ಆ್ಯಪ್ನಗರ

ಪ್ರಕಾಶ್‌ರಾಜ್‌ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಎಚ್ಚರಿಕೆ

ಬೆಂಗಳೂರು ಸೆಂಟ್ರಲ್‌ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್‌ರಾಜ್‌ ಮೂರು ರಾಜ್ಯಗಳಲ್ಲಿ 4 ಕಡೆ ಎಪಿಕ್‌ ಕಾರ್ಡ್‌ ಹೊಂದಿದ್ದು, ಇದರ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದು ಸಮಾಜ ಸೇವಕ ಕೆ ಗಿರೀಶ್‌ಕುಮಾರ್‌ ನಾಯ್ಡು ತಿಳಿಸಿದರು.

Vijaya Karnataka 1 Apr 2019, 5:00 am
ಬೆಂಗಳೂರು :ಬೆಂಗಳೂರು ಸೆಂಟ್ರಲ್‌ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್‌ರಾಜ್‌ ಮೂರು ರಾಜ್ಯಗಳಲ್ಲಿ 4 ಕಡೆ ಎಪಿಕ್‌ ಕಾರ್ಡ್‌ ಹೊಂದಿದ್ದು, ಇದರ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದು ಸಮಾಜ ಸೇವಕ ಕೆ ಗಿರೀಶ್‌ಕುಮಾರ್‌ ನಾಯ್ಡು ತಿಳಿಸಿದರು.
Vijaya Karnataka Web prakash raj against case says activist
ಪ್ರಕಾಶ್‌ರಾಜ್‌ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಎಚ್ಚರಿಕೆ


ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ''ಹಾಲಿ ಚುನಾವಣೆಯಲ್ಲಿ ಶಾಂತಿನಗರ ವಿಧಾನಸಭೆ ಕ್ಷೇತ್ರದ ಮತದಾರನಾಗಿದ್ದೇನೆಂದು ನಾಮಪತ್ರದಲ್ಲಿ ನಮೂದಿಸಿದ್ದಾರೆ. ಇದಲ್ಲದೆ ತಮಿಳುನಾಡಿನ ವೆಲಚೇರಿ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಕಡೆ ಹಾಗೂ ತೆಲಂಗಾಣದ ಸೆರಿಲಿಂಗಂಪಲ್ಲಿ ಕ್ಷೇತ್ರದಲ್ಲಿ ಗುರುತುಚೀಟಿ ಹೊಂದಿದ್ದಾರೆ. ನಿಯಮದಂತೆ ಒಂದು ಕಡೆ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕೆಂಬ ನಿಯಮ ಇದ್ದರೂ, ಪ್ರಕಾಶ್‌ರಾಜ್‌ ನಾಲ್ಕು ಕಡೆ ಎಪಿಕ್‌ ಕಾರ್ಡ್‌ ಏಕೆ ಪಡೆದಿದ್ದಾರೆ,'' ಎಂದು ಪ್ರಶ್ನಿಸಿದರು.

''ಆಯೋಗಕ್ಕೆ ದೂರು ನೀಡಿದ್ದರೂ ಈವರೆಗೆ ಸೂಕ್ತ ಕ್ರಮ ಜರುಗಿಸಿಲ್ಲ. ಕನಿಷ್ಠ ಪಕ್ಷ ಆಯಾ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಪತ್ರ ಬರೆದು ಸಮಜಾಯಿಷಿ ಕೇಳಿಲ್ಲ,'' ಎಂದು ಆಕ್ಷೇಪಿಸಿದರು.

''ಒಂದಕ್ಕಿಂತ ಹೆಚ್ಚು ಕಡೆ ಹೆಸರು ಸೇರ್ಪಡೆ ಮಾಡಿಕೊಂಡಿದ್ದು ಸಾಬೀತಾದಲ್ಲಿ ಅಂಥ ವ್ಯಕ್ತಿ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 17ರ ಪ್ರಕಾರ ಒಂದು ವರ್ಷ ಜೈಲು ಹಾಗೂ 1000 ರೂ. ಜುಲ್ಮಾನೆ ಒಳಗೊಂಡ ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ ಕೋರ್ಟ್‌ ಮೊರೆ ಹೋಗುತ್ತಿದ್ದೇನೆ,'' ಎಂದು ಗಿರೀಶ್‌ಕುಮಾರ್‌ ನಾಯ್ಡು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ