ಆ್ಯಪ್ನಗರ

ಪ್ರಜ್ವಲ್‌ ದಾಖಲೆ ಡಿಸಿಗೆ ಮೂರು ದಿನ ಟೈಂ

ಲೋಕಸಭಾ ಚುನಾವಣೆ ವೇಳೆ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ದಾಖಲೆಗಳು, ನಾಮಪತ್ರ ವಿವರಗಳು ಹಾಗೂ ಚುನಾವಣಾ ವೆಚ್ಚದ ದೃಢೀಕರಣ ...

Vijaya Karnataka 2 Jul 2019, 5:00 am
ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ದಾಖಲೆಗಳು, ನಾಮಪತ್ರ ವಿವರಗಳು ಹಾಗೂ ಚುನಾವಣಾ ವೆಚ್ಚದ ದೃಢೀಕರಣ ಪ್ರತಿಗಳನ್ನು ಜು.3ರೊಳಗೆ ಅರ್ಜಿದಾರರಿಗೆ ಒದಗಿಸಲು ಹಾಸನ ಜಿಲ್ಲಾಧಿಕಾರಿಗೆ ಹೈಕೋರ್ಟ್‌ ಆದೇಶ ನೀಡಿದೆ.
Vijaya Karnataka Web highcourt


ಹಾಸನ ಮೂಲದ ವಕೀಲ ಜಿ.ದೇವರಾಜೇ ಗೌಡ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾ.ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯಪೀಠ ಹಾಸನ ಜಿಲ್ಲಾಧಿಕಾರಿಗೆ ಈ ಆದೇಶ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

''ಅರ್ಜಿದಾರರು ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಪ್ರಜ್ವಲ್‌ ರೇವಣ್ಣ ಕುರಿತು ಕೇಳಿರುವ ಎಲ್ಲ ಮಾಹಿತಿಯನ್ನು ಜು.3ರೊಳಗೆ ಒದಗಿಸಲೇಬೇಕು. ಏಕೆಂದರೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಲು 45 ದಿನಗಳ ಕಾಲಾವಕಾಶ ಇದ್ದು, ಅದು ಜು.6ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಜು.3ರೊಳಗೆ ವಿವರ ನೀಡಬೇಕು,'' ಎಂದು ಸೂಚನೆ ನೀಡಿದೆ.

ಅರ್ಜಿದಾರರು, ಪ್ರಜ್ವಲ್‌ ಸಲ್ಲಿಸಿರುವ ದಾಖಲೆಗಳನ್ನು ಕೋರಿ ಏ.29ರಂದು ಮನವಿ ಸಲ್ಲಿಸಲಾಗಿತ್ತು.ಆದರೆ ಜಿಲ್ಲಾಧಿಕಾರಿಗಳು ಅಗತ್ಯ ಮಾಹಿತಿಯನ್ನು ನೀಡದೆ, ಆ ದಾಖಲೆಗಳನ್ನು ಖಜಾನೆಯಲ್ಲಿ ಭದ್ರವಾಗಿಡಲಾಗಿದೆ. ಹಾಗಾಗಿ ನೀಡಲಾಗದೆಂಬ ಉತ್ತರ ನೀಡಿದ್ದಾರೆ,''ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

''ಕೇಳಿರುವ ಎಲ್ಲ ಮಾಹಿತಿಗಳೂ ಚುನಾವಣೆ ನಿಯಮ 1961ರ ನಿಯಮ 93(2) ಮತ್ತು (3)ರ ಅನ್ವಯ ಸಾರ್ವಜನಿಕ ದಾಖಲೆಗಳು. ಅವುಗಳನ್ನು ಅಗತ್ಯ ಶುಲ್ಕ ಪಡೆದು ನೀಡಬೇಕಾದ್ದು ಅಧಿಕಾರಿಗಳ ಕರ್ತವ್ಯ. ಆದರೆ ಜಿಲ್ಲಾಧಿಕಾರಿಗಳು ದಾಖಲೆಗಳನ್ನು ನೀಡದೆ ಇರುವುದರಿಂದ ಕಾನೂನು ಪ್ರಕಾರ ಚುನಾವಣಾ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ,'' ಎಂದು ಅವರು ನ್ಯಾಯಪೀಠಕ್ಕೆ ವಿವರಿಸಿದ್ದರು.

ಅರ್ಜಿದಾರರ ತಕರಾರು

ತಕರಾರು ಅರ್ಜಿ ಸಲ್ಲಿಸಲು 45 ದಿನ ಅವಧಿ

ನಿಯಮದಂತೆ ದಾಖಲೆ ಸಾರ್ವಜನಿಕವಾದುದು

ದಾಖಲೆ ಖಜಾನೆಯಲ್ಲಿ ಭದ್ರ ಎಂಬ ಸಬೂಬು

ಏ.29ರಂದೇ ದಾಖಲೆಗೆ ಮನವಿ ಸಲ್ಲಿಕೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ