಂತರಗಳನ್ನು ಗೌರವಿಸೋಣ, ಅವುಗಳನ್ನು ಕಡ್ಡಾಯ ಪಾಲಿಸೋಣ ಎಂದು ಮನವಿ ಮಾಡಿದ್ದಾರೆ.
ಡಿಕೆಶಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಎಸ್ ಟಿ ಸೋಮಶೇಖರ್ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಬೆಂಗಳೂರಿನಲ್ಲಿರುವ ನಿವಾಸದಲ್ಲಿ ಕುಟುಂಬದ ಸದಸ್ಯರ ಜೊತೆಗೆ ಆಯುಧ ಪೂಜೆಯನ್ನು ಆಚರಿಸಿದರು. ಸದಾಶಿವನಗರದ ನಿವಾಸದಲ್ಲಿ ಆಯುಧಪೂಜೆ, ವಿಜಯದಶಮಿ ನಿಮಿತ್ತ ಗೋಪೂಜೆ ನೆರವೇರಿಸಿದರು.
ಸಚಿವ ಬಿ.ಸಿ ಪಾಟೀಲ್ ತಮ್ಮ ನಿವಾಸದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ಆಚರಣೆ ಮಾಡಿದರು. ತಮ್ಮ ಕುಟುಂಬ ಸದಸ್ಯರ ಜೊತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆ ಮಾಡಿದರು. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೊನ್ನಾಳಿಯ ಪಟ್ಟಣಪಂಚಾಯಿತಿ ವತಿಯಿಂದ ನಡೆದ ಆಯುಧ ಪೂಜೆಯಲ್ಲಿ ಪಾಲ್ಗೊಂಡರು.