ಆ್ಯಪ್ನಗರ

ಜೆಡಿಎಸ್‌ ಸಹಾಯಕ್ಕೆ ಬರ್ತಾರಾ ಪ್ರಶಾಂತ್‌ ಕಿಶೋರ್‌? ಮಾತುಕತೆ ನಡೆಯುತ್ತಿದೆ ಎಂದ ಎಚ್‌ಡಿಕೆ

“ಭವಿಷ್ಯದಲ್ಲಿ ರಾಜಕೀಯವಾಗಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನಾನು ಅವರ (ಪ್ರಶಾಂತ್‌ ಕಿಶೋರ್‌) ಜೊತೆ ಮಾತನಾಡಿದ್ದೇನೆ. ಮೊದಲ ಸುತ್ತಿನ ಮಾತುಕತೆಗಳು ನಡೆದಿವೆ. ಈ ಬಗ್ಗೆ ಮುಂದೆ ವಿವರ ನೀಡುತ್ತೇನೆ,” ಎಂಬುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka 25 Feb 2020, 7:29 pm

ಬೆಂಗಳೂರು: ಚುನಾವಣಾ ಪ್ರಚಾರ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಜಾತ್ಯಾತೀತ ಜನತಾದಳದ ಜೊತೆ ಕೈ ಜೋಡಿಸುವ ಸಾಧ್ಯತೆಗಳಿವೆ. ಈ ಸಂಬಂಧ ಪ್ರಶಾಂತ್‌ ಕಿಶೋರ್‌ ಮತ್ತು ಜೆಡಿಎಸ್‌ ನಡುವೆ ಮಾತುಕತೆಗಳು ನಡೆಯುತ್ತಿವೆ. ಸ್ವತಃ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
Vijaya Karnataka Web Prashant Kishor HD Kumaraswamy


ಭವಿಷ್ಯದಲ್ಲಿ ಜೆಡಿಎಸ್‌ ಸಂಘಟನೆ ಬಲಗೊಳಿಸುವ ಸಂಬಂಧ ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ಜೊತೆ ಮೊದಲ ಸುತ್ತಿನ ಮಾತುಕತೆಗಳು ನಡೆದಿವೆ ಎಂಬುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

“ಭವಿಷ್ಯದಲ್ಲಿ ರಾಜಕೀಯವಾಗಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನಾನು ಅವರ (ಪ್ರಶಾಂತ್‌ ಕಿಶೋರ್‌) ಜೊತೆ ಮಾತನಾಡಿದ್ದೇನೆ. ಮೊದಲ ಸುತ್ತಿನ ಮಾತುಕತೆಗಳು ನಡೆದಿವೆ. ಈ ಬಗ್ಗೆ ಮುಂದೆ ವಿವರ ನೀಡುತ್ತೇನೆ,” ಎಂಬುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಪ್ರಶಾಂತ್‌ ಕಿಶೋರ್‌ ಎಂಬ ಚಾಣಾಕ್ಷ; ಈಗ ರಾಜಕೀಯ ಪಕ್ಷಗಳಿಗೆ ಅಪಥ್ಯ

ಲೋಕಸಭೆ ಮತ್ತು ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿದ ನಂತರ ಪಕ್ಷವನ್ನು ಮೇಲೆತ್ತುವ ಸಂಬಂಧ ಇತ್ತೀಚೆಗೆ ಜೆಡಿಎಸ್‌ ವರಿಷ್ಠರು ಪ್ರಶಾಂತ್‌ ಕಿಶೋರ್‌ ಜೊತೆ ಮಾತುಕತೆ ನಡೆಸುವ ತೀರ್ಮಾನಕ್ಕೆ ಬಂದಿದ್ದರು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಗಳು ಸಿಕ್ಕಿರಲಿಲ್ಲ. ಇದೀಗ ಸ್ವತಃ ಕುಮಾರಸ್ವಾಮಿ ಮಾತುಕತೆ ಚರ್ಚೆಯ ಹಂತದಲ್ಲಿರುವುದನ್ನು ಬಹಿರಂಗಪಡಿಸಿದ್ದಾರೆ.

'ಬಾತ್‌ ಬಿಹಾರ್‌ ಕಿ': ಬಿಹಾರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ ಪ್ರಶಾಂತ್‌ ಕಿಶೋರ್‌

ಇತ್ತೀಚೆಗೆ ಹೊರಬಿದ್ದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್‌ ಕಿಶೋರ್‌ ನೇತೃತ್ವದ ಪೊಲಿಟಿಕಲ್ ಆಕ್ಷನ್‌ ಕಮಿಟಿ (ಐ-ಪ್ಯಾಕ್‌) ಸಹಕಾರದೊಂದಿಗೆ ಎಎಪಿ ಭರ್ಜರಿ ಜಯ ದಾಖಲಿಸಿತ್ತು. ಇದೇ ಪ್ರಶಾಂತ್‌ ಕಿಶೋರ್‌ ಜೆಡಿಎಸ್‌ ಪರ ರಣತಂತ್ರಗಳನ್ನು ಹೆಣೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ