ದೆವ್ವವಾಗಿ ಪ್ರ್ಯಾಂಕ್ ಮಾಡಲು ಹೋದವರು ಕೊನೆಗೆ ಸೇರಿದ್ದೆಲ್ಲಿಗೆ ಗೊತ್ತಾ !
ದೈವದ ವೇಷ ತೊಟ್ಟು ಸಾರ್ವಜನಿಕರನ್ನು ಬೆದರಿಸಿದ ಆರೋಪದಡಿಯಲ್ಲಿ ಏಳು ಜನ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಯಶವಂತಪುರದ ಶರೀಫ್ ನಗರದಲ್ಲಿ ಭಾನುವಾರ ರಾತ್ರಿ ಪ್ರ್ಯಾಂಕರ್ಗಳು ಈ ಕೃತ್ಯ ಎಸಗಿದ್ದಾರೆ.
Vijaya Karnataka Web 11 Nov 2019, 6:17 pm
ಬೆಂಗಳೂರು: ವಿವಿಧ ವೇಷ ತೊಟ್ಟು ರಾತ್ರಿಯ ವೇಳೆ ರಸ್ತೆಯಲ್ಲಿ, ಪಾರ್ಕಿಂಗ್ ಏರಿಯಾಗಳಲ್ಲಿ ಸಾರ್ವಜನಿಕರನ್ನು ಪ್ರ್ಯಾಂಕ್ ಮಾಡುವ ವಿಡಿಯೋಗಳನ್ನು ನೀವು ನೋಡಿರಬಹುದು. ಕೆಲವು ಪ್ರ್ಯಾಂಕರ್ಗಳ ಹುಚ್ಚಾಟಕ್ಕೆ ಭಯಬಿದ್ದು ಓಡುವ ಸಂದರ್ಭದಲ್ಲಿ ಅಪಾಯ ಸಂಭವಿಸಿದ ಉದಾಹರಣೆಗಳು ಇವೆ. ಹೀಗೆ ಬೆಂಗಳೂರಿನ ರಸ್ತೆಗಳಲ್ಲಿ ದೆವ್ವದ ವೇಷ ಹಾಕಿಕೊಂಡು ಸಾರ್ವಜನಿಕರನ್ನು ಪ್ರ್ಯಾಂಕ್ ಮಾಡಲು ಹೋದ ಯುವಕರು ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ.
ವೈರಲ್ ವಿಡಿಯೋ: ಪ್ರತಿಭಟನೆಗೆ ಬರಲು ನಿರಾಕರಿಸಿದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ!
ಭಾನುವಾರ ತಡರಾತ್ರಿ ನಗರದ ಯಶವಂತಪುರ ಶರೀಫ್ ನಗರದಲ್ಲಿ ಏಳು ಜನರ ಯುವಕರು ಇಂತಹ ಕಿತಾಪತಿಗೆ ಕೈಹಾಕಿದ್ದಾರೆ. ದೆವ್ವದ ವೇಷ ತೊಟ್ಟು ಬೀದಿಯಲ್ಲಿ ನಡೆದುಕೊಂಡು ಹೋಗಿ ಹಲವರನ್ನು ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಯಶವಂತಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ದೈವವಾಗಿ ಕಾಡಿದ ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ದುಷ್ಕರ್ಮಿಗಳಿಂದ ನಾಯಿ ಮೇಲೆ ಗುಂಡಿನ ದಾಳಿ, ಜೀವ ಉಳಿಸಲು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ
ಭಾನುವಾರ ರಾತ್ರಿ ಅಯೋಧ್ಯೆ ತೀರ್ಪು, ಟಿಪ್ಪು ಜಯಂತಿ, ಈದ್ ಮಿಲಾದ್ ಹಿನ್ನೆಲೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಇಂತಹ ಸಂದರ್ಭದಲ್ಲಿ ರಾತ್ರಿ 2:30 ರಲ್ಲಿ ದೆವ್ವದ ವೇಷ ಧರಿಸಿ ಹುಡುಗರು ಸಾರ್ವಜನಿಕರನ್ನು, ವಾಹನ ಸವಾರರನ್ನು ಅಡ್ಡಗಟ್ಟಿದ್ದರು. ಹೆದರಿ ತೊಂದರೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು. ಹಾಗಾಗಿ, ಅವರನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದರು.
ಪ್ರಾಂಕ್ ಮಾಡಲು ಯಾವುದೇ ತೊಂದರೆಯಿಲ್ಲ. ಆದರೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಯಾವ ಸಂದರ್ಭದಲ್ಲಿ ಮಾಡಬೇಕು ಎನ್ನುವ ಜ್ಞಾನ ಹೊಂದಿರಬೇಕು. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಂದರ್ಭದಲ್ಲಿ ಈ ರೀತಿ ಮಾಡಬಾರದು ಎಂದು ಡಿಸಿಪಿ ಮನವಿ ಮಾಡಿದರು. ಬಂಧಿತರ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಪ್ರಕರಣದಡಿಯಲ್ಲಿ ದೂರು ದಾಖಲಿಸಲಾಗಿದೆ.
ವೈರಲ್ ವಿಡಿಯೋ: ಪ್ರತಿಭಟನೆಗೆ ಬರಲು ನಿರಾಕರಿಸಿದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ!
ಭಾನುವಾರ ತಡರಾತ್ರಿ ನಗರದ ಯಶವಂತಪುರ ಶರೀಫ್ ನಗರದಲ್ಲಿ ಏಳು ಜನರ ಯುವಕರು ಇಂತಹ ಕಿತಾಪತಿಗೆ ಕೈಹಾಕಿದ್ದಾರೆ. ದೆವ್ವದ ವೇಷ ತೊಟ್ಟು ಬೀದಿಯಲ್ಲಿ ನಡೆದುಕೊಂಡು ಹೋಗಿ ಹಲವರನ್ನು ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಯಶವಂತಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ದೈವವಾಗಿ ಕಾಡಿದ ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ದುಷ್ಕರ್ಮಿಗಳಿಂದ ನಾಯಿ ಮೇಲೆ ಗುಂಡಿನ ದಾಳಿ, ಜೀವ ಉಳಿಸಲು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ
ಭಾನುವಾರ ರಾತ್ರಿ ಅಯೋಧ್ಯೆ ತೀರ್ಪು, ಟಿಪ್ಪು ಜಯಂತಿ, ಈದ್ ಮಿಲಾದ್ ಹಿನ್ನೆಲೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಇಂತಹ ಸಂದರ್ಭದಲ್ಲಿ ರಾತ್ರಿ 2:30 ರಲ್ಲಿ ದೆವ್ವದ ವೇಷ ಧರಿಸಿ ಹುಡುಗರು ಸಾರ್ವಜನಿಕರನ್ನು, ವಾಹನ ಸವಾರರನ್ನು ಅಡ್ಡಗಟ್ಟಿದ್ದರು. ಹೆದರಿ ತೊಂದರೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು. ಹಾಗಾಗಿ, ಅವರನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದರು.
ಪ್ರಾಂಕ್ ಮಾಡಲು ಯಾವುದೇ ತೊಂದರೆಯಿಲ್ಲ. ಆದರೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಯಾವ ಸಂದರ್ಭದಲ್ಲಿ ಮಾಡಬೇಕು ಎನ್ನುವ ಜ್ಞಾನ ಹೊಂದಿರಬೇಕು. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಂದರ್ಭದಲ್ಲಿ ಈ ರೀತಿ ಮಾಡಬಾರದು ಎಂದು ಡಿಸಿಪಿ ಮನವಿ ಮಾಡಿದರು. ಬಂಧಿತರ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಪ್ರಕರಣದಡಿಯಲ್ಲಿ ದೂರು ದಾಖಲಿಸಲಾಗಿದೆ.