ಆ್ಯಪ್ನಗರ

ರೈತನ ಮಗನ ಹೆಮ್ಮೆಯ ಸಾಧನೆ

ತಾಲೂಕಿನ ಕಮ್ಮರಡಿ ಸಮೀಪದ ಹೊಸೂರಿನ ರೈತ ಸಿದ್ದಪ್ಪ ಗೌಡ ಅವರ ಮೂವರು ಪುತ್ರರಲ್ಲಿ ಹಿರಿಯರಾದ ಎಚ್‌.ಎಸ್‌ ಮಂಜುನಾಥ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 566ನೇ ರಾಂಕ್‌ ಪಡೆಯುವ ಮೂಲಕ ಮಲೆನಾಡಿಗೆ ಸೂಧಿರ್ತಿಯಾಗಿದ್ದಾರೆ.

ವಿಕ ಸುದ್ದಿಲೋಕ 11 May 2016, 10:54 pm
ಕೊಪ್ಪ: ತಾಲೂಕಿನ ಕಮ್ಮರಡಿ ಸಮೀಪದ ಹೊಸೂರಿನ ರೈತ ಸಿದ್ದಪ್ಪ ಗೌಡ ಅವರ ಮೂವರು ಪುತ್ರರಲ್ಲಿ ಹಿರಿಯರಾದ ಎಚ್‌.ಎಸ್‌ ಮಂಜುನಾಥ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 566ನೇ ರಾಂಕ್‌ ಪಡೆಯುವ ಮೂಲಕ ಮಲೆನಾಡಿಗೆ ಸೂಧಿರ್ತಿಯಾಗಿದ್ದಾರೆ.
Vijaya Karnataka Web pride achievement farmers son
ರೈತನ ಮಗನ ಹೆಮ್ಮೆಯ ಸಾಧನೆ


ಮಂಜುನಾಥ್‌ ಪ್ರಾಥಮಿಕ ಶಿಕ್ಷ ಣವನ್ನು 5ನೇ ತರಗತಿವರೆಗೆ ಕೊಪ್ಪದ ವೆಂಕಟೇಶ್ವರ ವಿದ್ಯಾಮಂದಿರದಲ್ಲಿ ನಂತರ 7ನೇ ತರಗತಿ ವರೆಗೆ ಕಡಬಗೆರೆಯ ಜೋತಿರ್‌ ವಿಕಾಸ್‌ ಆಂಗ್ಲ ಮಾಧ್ಯಮದ ಯಲ್ಲಿ ಪಡೆದರು. ಅಳಿಕೆ ಗ್ರಾಮದಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಆರ್‌.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು. ಆಗ ಅವರ ಮನಸ್ಸಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲ ವ್ಯಕ್ತವಾಗಿತ್ತು. ಅದಕ್ಕಾಗಿ ಹೈದರಾಬಾದ್‌ನಲ್ಲಿ 3 ತಿಂಗಳ ತರಬೇತಿ ಪಡೆದಿದ್ದರು.

--

ಸತತ ಪ್ರಯತ್ನ, ಶ್ರದ್ಧೆ, ಬದ್ಧತೆ ಯಶಸ್ಸಿನ ಗುಟ್ಟು. ಸೋಲಿಗೆ ಎದೆಗುಂದಬಾರದು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಪ್ರತಿಭೆಗಳಿವೆ. ಅವರಿಗೆ ಸೂಕ್ತ ಅವಕಾಶ ಸಿಗಬೇಕಿದೆ.

- ಎಚ್‌.ಎಸ್‌.ಮಂಜುನಾಥ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ