ದೋಸ್ತಿ ಸರಕಾರಕ್ಕೆ ಸಂಕ್ರಾಂತಿ ಕಿಚ್ಚು: ಬಿಜೆಪಿ ತಂತ್ರದಿಂದ ಬೆಚ್ಚಿದ ಕಾಂಗ್ರೆಸ್
ಮೈತ್ರಿ ಸರಕಾರ ಉಳಿಸಿಕೊಳ್ಳಬೇಕಿದ್ದರೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರೆಸಾರ್ಟ್ನಲ್ಲಿ ಕೂಡಿ ಹಾಕಬೇಕು ಎನ್ನುವುದೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಕೈಗೊಂಡ ನಿರ್ಧಾರವಾಗಿದೆ.
Vijaya Karnataka 16 Jan 2019, 7:20 am
ಬೆಂಗಳೂರು: ದೋಸ್ತಿ ಸರಕಾರ ಪತನಗೊಳಿಸುವ ಬಿಜೆಪಿ ತಂತ್ರಗಾರಿಕೆಗೆ ಬೆಚ್ಚಿರುವ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ಆರಂಭಿಸಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೋಮವಾರ ತಡರಾತ್ರಿ ದಿಢೀರ್ ಆಗಿ ಬೆಂಗಳೂರಿಗೆ ಆಗಮಿಸಿದರು. ನಂತರ ಅವರು ಮಂಗಳವಾರ ದಿನವಿಡೀ ಸಭೆ ನಡೆಸಿದರು. ಮೈತ್ರಿ ಸರಕಾರ ಉಳಿಸಿಕೊಳ್ಳಬೇಕಿದ್ದರೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರೆಸಾರ್ಟ್ನಲ್ಲಿ ಕೂಡಿ ಹಾಕಬೇಕು ಎನ್ನುವುದೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಕೈಗೊಂಡ ನಿರ್ಧಾರವಾಗಿದೆ.
ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ನಗರಕ್ಕೆ ದೌಡಾಯಿಸಿದ ವೇಣುಗೋಪಾಲ್, ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಪ್ರದೇಶ ಕಾಂಗ್ರೆಸ್ ಪ್ರಮುಖರೊಂದಿಗೆ ಸುದೀರ್ಘ ಸಭೆ ನಡೆಸಿದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೂ ಅತಿಥಿ ಗೃಹಕ್ಕೆ ತೆರಳಿ ವೇಣುಗೋಪಾಲ್ ಅವರೊಂದಿಗೆ ಸಮಾಲೋಚಿಸಿದರು.
ವೇಣುಗೋಪಾಲ್, ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರು ಸರಕಾರ ಸುಭದ್ರವಾಗಿದೆಯೆಂದೇ ಹೇಳಿಕೊಂಡಿದ್ದಾರೆ. ಆದರೆ, ಎಲ್ಲವೂ ಸರಿಯಿಲ್ಲ ಎನ್ನುವ ಆತಂಕ ಕಾಂಗ್ರೆಸ್ ವಲಯದಲ್ಲಿದೆ. ಜತೆಗೆ ಸರಕಾರವನ್ನು ಬಚಾವ್ ಮಾಡಿಕೊಳ್ಳಲು ಕೈ ನಾಯಕರು ಒಂದಾದ ಮೇಲೊಂದು ಸಭೆ ನಡೆಸಿರುವುದೇ ಈ ದಿಗಿಲಿಗೆ ಸಾಕ್ಷಿ ಎನ್ನುವಂತಿತ್ತು. ಇದರಿಂದಾಗಿ ಕುಮಾರಕೃಪಾ ಅತಿಥಿಗೃಹದ ಅಂಗಳ ರಾಜಕೀಯ ಚಟುವಟಿಕೆಯಿಂದ ಗಿಜಿಗುಡುವಂತಾಯಿತು.
ಕೈಮೀರಿದ್ದಕ್ಕೆ ಕೆಸಿವಿ ಗರಂ
''ಪರಿಸ್ಥಿತಿ ಕೈಮೀರುವ ಹಂತಕ್ಕೆ ಹೋಗಿದೆ. ನಮ್ಮ ಐದಾರು ಶಾಸಕರು ನಾಟ್ ರೀಚೆಬಲ್ ಆಗಿದ್ದಾರೆ. ಅವರೆಲ್ಲ ಮುಂಬಯಿಗೆ ತೆರಳುವವರೆಗೆ ನೀವೇನು ಮಾಡುತ್ತಿದ್ದಿರಿ,'' ಎಂದು ರಾಜ್ಯ ಕಾಂಗ್ರೆಸ್ ನಾಯಕರನ್ನು ವೇಣುಗೋಪಾಲ್ ಪ್ರಶ್ನಿಸಿದರು. ಅಂಥದ್ದೇನೂ ಸಮಸ್ಯೆಯಾಗಿಲ್ಲ. ಎಲ್ಲವೂ ಸರಿಹೋಗಲಿದೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ವಿಫಲ ಯತ್ನ ನಡೆಸುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿದರು. ಇತರರೂ ಇದಕ್ಕೆ ದನಿಗೂಡಿಸಿದರು. ಆದರೆ, ದಿನೇಶ್ ಗುಂಡೂರಾವ್ ಅವರನ್ನು ತರಾಟೆಗೆ ತೆಗೆದುಕೊಂಡ ವೇಣುಗೋಪಾಲ್ ''ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೀವೇನು ಮಾಡಿದ್ದೀರಿ? ಅತೃಪ್ತರನ್ನು ಸಂಪರ್ಕ ಮಾಡಲಿಲ್ಲವೇಕೆ? ಇಲ್ಲಿನ ಸ್ಥಿತಿ ಬಗ್ಗೆ ಹೈಕಮಾಂಡ್ಗೇಕೆ ಮಾಹಿತಿ ರವಾನಿಸಲಿಲ್ಲ?,'' ಎಂದು ಬಿಸಿ ಮುಟ್ಟಿಸಿದರು. ಇದೇ ವೇಳೆ ರಾಜಕೀಯ ಪರಿಸ್ಥಿತಿ ನಿಭಾಯಿಸುವಲ್ಲಿ ಕೆಪಿಸಿಸಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಡಿಕೆಶಿ ಅವರೂ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಆನಂದ್ ಸಿಂಗ್ರಿಂದ ರಹಸ್ಯ ಬಯಲು!
ಸಚಿವ ಡಿಕೆಶಿ ಅವರು ಶಾಸಕ ಆನಂದ್ ಸಿಂಗ್ರನ್ನು ಸಭೆಗೆ ಹಾಜರುಪಡಿಸಿದರು. ಈ ವೇಳೆ 'ಮಂಪರು ಪರೀಕ್ಷೆ' ಮಾಡಿದ ಮಾದರಿಯಲ್ಲೇ ಸಿಂಗ್ರನ್ನು ವಿಚಾರಣೆಗೆ ಒಳಪಡಿಸಿದ ವೇಣುಗೋಪಾಲ್ ಹತ್ತಾರು ಪ್ರಶ್ನೆ ಕೇಳಿದರು. ಚಾಲಾಕಿತನದಿಂದಲೇ ಉತ್ತರಿಸಿದ ಆನಂದ್ ಸಿಂಗ್ ''ಬಿಜೆಪಿಯಿಂದ ಆಮಿಷವಿರುವುದು ನಿಜ. ನಾನದನ್ನು ನಿರಾಕರಿಸಿದ್ದೇನೆ. ಪಕ್ಷ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಾಗೇಂದ್ರ ಕೂಡ ನಮ್ಮ ಜತೆಯಿದ್ದಾರೆ. ಆದರೆ, ನನ್ನ ಮೇಲೆ ಇನ್ನೂ ಒತ್ತಡವಿದೆ. ಬಳ್ಳಾರಿಯ ನಾಲ್ವರು ಸೇರಿ ಕಾಂಗ್ರೆಸ್ನ 9 ಶಾಸಕರನ್ನು ಕರೆತರುವ ಭರವಸೆಯನ್ನು ಬಿಜೆಪಿ ನಾಯಕರಿಗೆ ರಮೇಶ್ ಜಾರಕಿಹೊಳಿ ನೀಡಿದ್ದಾರೆ. ಬಿ.ಸಿ.ಪಾಟೀಲ್, ಡಾ. ಸುಧಾಕರ್ ಅವರಿಗೂ ಬಿಜೆಪಿ ಕಡೆಯಿಂದ ಪದೇಪದೆ ಕರೆ ಹೋಗುತ್ತಿದೆ. ಜೆಡಿಎಸ್ನ ಸತ್ಯನಾರಾಯಣ, ದೇವಾನಂದ ಚೌಹಾಣ್ಗೂ ಗಾಳ ಹಾಕಲು ಬಿಜೆಪಿ ಯತ್ನಿಸಿದೆ,'' ಎಂಬ ಮಾಹಿತಿ ಹಂಚಿಕೊಂಡರೆಂದು ತಿಳಿದು ಬಂದಿದೆ. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್ ''ವೇಣುಗೋಪಾಲ್ ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿಯವರು ನನ್ನನ್ನು ಸಂಪರ್ಕಿಸಿಯೂ ಇಲ್ಲ. ಅಲ್ಲಿಗೆ ಹೋಗುವುದೂ ಇಲ್ಲ,'' ಎಂದರು.
ಡಿಕೆಶಿ ಮುಂಬಯಿ ಟ್ರಿಪ್ ರದ್ದು
ವೇಣುಗೋಪಾಲ್ ಸೂಚನೆಯಂತೆ ಡಿಕೆಶಿ ಅವರ ಮುಂಬಯಿ ಪ್ರವಾಸ ರದ್ದಾಗಿದೆ. ಮುಂಬಯಿ ಹೋಟೆಲ್ನಲ್ಲಿರುವ ಶಾಸಕರನ್ನು ವಾಪಸ್ ಕರೆತರಲು ಅಲ್ಲಿಗೆ ತೆರಳಲು ಡಿಕೆಶಿ ತಯಾರಿ ಮಾಡಿಕೊಂಡಿದ್ದರು. ಆದರೆ, ಮುಂಬಯಿನಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಕಡೆಯಿಂದ ಪ್ರತಿಭಟನೆ ಮಾಡಿಸಲಾಗುವುದು. ತಾವು ಇಲ್ಲಿಯೇ ಇರಿ. ಕಾಗ್ರೆಸ್ ಶಾಸಕರ ಬಂದೋಬಸ್ತ್ ನೋಡಿಕೊಳ್ಳಲು ತಮ್ಮ ಅಗತ್ಯವಿದೆಯೆಂದು ವೇಣುಗೋಪಾಲ್ ಸೂಚಿಸಿದರು ಎನ್ನಲಾಗಿದೆ.
ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆದರೆ ಪ್ರತಿ ತಂತ್ರಗಾರಿಕೆಯೂ ಸಿದ್ಧವಿದೆ. ಬಿಜೆಪಿಯ ಐದಾರು ಶಾಸಕರು ನಿರಂತರ ಸಂಪರ್ಕದಲ್ಲಿದ್ದು ಅವರಿಂದ ರಾಜೀನಾಮೆ ಕೊಡಿಸಲಾಗುವುದು ಎಂದು ಡಿಕೆಶಿ ತಿಳಿಸಿದರು. ಇದೆಲ್ಲ ಸಾಧ್ಯವಾ ಎಂದು ವೇಣುಗೋಪಾಲ್ ಕೇಳಿದರು. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಫೀಲ್ಡಿಗಿಳಿಯಲು ತಾವು ಸಿದ್ಧವೆಂದು ಡಿಕೆಶಿ ಉತ್ಸಾಹ ತೋರಿದರು ಎಂದು ತಿಳಿದು ಬಂದಿದೆ.
ನೋ ಚಾನ್ಸ್ ಎಂದ ರಮೇಶ್ ಜಾರಕಿಹೊಳಿ
ಕಡೆಗೂ ಮುಂಬಯಿಯಲ್ಲಿರುವ ರಮೇಶ್ ಜಾರಕಿಹೊಳಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ ವೇಣುಗೋಪಾಲ್ ವಾಪಸ್ ಬರುವಂತೆ ಮನವೊಲಿಸುವ ಯತ್ನ ಮಾಡಿದರು. ಪುನಃ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನೂ ನೀಡಿದರು. ಇದಕ್ಕೆ ಜಗ್ಗದ ಜಾರಕಿಹೊಳಿ ವಾಪಸ್ ಬರುವ ಪ್ರಶ್ನೆಯಿಲ್ಲವೆಂದು ನಿರಾಕರಿಸಿದರು ಎಂದು ಗೊತ್ತಾಗಿದೆ.
ರೆಸಾರ್ಟ್ ರಾಜಕಾರಣ ಖಚಿತ
ಕಾಂಗ್ರೆಸ್ನ ಎಲ್ಲ ಶಾಸಕರಿಗೆ ಬುಧವಾರ ಸಂಜೆಯೊಳಗೆ ಬೆಂಗಳೂರಿಗೆ ತಲುಪಿಕೊಳ್ಳಲು ಸೂಚಿಸಲಾಗಿದೆ. ಹಾಗಾಗಿ ಮತ್ತೊಂದು ಸುತ್ತಿನ ರೆಸಾರ್ಟ್ ರಾಜಕಾರಣ ಖಚಿತವಾಗಿದೆ.
ಮುಂಬಯಿಗೆ ತೆರಳಿದವರು ಹಾಗೂ ನಾಟ್ರೀಚೆಬಲ್ ಆದವರಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದು ವಿಪ್ ನೀಡಲು ಚಿಂತನೆ ನಡೆಸಲಾಗಿದೆ. ಸಭೆಗೆ ಬಾರದವರಿಗೆ ವಿಪ್ ಉಲ್ಲಂಘಿಸಿದ ಕಾರಣ ನೀಡಿ ಅಮಾನತು ಶಿಕ್ಷೆ ನೀಡುವ ಪ್ಲಾನ್ ರೂಪಿಸಲಾಗಿದೆ. ಈ ಮೂಲಕ ಅತೃಪ್ತರನ್ನು ಸಸ್ಪೆಂಡ್ ಮಾಡಿ ಸರಕಾರವನ್ನು ಭದ್ರಪಡಿಸಿಕೊಳ್ಳುವ ಲೆಕ್ಕಾಚಾರ ದೋಸ್ತಿಗಳದ್ದಾಗಿದೆ. ಇದಕ್ಕೆ ತಮಿಳುನಾಡು ಮಾದರಿ ಅನುಸರಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಯಾರು ಏನೆಂದರು?
ಬಿಜೆಪಿಯವರು ಅರಾಜಕತೆ ಹುಟ್ಟು ಹಾಕಲು ಹೊರಟಿದ್ದಾರೆ. ಸಂಕ್ರಾಂತಿ ಶಾಂತಿ ತರುತ್ತದೆ. ಬದಲಾಗಿ ಅರಾಜಕತೆ ಉಂಟುಮಾಡುವುದಿಲ್ಲ.
- ಎಚ್.ಕೆ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ನಗರಕ್ಕೆ ದೌಡಾಯಿಸಿದ ವೇಣುಗೋಪಾಲ್, ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಪ್ರದೇಶ ಕಾಂಗ್ರೆಸ್ ಪ್ರಮುಖರೊಂದಿಗೆ ಸುದೀರ್ಘ ಸಭೆ ನಡೆಸಿದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೂ ಅತಿಥಿ ಗೃಹಕ್ಕೆ ತೆರಳಿ ವೇಣುಗೋಪಾಲ್ ಅವರೊಂದಿಗೆ ಸಮಾಲೋಚಿಸಿದರು.
ವೇಣುಗೋಪಾಲ್, ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರು ಸರಕಾರ ಸುಭದ್ರವಾಗಿದೆಯೆಂದೇ ಹೇಳಿಕೊಂಡಿದ್ದಾರೆ. ಆದರೆ, ಎಲ್ಲವೂ ಸರಿಯಿಲ್ಲ ಎನ್ನುವ ಆತಂಕ ಕಾಂಗ್ರೆಸ್ ವಲಯದಲ್ಲಿದೆ. ಜತೆಗೆ ಸರಕಾರವನ್ನು ಬಚಾವ್ ಮಾಡಿಕೊಳ್ಳಲು ಕೈ ನಾಯಕರು ಒಂದಾದ ಮೇಲೊಂದು ಸಭೆ ನಡೆಸಿರುವುದೇ ಈ ದಿಗಿಲಿಗೆ ಸಾಕ್ಷಿ ಎನ್ನುವಂತಿತ್ತು. ಇದರಿಂದಾಗಿ ಕುಮಾರಕೃಪಾ ಅತಿಥಿಗೃಹದ ಅಂಗಳ ರಾಜಕೀಯ ಚಟುವಟಿಕೆಯಿಂದ ಗಿಜಿಗುಡುವಂತಾಯಿತು.
ಕೈಮೀರಿದ್ದಕ್ಕೆ ಕೆಸಿವಿ ಗರಂ
''ಪರಿಸ್ಥಿತಿ ಕೈಮೀರುವ ಹಂತಕ್ಕೆ ಹೋಗಿದೆ. ನಮ್ಮ ಐದಾರು ಶಾಸಕರು ನಾಟ್ ರೀಚೆಬಲ್ ಆಗಿದ್ದಾರೆ. ಅವರೆಲ್ಲ ಮುಂಬಯಿಗೆ ತೆರಳುವವರೆಗೆ ನೀವೇನು ಮಾಡುತ್ತಿದ್ದಿರಿ,'' ಎಂದು ರಾಜ್ಯ ಕಾಂಗ್ರೆಸ್ ನಾಯಕರನ್ನು ವೇಣುಗೋಪಾಲ್ ಪ್ರಶ್ನಿಸಿದರು. ಅಂಥದ್ದೇನೂ ಸಮಸ್ಯೆಯಾಗಿಲ್ಲ. ಎಲ್ಲವೂ ಸರಿಹೋಗಲಿದೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ವಿಫಲ ಯತ್ನ ನಡೆಸುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿದರು. ಇತರರೂ ಇದಕ್ಕೆ ದನಿಗೂಡಿಸಿದರು. ಆದರೆ, ದಿನೇಶ್ ಗುಂಡೂರಾವ್ ಅವರನ್ನು ತರಾಟೆಗೆ ತೆಗೆದುಕೊಂಡ ವೇಣುಗೋಪಾಲ್ ''ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೀವೇನು ಮಾಡಿದ್ದೀರಿ? ಅತೃಪ್ತರನ್ನು ಸಂಪರ್ಕ ಮಾಡಲಿಲ್ಲವೇಕೆ? ಇಲ್ಲಿನ ಸ್ಥಿತಿ ಬಗ್ಗೆ ಹೈಕಮಾಂಡ್ಗೇಕೆ ಮಾಹಿತಿ ರವಾನಿಸಲಿಲ್ಲ?,'' ಎಂದು ಬಿಸಿ ಮುಟ್ಟಿಸಿದರು. ಇದೇ ವೇಳೆ ರಾಜಕೀಯ ಪರಿಸ್ಥಿತಿ ನಿಭಾಯಿಸುವಲ್ಲಿ ಕೆಪಿಸಿಸಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಡಿಕೆಶಿ ಅವರೂ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಆನಂದ್ ಸಿಂಗ್ರಿಂದ ರಹಸ್ಯ ಬಯಲು!
ಸಚಿವ ಡಿಕೆಶಿ ಅವರು ಶಾಸಕ ಆನಂದ್ ಸಿಂಗ್ರನ್ನು ಸಭೆಗೆ ಹಾಜರುಪಡಿಸಿದರು. ಈ ವೇಳೆ 'ಮಂಪರು ಪರೀಕ್ಷೆ' ಮಾಡಿದ ಮಾದರಿಯಲ್ಲೇ ಸಿಂಗ್ರನ್ನು ವಿಚಾರಣೆಗೆ ಒಳಪಡಿಸಿದ ವೇಣುಗೋಪಾಲ್ ಹತ್ತಾರು ಪ್ರಶ್ನೆ ಕೇಳಿದರು. ಚಾಲಾಕಿತನದಿಂದಲೇ ಉತ್ತರಿಸಿದ ಆನಂದ್ ಸಿಂಗ್ ''ಬಿಜೆಪಿಯಿಂದ ಆಮಿಷವಿರುವುದು ನಿಜ. ನಾನದನ್ನು ನಿರಾಕರಿಸಿದ್ದೇನೆ. ಪಕ್ಷ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಾಗೇಂದ್ರ ಕೂಡ ನಮ್ಮ ಜತೆಯಿದ್ದಾರೆ. ಆದರೆ, ನನ್ನ ಮೇಲೆ ಇನ್ನೂ ಒತ್ತಡವಿದೆ. ಬಳ್ಳಾರಿಯ ನಾಲ್ವರು ಸೇರಿ ಕಾಂಗ್ರೆಸ್ನ 9 ಶಾಸಕರನ್ನು ಕರೆತರುವ ಭರವಸೆಯನ್ನು ಬಿಜೆಪಿ ನಾಯಕರಿಗೆ ರಮೇಶ್ ಜಾರಕಿಹೊಳಿ ನೀಡಿದ್ದಾರೆ. ಬಿ.ಸಿ.ಪಾಟೀಲ್, ಡಾ. ಸುಧಾಕರ್ ಅವರಿಗೂ ಬಿಜೆಪಿ ಕಡೆಯಿಂದ ಪದೇಪದೆ ಕರೆ ಹೋಗುತ್ತಿದೆ. ಜೆಡಿಎಸ್ನ ಸತ್ಯನಾರಾಯಣ, ದೇವಾನಂದ ಚೌಹಾಣ್ಗೂ ಗಾಳ ಹಾಕಲು ಬಿಜೆಪಿ ಯತ್ನಿಸಿದೆ,'' ಎಂಬ ಮಾಹಿತಿ ಹಂಚಿಕೊಂಡರೆಂದು ತಿಳಿದು ಬಂದಿದೆ. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್ ''ವೇಣುಗೋಪಾಲ್ ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿಯವರು ನನ್ನನ್ನು ಸಂಪರ್ಕಿಸಿಯೂ ಇಲ್ಲ. ಅಲ್ಲಿಗೆ ಹೋಗುವುದೂ ಇಲ್ಲ,'' ಎಂದರು.
ಡಿಕೆಶಿ ಮುಂಬಯಿ ಟ್ರಿಪ್ ರದ್ದು
ವೇಣುಗೋಪಾಲ್ ಸೂಚನೆಯಂತೆ ಡಿಕೆಶಿ ಅವರ ಮುಂಬಯಿ ಪ್ರವಾಸ ರದ್ದಾಗಿದೆ. ಮುಂಬಯಿ ಹೋಟೆಲ್ನಲ್ಲಿರುವ ಶಾಸಕರನ್ನು ವಾಪಸ್ ಕರೆತರಲು ಅಲ್ಲಿಗೆ ತೆರಳಲು ಡಿಕೆಶಿ ತಯಾರಿ ಮಾಡಿಕೊಂಡಿದ್ದರು. ಆದರೆ, ಮುಂಬಯಿನಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಕಡೆಯಿಂದ ಪ್ರತಿಭಟನೆ ಮಾಡಿಸಲಾಗುವುದು. ತಾವು ಇಲ್ಲಿಯೇ ಇರಿ. ಕಾಗ್ರೆಸ್ ಶಾಸಕರ ಬಂದೋಬಸ್ತ್ ನೋಡಿಕೊಳ್ಳಲು ತಮ್ಮ ಅಗತ್ಯವಿದೆಯೆಂದು ವೇಣುಗೋಪಾಲ್ ಸೂಚಿಸಿದರು ಎನ್ನಲಾಗಿದೆ.
ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆದರೆ ಪ್ರತಿ ತಂತ್ರಗಾರಿಕೆಯೂ ಸಿದ್ಧವಿದೆ. ಬಿಜೆಪಿಯ ಐದಾರು ಶಾಸಕರು ನಿರಂತರ ಸಂಪರ್ಕದಲ್ಲಿದ್ದು ಅವರಿಂದ ರಾಜೀನಾಮೆ ಕೊಡಿಸಲಾಗುವುದು ಎಂದು ಡಿಕೆಶಿ ತಿಳಿಸಿದರು. ಇದೆಲ್ಲ ಸಾಧ್ಯವಾ ಎಂದು ವೇಣುಗೋಪಾಲ್ ಕೇಳಿದರು. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಫೀಲ್ಡಿಗಿಳಿಯಲು ತಾವು ಸಿದ್ಧವೆಂದು ಡಿಕೆಶಿ ಉತ್ಸಾಹ ತೋರಿದರು ಎಂದು ತಿಳಿದು ಬಂದಿದೆ.
ನೋ ಚಾನ್ಸ್ ಎಂದ ರಮೇಶ್ ಜಾರಕಿಹೊಳಿ
ಕಡೆಗೂ ಮುಂಬಯಿಯಲ್ಲಿರುವ ರಮೇಶ್ ಜಾರಕಿಹೊಳಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ ವೇಣುಗೋಪಾಲ್ ವಾಪಸ್ ಬರುವಂತೆ ಮನವೊಲಿಸುವ ಯತ್ನ ಮಾಡಿದರು. ಪುನಃ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನೂ ನೀಡಿದರು. ಇದಕ್ಕೆ ಜಗ್ಗದ ಜಾರಕಿಹೊಳಿ ವಾಪಸ್ ಬರುವ ಪ್ರಶ್ನೆಯಿಲ್ಲವೆಂದು ನಿರಾಕರಿಸಿದರು ಎಂದು ಗೊತ್ತಾಗಿದೆ.
ರೆಸಾರ್ಟ್ ರಾಜಕಾರಣ ಖಚಿತ
ಕಾಂಗ್ರೆಸ್ನ ಎಲ್ಲ ಶಾಸಕರಿಗೆ ಬುಧವಾರ ಸಂಜೆಯೊಳಗೆ ಬೆಂಗಳೂರಿಗೆ ತಲುಪಿಕೊಳ್ಳಲು ಸೂಚಿಸಲಾಗಿದೆ. ಹಾಗಾಗಿ ಮತ್ತೊಂದು ಸುತ್ತಿನ ರೆಸಾರ್ಟ್ ರಾಜಕಾರಣ ಖಚಿತವಾಗಿದೆ.
ಮುಂಬಯಿಗೆ ತೆರಳಿದವರು ಹಾಗೂ ನಾಟ್ರೀಚೆಬಲ್ ಆದವರಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದು ವಿಪ್ ನೀಡಲು ಚಿಂತನೆ ನಡೆಸಲಾಗಿದೆ. ಸಭೆಗೆ ಬಾರದವರಿಗೆ ವಿಪ್ ಉಲ್ಲಂಘಿಸಿದ ಕಾರಣ ನೀಡಿ ಅಮಾನತು ಶಿಕ್ಷೆ ನೀಡುವ ಪ್ಲಾನ್ ರೂಪಿಸಲಾಗಿದೆ. ಈ ಮೂಲಕ ಅತೃಪ್ತರನ್ನು ಸಸ್ಪೆಂಡ್ ಮಾಡಿ ಸರಕಾರವನ್ನು ಭದ್ರಪಡಿಸಿಕೊಳ್ಳುವ ಲೆಕ್ಕಾಚಾರ ದೋಸ್ತಿಗಳದ್ದಾಗಿದೆ. ಇದಕ್ಕೆ ತಮಿಳುನಾಡು ಮಾದರಿ ಅನುಸರಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಯಾರು ಏನೆಂದರು?
ಬಿಜೆಪಿಯವರು ಅರಾಜಕತೆ ಹುಟ್ಟು ಹಾಕಲು ಹೊರಟಿದ್ದಾರೆ. ಸಂಕ್ರಾಂತಿ ಶಾಂತಿ ತರುತ್ತದೆ. ಬದಲಾಗಿ ಅರಾಜಕತೆ ಉಂಟುಮಾಡುವುದಿಲ್ಲ.
- ಎಚ್.ಕೆ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ