ಆ್ಯಪ್ನಗರ

ವಿದ್ಯುನ್ಮಾನ ಮಾಧ್ಯಮಗಳು ದೇಶವನ್ನೇ ಹಾಳು ಮಾಡುತ್ತಿವೆ: ಎಚ್ಡಿಕೆ ಸಿಡಿಮಿಡಿ

ಮುದ್ರಣ ಮಾದ್ಯಮಗಳು ಇನ್ನೂ ತಮ್ಮ ವಿಶ್ವಾಸಾರ್ಹತೆ ಹಾಗೂ ನಂಬಿಕೆಯನ್ನು ಉಳಿಸಿಕೊಂಡಿವೆ. ವಿದ್ಯುನ್ಮಾನ ಮಾದ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿವೆ. ಸುದ್ದಿಗಳನ್ನು ವೈಭವೀಕರಿಸಿವೆ ಎಂದು ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬಂದಾಗಿನಿಂದಲೂ ಮಾಧ್ಯಮಗಳ ವಿರುದ್ಧ ಕಿಡಿ ಕಾರುತ್ತಿದ್ದ ಅವರು ಅಧಿಕಾರ ಕಳೆದುಕೊಂಡ ಬಳಿಕವೂ ಸಿಟ್ಟು ಹೊರಹಾಕಿದ್ದಾರೆ.

Vijaya Karnataka Web 24 Jul 2019, 8:36 am
ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ಕಳೆದುಕೊಂಡು ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಾಧ್ಯಮಗಳ ವಿರುದ್ಧ ಆಗಾಗ್ಗೆ ಕೆಂಡ ಕಾರುತ್ತಲೇ ಇದ್ದ ಕುಮಾರಸ್ವಾಮಿ, ಅಧಿಕಾರ ಕಳೆದುಕೊಂಡ ಬಳಿಕವೂ ಸಿಡಿಮಿಡಿ ಮುಂದುವರಿಸಿದ್ದಾರೆ.
Vijaya Karnataka Web WhatsApp Image 2019-07-23 at 8.01.01 PM.


ಮುದ್ರಣ ಮಾಧ್ಯಮ ಇನ್ನೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಸುದ್ದಿ ಮಾದ್ಯಮದ ಬಗ್ಗೆ ಪ್ರಸ್ತಾಪ ಮಾಡಿದ ಅವರು, ವಿದ್ಯುನ್ಮಾನ ಮಾದ್ಯಮದ ವಿರುದ್ಧ ಕಿಡಿಕಾರಿದರು. ರೇವಣ್ಞ ಅಮಾಯಕ.‌ ದೇವಸ್ಥಾನದಲ್ಲಿ ಕೊಟ್ಟ ನಿಂಬೆಹಣ್ಣು ಹಿಡಿದುಕೊಂಡಿರುವುದನ್ನು ಮಾಧ್ಯಮಗಳು‌ ವೈಭವೀಕರಿಸಿವೆ ಎಂದರು.

ಅಷ್ಟೇ ಅಲ್ಲದೆ, ಬೆಳಗ್ಗೆ ಕಲಾಪ ನಡೆಯುತ್ತಿರುವ ವೇಳೆ ನಾನು ಹೋಟೆಲ್‌ನಲ್ಲಿಯೇ ಇದ್ದ ವಿಚಾರದಲ್ಲೂ ಸಾಕಷ್ಟು ವೈಭವೀಕರಿಸಲಾಗಿದೆ ಸುದ್ದಿ ಚಾನಲ್‌ಗಳಲ್ಲಿ. ನಾನು ಹೋಟೆಲ್‌ನಲ್ಲಿ ಆರಾಮವಾಗಿ ಕುಳಿತಿರಲಿಲ್ಲ. ಬದಲಾಗಿ ಕಲಾಪಕ್ಕೆ ತಯಾರಿ ನಡೆಸುತ್ತಿದ್ದೆ. ಇಂತಹ ಸುಳ್ಳು ಸುದ್ದಿಗಳ ಬಿತ್ತರಿಸುವ ಹಿಂದಿರುವ ಉದ್ಧೇಶವಾದರೂ ಏನು? ಜನತೆಗೆ ತಪ್ಪು ಸಂದೇಶ ರವಾನಿಸುವುದು ಸರಿಯೇ? ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳುತ್ತೇನೆ, ನಿಮ್ಮ ಟಿಆರ್‌ಪಿಗಾಗಿ ದೇಶ ಹಾಳು ಮಾಡಬೇಡಿ ಎಂದರು.

ಈ ವಿಚಾರದಲ್ಲಿ ಮುದ್ರಣ ಮಾಧ್ಯಮ ತಮ್ಮ ವಿಶ್ವಾಸಾರ್ಹತೆ ಹಾಗೂ ನಂಬಿಕೆಯನ್ನು ಇನ್ನೂ ಜೀವಂತವಾಗಿರಿಸಿವೆ. ಎಲ್ಲೂ ಸುದ್ದಿಗಳನ್ನು ವೈಭಕರಿಸಿಲ್ಲ. ಸುಳ್ಳು ಸುದ್ದಿಯನ್ನು ಬಿತ್ತರಿಸಿಲ್ಲ ಎಂದು ಮೆಚ್ಚುಗೆ ವ್ಯಕ್ತಡಿಸಿದರು.

ನನ್ನ ಮೇಲೆ ಕೆಲವು ಅಪವಾದಗಳು ಬಂದಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡುವ ಎಂಬ ವರದಿ ಬಂದಿತ್ತು. ಇದು ನಿಜಕ್ಕೂ ನೋವು ತಂದಿತು. ಈ ರೀತಿ ಹೇಳಿಸಿಕೊಳ್ಳಲು ನಾನು ಮುಖ್ಯಮಂತ್ರಿ ಆಗಬೇಕಾ ಎಂದು ಬೇಸರ ಮೂಡಿಸಿತು. ಇಂದು ನಾನು ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ ಎಂದು ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಈ ರಾಜ್ಯದ ಜನರ ಹಣ ವೃಥಾ ವೆಚ್ಚ ಮಾಡಲು ನಾನು ತಯಾರಿಲ್ಲ. ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯ ಸರಕಾರ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ಸಚಿವರು ಆರೋಪಿಸುತ್ತಾರೆ. ಕೊಡಗಿನಲ್ಲಿ ಪ್ರವಾಹ ಆದಾಗ ತಕ್ಷಣವೇ ಸ್ಪಂದಿಸಿ ಹಣ ಬಿಡುಗಡೆ ಮಾಡಿ, ಪರಿಹಾರ ಕಾರ್ಯಾರ್ಚರಣೆಗೆ ಸೂಚಿಸಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ