ಆ್ಯಪ್ನಗರ

ರೆಡ್ಡಿ ವಿರುದ್ಧ ಹಗೆ ಸಾಧಿಸಿಲ್ಲ: ಮುಖ್ಯಮಂತ್ರಿ ಎಚ್‌ಡಿಕೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಬುಧವಾರ ಸಂಜೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ತಮ್ಮ ವಿರುದ್ಧ ಎಚ್‌ಡಿಕೆ ಹಾವಿನಂತೆ ಹಗೆ ಸಾಧಿಸುತ್ತಿದ್ದು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

Vijaya Karnataka Web 14 Nov 2018, 9:22 pm
ಬೆಂಗಳೂರು: ಪೊಂಝಿ ಪ್ರಕರಣದಲ್ಲಿ ಗಣಿ ಧಣಿ ಜಿ. ಜನಾರ್ದನ ರೆಡ್ಡಿ ಅವರನ್ನು ಬಂಧಿಸಿರುವುದರಲ್ಲಿ ತಮ್ಮ ಕೈವಾಡವಿಲ್ಲ, ಅವರ ವಿರುದ್ಧ ಯಾವುದೇ ಷಡ್ಯಂತ್ರ ನಡೆಸಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web CM HDK


ಮಾಜಿ ಸಚಿವ ಜನಾರ್ದನ ರೆಡ್ಡಿ ಬುಧವಾರ ಸಂಜೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ತಮ್ಮ ವಿರುದ್ಧ ಎಚ್‌ಡಿಕೆ ಹಾವಿನಂತೆ ಹಗೆ ಸಾಧಿಸುತ್ತಿದ್ದು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

'ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ನಾನಾಗಲಿ, ನನ್ನ ಸರಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ದ್ವೇಷದ ರಾಜಕಾರಣದಲ್ಲಿ ತೊಡಗಿಲ್ಲ. ಅಧಿಕಾರ ದುರ್ಬಳಕೆಯನ್ನೂ ಮಾಡಿಕೊಂಡಿಲ್ಲ. ಇದನ್ನು ಸ್ಪಷ್ಟವಾಗಿಯೇ ಹೇಳುತ್ತಿದ್ದೇನೆ' ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ನವೆಂಬರ್‌ 7ರಿಂದ ತಮ್ಮ ಸುಳಿವು ಬಿಟ್ಟುಕೊಡದೆ ಇದ್ದ ಜನಾರ್ದನ ರೆಡ್ಡಿ ಮೊನ್ನೆ ಭಾನುವಾರ ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು. ಬಳಿಕ ಅವರನ್ನು ಬಂಧಿಸಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ನವೆಂಬರ್ 24ರ ವರೆಗೆ ರೆಡ್ಡಿ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.

12 ವರ್ಷದ ಹಗೆ ತೀರಿಸಲು ಸಿಎಂ ಎಚ್‌ಡಿಕೆ ಷಡ್ಯಂತ್ರ: ಜೈಲಿನಿಂದ ಮುಕ್ತರಾದ ಜನಾರ್ದನ ರೆಡ್ಡಿ ವಾಗ್ದಾಳಿ

ಕೋಟ್ಯಂತರ ರೂಪಾಯಿಯ ಪೊಂಝಿ ಸ್ಕೀಮ್ ವಂಚನೆಗೆ ಸಂಬಂಧಿಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ವಿಚಾರದಲ್ಲಿ ರೆಡ್ಡಿ ಅವರ ಬಂಧನಕ್ಕೆ ಸಿಸಿಬಿ ಕಳೆದ ವಾರ ಶೋಧ ಆರಂಭಿಸಿತ್ತು.

ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈವೆಟ್ ಲಿಮಿಟೆಡ್‌ ಸಂಸ್ಥೆಯ ಸಯ್ಯದ್‌ ಅಹ್ಮದ್ ಫರೀದ್‌ ಜತೆಗೆ 20 ಕೋಟಿ ರೂ.ಗಳ ವ್ಯವಹಾರದಲ್ಲಿ ರೆಡ್ಡಿ ಅವರ ಆಪ್ತ ಆಲಿ ಖಾನ್‌ ಶಾಮೀಲಾಗಿದ್ದಾರೆ ಎಂಬ ಆರೋಪದಲ್ಲಿ ರೆಡ್ಡಿ ಅವರಿಗಾಗಿ ಸಿಸಿಬಿ ಹುಡುಕಾಟ ನಡೆಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ