ಆ್ಯಪ್ನಗರ

ಗಾಂಧಿ ಆತ್ಮ ಕೊಂದ ಪ್ರಜ್ಞಾ: ಸತ್ಯಾರ್ಥಿ ವಿಷಾದ

ನಾಥೂರಾಮ್‌ ಗೋಡ್ಸೆ ಮಹಾತ್ಮ ಗಾಂಧಿಯವರ ದೇಹವನ್ನು ಕೊಂದರೆ, ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಂಥವರು ಗಾಂಧೀಜಿಯ ಆತ್ಮವನ್ನೇ ಕೊಲ್ಲುತ್ತಿದ್ದಾರೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ವಿಷಾದ ವ್ಯಕ್ತಪಡಿಸಿದ್ದಾರೆ.

Vijaya Karnataka 19 May 2019, 5:00 am
ಹೊಸದಿಲ್ಲಿ: ನಾಥೂರಾಮ್‌ ಗೋಡ್ಸೆ ಮಹಾತ್ಮ ಗಾಂಧಿಯವರ ದೇಹವನ್ನು ಕೊಂದರೆ, ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಂಥವರು ಗಾಂಧೀಜಿಯ ಆತ್ಮವನ್ನೇ ಕೊಲ್ಲುತ್ತಿದ್ದಾರೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ವಿಷಾದ ವ್ಯಕ್ತಪಡಿಸಿದ್ದಾರೆ.
Vijaya Karnataka Web prajna killed gandhi soul says kylash satyarthi
ಗಾಂಧಿ ಆತ್ಮ ಕೊಂದ ಪ್ರಜ್ಞಾ: ಸತ್ಯಾರ್ಥಿ ವಿಷಾದ


''ಗೋಡ್ಸೆಯನ್ನು ಮಹಾನ್‌ ದೇಶಭಕ್ತ ಎಂದು ಬಣ್ಣಿಸಿರುವ ಭೋಪಾಲ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿ ರಾಜಧರ್ಮ ಎತ್ತಿ ಹಿಡಿಯಬೇಕು,'' ಎಂದು ಆಗ್ರಹಿಸಿದರು.

''ಗಾಂಧಿ ವಿರುದ್ಧ ಮಾತಾಡುವ ಮೂಲಕ ಪ್ರಜ್ಞಾ ಅವರು ಅಹಿಂಸೆ, ಶಾಂತಿ ಮತ್ತು ಈ ದೇಶದ ಆತ್ಮವನ್ನೇ ಕೊಂದಿದ್ದಾರೆ. ಬಲಪ್ರದರ್ಶನ ಹಾಗೂ ರಾಜಕೀಯ ಕಿತ್ತಾಟಗಳಿಂದ ಗಾಂಧಿ ಅವರಂಥ ಚೇತನವನ್ನು ದೂರ ಇಡಬೇಕಾದ ಅಗತ್ಯ ಇದೆ,'' ಎಂದು ಅವರು ಸಲಹೆ ಮಾಡಿದರು.

ವ್ಯಾಪಕ ಟೀಕೆಯ ಬಳಿಕ ಎಚ್ಚೆತ್ತ ಪ್ರಜ್ಞಾ ಅವರು, ಗೋಡ್ಸೆ ಕುರಿತ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು. ದೇಶಕ್ಕಾಗಿ ಗಾಂಧಿ ನೀಡಿದ ಕೊಡುಗೆ ಸ್ಮರಿಸಿದ್ದರು.


ಸಾಧ್ವಿ ಪ್ರಜ್ಞಾ ಸಿಂಗ್‌ ವಿರುದ್ಧ ಪ್ರಧಾನಿ ಶಿಸ್ತುಕ್ರಮ ಜರುಗಿಸಬೇಕು. ಮಾತ್ರವಲ್ಲ, ನಾಥೂರಾಮ್‌ ಗೋಡ್ಸೆ ಕುರಿತು ತಮ್ಮ ಮನಸ್ಸಿನಲ್ಲಿ ನಿಜವಾಗಿ ಏನಿದೆ ಎನ್ನುವುದನ್ನೂ ಅವರು ಬಹಿರಂಗಪಡಿಸಬೇಕು.

- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ನಾಯಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ