ಆ್ಯಪ್ನಗರ

ನೂತನ ಸಂಪುಟದಲ್ಲಿ ವಲಸಿಗರ ಪೈಕಿ ಕೆಲವರಿಗೆ ಕೊಕ್?

ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ 17 ಶಾಸಕರ ಪೈಕಿ ಬಹುತೇಕ ಮಂದಿಗೆ ಯಡಿಯೂರಪ್ಪ ಸರಕಾರದಲ್ಲಿ ಸಚಿವ ಸ್ಥಾನ ಸಿಕ್ಕಿತ್ತು. ಆದರೆ ಇದೀಗ ಸಂಪುಟ ವಿಸರ್ಜನೆ ಆಗಿದ್ದು, ಹೊಸ ಸಿಎಂ ಜೊತೆ ಸಚಿವರ ಹೊಸ ತಂಡವೂ ರಚನೆಯಾಗಲಿದೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 26 Jul 2021, 5:35 pm

ಹೈಲೈಟ್ಸ್‌:

  • ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ 17 ಶಾಸಕರ ಪೈಕಿ ಬಹುತೇಕ ಮಂದಿಗೆ ಯಡಿಯೂರಪ್ಪ ಸರಕಾರದಲ್ಲಿ ಸಚಿವ ಸ್ಥಾನ ಸಿಕ್ಕಿತ್ತು
  • ಆದರೆ ಇದೀಗ ಸಂಪುಟ ವಿಸರ್ಜನೆ ಆಗಿದ್ದು, ಹೊಸ ಸಿಎಂ ಜೊತೆ ಸಚಿವರ ಹೊಸ ತಂಡವೂ ರಚನೆಯಾಗಲಿದೆ
  • ಇದೀಗ ಹೊಸ ಸಂಪುಟ ರಚನೆಯಾದಲ್ಲಿ ವಲಸಿಗರ ಪೈಕಿ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಿವೆ ಬಿಜೆಪಿ ಮೂಲಗಳು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Migrant ministers operation kamala

ಬೆಂಗಳೂರು: ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಸಂಪುಟವೂ ವಿಸರ್ಜನೆಗೊಂಡಿದೆ. ಸದ್ಯ ಮುಂದಿನ ಸಿಎಂ ಹಾಗೂ ಅವರ ಕ್ಯಾಬಿನೆಟ್ ಹೇಗಿರುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಆದರೆ ನೂತನ ಸಂಪುಟದಲ್ಲಿ, ಸಚಿವರಾಗಿದ್ದ ವಲಸಿಗರ ಪೈಕಿ ಎಲ್ಲರಿಗೂ ಅವಕಾಶ ಸಿಗಲಿದ್ಯಾ? ಎಂಬ ಪ್ರಶ್ನೆ ಕಾಡುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ 17 ಶಾಸಕರ ಪೈಕಿ ಬಹುತೇಕ ಮಂದಿಗೆ ಸಚಿವ ಸ್ಥಾನ ಸಿಕ್ಕಿತ್ತು. ಆದರೆ ಇದೀಗ ಸಂಪುಟ ವಿಸರ್ಜನೆ ಆಗಿದೆ. ರಾಜ್ಯಕ್ಕೆ ಹೊಸ ಸಿಎಂ ಜೊತೆ ಸಚಿವರ ಹೊಸ ತಂಡವೂ ರಚನೆಯಾಗಲಿದೆ. ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ವಲಸಿಗರಿಗೆ ಮಹತ್ವದ ಖಾತೆಯನ್ನು ನೀಡಲಾಗಿತ್ತು.‌ ಇದಕ್ಕೆ ಮೂಲ ಬಿಜೆಪಿಗರಿಂದ ವಿರೋಧವೂ ವ್ಯಕ್ತವಾಗಿತ್ತು.
ಬಿಎಸ್‌ವೈ ರಾಜೀನಾಮೆ ಜತೆಗೆ ಸಂಪುಟವೂ ವಿಸರ್ಜನೆ, ಸಚಿವರೆಲ್ಲರೂ ಆದ್ರೂ ಮಾಜಿ, ಹೊಸ ಮುಖಕ್ಕೆ ಮಣೆ?

ಆದರೆ ಇದೀಗ ಹೊಸ ಸಂಪುಟ ರಚನೆಯಾದಲ್ಲಿ ವಲಸಿಗರ ಪೈಕಿ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಸಹಜವಾಗಿ ಈ ಬೆಳವಣಿಗೆ ವಲಸಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಿಎಸ್ ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದಿರುವ ವಲಸಿಗರ ಭವಿಷ್ಯ ಏನು ಎಂಬ ಆತಂಕವೂ ಅವರಲ್ಲಿ ಕಾಡಲು ಶುರುವಾಗಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ