ಆ್ಯಪ್ನಗರ

ಪ್ರಜ್ವಲ್‌ ತ್ಯಾಗದ ಮಾತಿಗೆ ತಡೆಯೊಡ್ಡಿದ ದೇವೇಗೌಡ

ಹಾಸನ ಕ್ಷೇತ್ರವನ್ನು ತಮಗಾಗಿ ತ್ಯಾಗ ಮಾಡುವ ಮೊಮ್ಮಗ ಪ್ರಜ್ವಲ್‌ ರೇವಣ್ಣ ತೀರ್ಮಾನವನ್ನು ಖುದ್ದು ಎಚ್‌ಡಿದೇವೇಗೌಡರು ತಡೆದಿದ್ದಾರೆ...

Vijaya Karnataka Web 25 May 2019, 5:00 am
ಬೆಂಗಳೂರು: ಹಾಸನ ಕ್ಷೇತ್ರವನ್ನು ತಮಗಾಗಿ ತ್ಯಾಗ ಮಾಡುವ ಮೊಮ್ಮಗ ಪ್ರಜ್ವಲ್‌ ರೇವಣ್ಣ ತೀರ್ಮಾನವನ್ನು ಖುದ್ದು ಎಚ್‌.ಡಿ.ದೇವೇಗೌಡರು ತಡೆದಿದ್ದಾರೆ.
Vijaya Karnataka Web prajwal


ತುಮಕೂರಿನಲ್ಲಿ ದೇವೇಗೌಡರಿಗೆ ಸೋಲಾದ ನಂತರ ಶುಕ್ರವಾರ ತಾತನನ್ನು ಭೇಟಿ ಮಾಡಿ, ನಿಮಗಾಗಿ ರಾಜೀನಾಮೆ ನೀಡುವುದಾಗಿ ದೇವೇಗೌಡರಿಗೆ ಪ್ರಜ್ವಲ್‌ ಹೇಳಿದ್ದಾರೆ. ಇದಕ್ಕೆ ರೇವಣ್ಣ ದಂಪತಿಯೂ ಧ್ವನಿಗೂಡಿಸಿ ''ಪ್ರಜ್ವಲ್‌ಗಾಗಿ ನೀವು ಸ್ವಂತ ಕ್ಷೇತ್ರ ಬಿಟ್ಟು ಬೇರೆಡೆ ಹೋಗಿ ಸೋಲುವಂತಾಯಿತು. ತಾವು ರಾಜಕಾರಣದಲ್ಲಿ ಮುಂದುವರಿಯಬೇಕು. ಪ್ರಜ್ವಲ್‌ ತೀರ್ಮಾನವನ್ನು ಒಪ್ಪಿಕೊಳ್ಳಿ'' ಎಂದು ಮನವಿ ಮಾಡಿದ್ದಾರೆ. ಈ ಮನವಿಯನ್ನು ದೇವೇಗೌಡರು ತಿರಸ್ಕರಿಸಿ, ತಮ್ಮ ಉತ್ತರಾಧಿಕಾರಿಯಾಗಿ ಹಾಸನದಲ್ಲಿ ಉತ್ತಮ ಕೆಲಸಗಳ ಮೂಲಕ ಮುಂದುವರಿಯಲು ಹಾರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ