ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ಕೆಲವು ಸಂಘಟನೆಗಳು ಗುರುವಾರ ನೀಡಿದ್ದ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಉ.ಕ.ದ 13 ಜಿಲ್ಲೆಗಳಲ್ಲಿ ಜನಜೀವನ ಎಂದಿನಂತೆ ಇತ್ತು. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸಿಎಂ ಕುಮಾರಸ್ವಾಮಿ ಭರವಸೆಯ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯು 'ಬಂದ್' ಕೈ ಬಿಟ್ಟಿರುವುದಾಗಿ ಬುಧವಾರ ಸ್ಪಷ್ಟಪಡಿಸಿತ್ತು. ಆದರೆ, ಉತ್ತರ ಕರ್ನಾಟಕ ರೈತ ಸಂಘ ಮಾತ್ರ ಬಂದ್ ನಡೆಸಿಯೇ ತೀರುವುದಾಗಿ ಹೇಳಿತ್ತು. ಜನರು ಮಾತ್ರ ಬಂದ್ಗೆ ಸ್ಪಂದಿಸಲಿಲ್ಲ. ಅಲ್ಲಲ್ಲಿ ಉ.ಕ.ಅಭಿವೃದ್ಧಿಗೆ ಆಗ್ರಹಿಸಿ ಕೆಲವರು ಪ್ರತಿಭಟಿಸಿದರು. ಜತೆಗೆ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಏಕತೆಯ ಸಂಕೇತವಾಗಿ ಜನರಿಗೆ ಗುಲಾಬಿ ಹೂ ನೀಡಿ ಗಮನ ಸೆಳೆದರು.
ಉ.ಕ.ದ 13 ಜಿಲ್ಲೆಗಳಲ್ಲಿ ಜನಜೀವನ ಎಂದಿನಂತೆ ಇತ್ತು. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸಿಎಂ ಕುಮಾರಸ್ವಾಮಿ ಭರವಸೆಯ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯು 'ಬಂದ್' ಕೈ ಬಿಟ್ಟಿರುವುದಾಗಿ ಬುಧವಾರ ಸ್ಪಷ್ಟಪಡಿಸಿತ್ತು. ಆದರೆ, ಉತ್ತರ ಕರ್ನಾಟಕ ರೈತ ಸಂಘ ಮಾತ್ರ ಬಂದ್ ನಡೆಸಿಯೇ ತೀರುವುದಾಗಿ ಹೇಳಿತ್ತು. ಜನರು ಮಾತ್ರ ಬಂದ್ಗೆ ಸ್ಪಂದಿಸಲಿಲ್ಲ. ಅಲ್ಲಲ್ಲಿ ಉ.ಕ.ಅಭಿವೃದ್ಧಿಗೆ ಆಗ್ರಹಿಸಿ ಕೆಲವರು ಪ್ರತಿಭಟಿಸಿದರು. ಜತೆಗೆ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಏಕತೆಯ ಸಂಕೇತವಾಗಿ ಜನರಿಗೆ ಗುಲಾಬಿ ಹೂ ನೀಡಿ ಗಮನ ಸೆಳೆದರು.