* ಜೆಆರ್ ಗಿರೀಶ್, ಬೆಂಗಳೂರು
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಸಂಭವನೀಯ ಅಭ್ಯರ್ಥಿಗಳು ಮತದಾರ ಪ್ರಭುಗಳಿಗೆ ಭಾಗ್ಯಗಳ ಹೊಳೆ ಹರಿಸುತ್ತಿದ್ದಾರೆ. ಮತದಾರರ ಓಲೈಕೆಗೆ ನಾನಾ ಆಮಿಷವೊಡ್ಡುತ್ತಿರುವ ರಾಜಕಾರಣಿಗಳು ಜನರಿಗೆ ತೀರ್ಥಯಾತ್ರೆ, ಪುಣ್ಯ ಕ್ಷೇತ್ರಗಳ ಪ್ರವಾಸದ ಭಾಗ್ಯ ಕಲ್ಪಿಸುತ್ತಿದ್ದಾರೆ! ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರ ಓಲೈಕೆ ಕಸರತ್ತು ಜೋರಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ರೀತಿಯಲ್ಲಿ ಮತದಾರರನ್ನು ಮುಂಗಡ ಬುಕ್ಕಿಂಗ್ ಮಾಡಲಾಗುತ್ತಿದೆ. ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಧಾನಿ ಬೆಂಗಳೂರು, ಬೆಳಗಾವಿ, ಕಲಬುರಗಿ, ಬಳ್ಳಾರಿ, ಮೈಸೂರು ಸೇರಿ ಪ್ರತಿ ಕ್ಷೇತ್ರದಲ್ಲೂ ಸಚಿವರು, ಶಾಸಕರು, ಟಿಕೆಟ್ ಆಕಾಂಕ್ಷಿಗಳು ಸಮಾಜ ಸೇವೆ ನೆಪದಲ್ಲಿ ಮತದಾರರ ಮನವೊಲಿಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ.
ಖರ್ಚಿಲ್ಲದೆ ದೇವರ ದರ್ಶನ ಮಾಡಲು ಅಣಿಯಾಗಿರುವ ಭಕ್ತಗಣ, ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಕಳುಹಿಸುವಂತೆ ಭಾವಿ ಜನಪ್ರತಿನಿಧಿಗಳಿಗೆ ಗಂಟು ಬೀಳುತ್ತಿರುವ ಪ್ರಸಂಗಗಳೂ ವರದಿಯಾಗುತ್ತಿವೆ. ಸಂಭವನೀಯ ಅಭ್ಯರ್ಥಿಗಳು ಮತಗಳು ಕೈ ಜಾರುವ ಭೀತಿಯಲ್ಲಿ ಪ್ರಜೆಗಳ ಪ್ರವಾಸದ ಕೋರಿಕೆ ಈಡೇರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಹಾಗೂ ಓಂಶಕ್ತಿ ಮಾಲಾಧಾರಿಗಳಿಗೆ ಬಸ್ಗಳ ಜತೆಗೆ ಊಟ ವಸತಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಮತದಾರರ ನಾಡಿಮಿಡಿತ ಅರಿತಿರುವ ನೇತಾರರು ಚುನಾವಣೆ ಹಿನ್ನೆಲೆಯಲ್ಲಿ ಖರ್ಚು ವೆಚ್ಚದ ಲೆಕ್ಕ ಹಾಕದೆ ಧಾರಾಳತನ ತೋರುತ್ತಿದ್ದಾರೆ.
ಯುವಕರು, ಮಹಿಳೆಯರು ಟಾರ್ಗೆಟ್:
ಮತದಾರರ ಓಲೈಕೆಗೆ ಅಭ್ಯರ್ಥಿಗಳು ದಿನಕ್ಕೊಂದು ದಾರಿ ಹುಡುಕುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ಓಲೈಕೆ ರಾಜಕಾರಣ ಜೋರಾಗಿದೆ. ಪುರುಷ, ಮಹಿಳಾ ಹಾಗೂ ಯುವ ಮತದಾರರ ಓಲೈಕೆಗೆ ಬೇರೆ ಬೇರೆ ತಂತ್ರಗಾರಿಕೆ ಅನುಸರಿಸಲಾಗುತ್ತಿದೆ. ಕೆಲವೆಡೆ, ಪುಣ್ಯಕ್ಷೇತ್ರದಲ್ಲಿ ದೇವರ ಮುಂದೆ ತಮಗೇ ಮತ ನೀಡುವುದಾಗಿ ಮತದಾರರಿಂದ ಆಣೆ-ಪ್ರಮಾಣ ಮಾಡಿಸುತ್ತಿರುವುದೂ ಬೆಳಕಿಗೆ ಬಂದಿದೆ.
ರಾಜಕೀಯ ನೇತಾರರು ಗ್ರಾಮೀಣ ಭಾಗದಲ್ಲಿರುವ ತಮ್ಮ ಪಕ್ಷದ ಸ್ಥಳೀಯ ಮುಖಂಡರ ಮೂಲಕ ಕ್ರಿಕೆಟ್ ಪಂದ್ಯಾವಳಿ, ವಾಲಿಬಾಲ್, ಕಬಡ್ಡಿ ಸೇರಿ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಯುವ ಸಮೂಹದ ಮತ ಬೇಟೆ ಆರಂಭಿಸಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಸಂಗೀತ ರಸಸಂಜೆ, ನಾಟಕ ಪ್ರದರ್ಶನಕ್ಕೆ ಹಣ ಚೆಲ್ಲಲು ನಾ ಮುಂದು, ತಾ ಮುಂದು ಎಂದು ಮುಂದೆ ಬರುತ್ತಿದ್ದಾರೆ. ಪರಸ್ಪರ ಸ್ಪರ್ಧೆಗೆ ಇಳಿದು ಉಡುಗೊರೆ ಹಂಚುತ್ತಿದ್ದಾರೆ. ಅರಿಶಿನ-ಕುಂಕುಮ, ಮಡಿಲು ತುಂಬುವ ಕಾರ್ಯಕ್ರಮದ ಮೂಲಕ ಮಹಿಳಾ ಮತದಾರರಿಗೆ ಗಾಳ ಹಾಕಲಾಗುತ್ತಿದೆ.
ಸಿಕ್ಕಿದ್ದೇ ಸೀರುಂಡೆ
ಹಿಂದಿನ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿರುವವರು ಈ ಬಾರಿ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದು, ಉಡುಗೊರೆ ಹಂಚಿಕೆಯಲ್ಲಿ ಹಾಲಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ನೋಟ್ಬುಕ್, ಬ್ಯಾಗ್, ಟಿಫನ್ ಬಾಕ್ಸ್, ಶೂ, ಸ್ವೆಟರ್, ಮನೆಗೆ ಗಡಿಯಾರ, ಪುರುಷ ಮತದಾರರಿಗೆ ಕೈಗಡಿಯಾರ, ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾರೆ. ಆಟೋ ಚಾಲಕರಿಗೆ ಟಯರ್, ವಿಮೆ ಬಾಂಡ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಿರಿಯ ನಾಗರಿಕರ ಚಿಕಿತ್ಸೆಗೆ ಹಣಕಾಸು ನೆರವು ನೀಡುತ್ತಿದ್ದಾರೆ. ಮತದಾರರು ಸಿಕ್ಕಿದ್ದೇ ಸೀರುಂಡೆ ಎಂದು ಬಂದಿದ್ದನ್ನೆಲ್ಲಾ ಬಾಚಿಕೊಳ್ಳುತ್ತಿದ್ದಾರೆ.
ಪ್ರವಾಸದ ಜತೆ ಪ್ಯಾಕೇಜ್
ಪುಕ್ಕಟೆಯಾಗಿ ಧರ್ಮಸ್ಥಳ, ಕೇರಳದ ಶಬರಿಮಲೆ, ತಮಿಳುನಾಡಿನ ಮೇಲ್ಮರವತ್ತೂರ್ (ಓಂಶಕ್ತಿ ದೇವಾಲಯ), ಮಲೈ ಮಹದೇಶ್ವರ ಬೆಟ್ಟ, ನಿಮಿಷಾಂಬ ದೇವಸ್ಥಾನ, ಶ್ರೀರಂಗಪಟ್ಟಣ, ಮೈಸೂರಿನ ಚಾಮುಂಡಿ ಬೆಟ್ಟ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಪ್ರವಾಸ ಭಾಗ್ಯ ಲಭಿಸುತ್ತಿದೆ. ಹಾಲಿ ಸಚಿವರು, ಶಾಸಕರು ಹಾಗೂ ಖಂಡಿತ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು, ಕ್ಷೇತ್ರದ ವ್ಯಾಪ್ತಿಯ ಮತದಾರರಿಗೆ ತೀರ್ಥಯಾತ್ರೆ ಜತೆಗೆ ಕ್ರೀಡಾಕೂಟ, ಸಂಗೀತ ರಸಸಂಜೆ ಆಯೋಜನೆಯ ಪ್ಯಾಕೇಜ್ ಸಹ ಘೋಷಿಸುತ್ತಿದ್ದಾರೆ.d
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಸಂಭವನೀಯ ಅಭ್ಯರ್ಥಿಗಳು ಮತದಾರ ಪ್ರಭುಗಳಿಗೆ ಭಾಗ್ಯಗಳ ಹೊಳೆ ಹರಿಸುತ್ತಿದ್ದಾರೆ. ಮತದಾರರ ಓಲೈಕೆಗೆ ನಾನಾ ಆಮಿಷವೊಡ್ಡುತ್ತಿರುವ ರಾಜಕಾರಣಿಗಳು ಜನರಿಗೆ ತೀರ್ಥಯಾತ್ರೆ, ಪುಣ್ಯ ಕ್ಷೇತ್ರಗಳ ಪ್ರವಾಸದ ಭಾಗ್ಯ ಕಲ್ಪಿಸುತ್ತಿದ್ದಾರೆ!
ಖರ್ಚಿಲ್ಲದೆ ದೇವರ ದರ್ಶನ ಮಾಡಲು ಅಣಿಯಾಗಿರುವ ಭಕ್ತಗಣ, ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಕಳುಹಿಸುವಂತೆ ಭಾವಿ ಜನಪ್ರತಿನಿಧಿಗಳಿಗೆ ಗಂಟು ಬೀಳುತ್ತಿರುವ ಪ್ರಸಂಗಗಳೂ ವರದಿಯಾಗುತ್ತಿವೆ. ಸಂಭವನೀಯ ಅಭ್ಯರ್ಥಿಗಳು ಮತಗಳು ಕೈ ಜಾರುವ ಭೀತಿಯಲ್ಲಿ ಪ್ರಜೆಗಳ ಪ್ರವಾಸದ ಕೋರಿಕೆ ಈಡೇರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಹಾಗೂ ಓಂಶಕ್ತಿ ಮಾಲಾಧಾರಿಗಳಿಗೆ ಬಸ್ಗಳ ಜತೆಗೆ ಊಟ ವಸತಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಮತದಾರರ ನಾಡಿಮಿಡಿತ ಅರಿತಿರುವ ನೇತಾರರು ಚುನಾವಣೆ ಹಿನ್ನೆಲೆಯಲ್ಲಿ ಖರ್ಚು ವೆಚ್ಚದ ಲೆಕ್ಕ ಹಾಕದೆ ಧಾರಾಳತನ ತೋರುತ್ತಿದ್ದಾರೆ.
ಯುವಕರು, ಮಹಿಳೆಯರು ಟಾರ್ಗೆಟ್:
ಮತದಾರರ ಓಲೈಕೆಗೆ ಅಭ್ಯರ್ಥಿಗಳು ದಿನಕ್ಕೊಂದು ದಾರಿ ಹುಡುಕುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ಓಲೈಕೆ ರಾಜಕಾರಣ ಜೋರಾಗಿದೆ. ಪುರುಷ, ಮಹಿಳಾ ಹಾಗೂ ಯುವ ಮತದಾರರ ಓಲೈಕೆಗೆ ಬೇರೆ ಬೇರೆ ತಂತ್ರಗಾರಿಕೆ ಅನುಸರಿಸಲಾಗುತ್ತಿದೆ. ಕೆಲವೆಡೆ, ಪುಣ್ಯಕ್ಷೇತ್ರದಲ್ಲಿ ದೇವರ ಮುಂದೆ ತಮಗೇ ಮತ ನೀಡುವುದಾಗಿ ಮತದಾರರಿಂದ ಆಣೆ-ಪ್ರಮಾಣ ಮಾಡಿಸುತ್ತಿರುವುದೂ ಬೆಳಕಿಗೆ ಬಂದಿದೆ.
ರಾಜಕೀಯ ನೇತಾರರು ಗ್ರಾಮೀಣ ಭಾಗದಲ್ಲಿರುವ ತಮ್ಮ ಪಕ್ಷದ ಸ್ಥಳೀಯ ಮುಖಂಡರ ಮೂಲಕ ಕ್ರಿಕೆಟ್ ಪಂದ್ಯಾವಳಿ, ವಾಲಿಬಾಲ್, ಕಬಡ್ಡಿ ಸೇರಿ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಯುವ ಸಮೂಹದ ಮತ ಬೇಟೆ ಆರಂಭಿಸಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಸಂಗೀತ ರಸಸಂಜೆ, ನಾಟಕ ಪ್ರದರ್ಶನಕ್ಕೆ ಹಣ ಚೆಲ್ಲಲು ನಾ ಮುಂದು, ತಾ ಮುಂದು ಎಂದು ಮುಂದೆ ಬರುತ್ತಿದ್ದಾರೆ. ಪರಸ್ಪರ ಸ್ಪರ್ಧೆಗೆ ಇಳಿದು ಉಡುಗೊರೆ ಹಂಚುತ್ತಿದ್ದಾರೆ. ಅರಿಶಿನ-ಕುಂಕುಮ, ಮಡಿಲು ತುಂಬುವ ಕಾರ್ಯಕ್ರಮದ ಮೂಲಕ ಮಹಿಳಾ ಮತದಾರರಿಗೆ ಗಾಳ ಹಾಕಲಾಗುತ್ತಿದೆ.
ಸಿಕ್ಕಿದ್ದೇ ಸೀರುಂಡೆ
ಹಿಂದಿನ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿರುವವರು ಈ ಬಾರಿ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದು, ಉಡುಗೊರೆ ಹಂಚಿಕೆಯಲ್ಲಿ ಹಾಲಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ನೋಟ್ಬುಕ್, ಬ್ಯಾಗ್, ಟಿಫನ್ ಬಾಕ್ಸ್, ಶೂ, ಸ್ವೆಟರ್, ಮನೆಗೆ ಗಡಿಯಾರ, ಪುರುಷ ಮತದಾರರಿಗೆ ಕೈಗಡಿಯಾರ, ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾರೆ. ಆಟೋ ಚಾಲಕರಿಗೆ ಟಯರ್, ವಿಮೆ ಬಾಂಡ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಿರಿಯ ನಾಗರಿಕರ ಚಿಕಿತ್ಸೆಗೆ ಹಣಕಾಸು ನೆರವು ನೀಡುತ್ತಿದ್ದಾರೆ. ಮತದಾರರು ಸಿಕ್ಕಿದ್ದೇ ಸೀರುಂಡೆ ಎಂದು ಬಂದಿದ್ದನ್ನೆಲ್ಲಾ ಬಾಚಿಕೊಳ್ಳುತ್ತಿದ್ದಾರೆ.
ಪ್ರವಾಸದ ಜತೆ ಪ್ಯಾಕೇಜ್
ಪುಕ್ಕಟೆಯಾಗಿ ಧರ್ಮಸ್ಥಳ, ಕೇರಳದ ಶಬರಿಮಲೆ, ತಮಿಳುನಾಡಿನ ಮೇಲ್ಮರವತ್ತೂರ್ (ಓಂಶಕ್ತಿ ದೇವಾಲಯ), ಮಲೈ ಮಹದೇಶ್ವರ ಬೆಟ್ಟ, ನಿಮಿಷಾಂಬ ದೇವಸ್ಥಾನ, ಶ್ರೀರಂಗಪಟ್ಟಣ, ಮೈಸೂರಿನ ಚಾಮುಂಡಿ ಬೆಟ್ಟ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಪ್ರವಾಸ ಭಾಗ್ಯ ಲಭಿಸುತ್ತಿದೆ. ಹಾಲಿ ಸಚಿವರು, ಶಾಸಕರು ಹಾಗೂ ಖಂಡಿತ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು, ಕ್ಷೇತ್ರದ ವ್ಯಾಪ್ತಿಯ ಮತದಾರರಿಗೆ ತೀರ್ಥಯಾತ್ರೆ ಜತೆಗೆ ಕ್ರೀಡಾಕೂಟ, ಸಂಗೀತ ರಸಸಂಜೆ ಆಯೋಜನೆಯ ಪ್ಯಾಕೇಜ್ ಸಹ ಘೋಷಿಸುತ್ತಿದ್ದಾರೆ.d