ಆ್ಯಪ್ನಗರ

ರಾಜ್ಯದ ನಾನಾ ಕಾರಾಗೃಹದ 93 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ

ರಾಜ್ಯದ ನಾನಾ ಕೇಂದ್ರ ಕಾರಾಗೃಹಗಳಲ್ಲಿನ 93 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಗುರುವಾರ ಸಮ್ಮತಿ ನೀಡಿದೆ...

Vijaya Karnataka 26 Oct 2017, 10:28 pm

ಬೆಂಗಳೂರು: ರಾಜ್ಯದ ನಾನಾ ಕೇಂದ್ರ ಕಾರಾಗೃಹಗಳಲ್ಲಿನ 93 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಗುರುವಾರ ಸಮ್ಮತಿ ನೀಡಿದೆ.

Vijaya Karnataka Web prisoners set to free on merit of good conduct
ರಾಜ್ಯದ ನಾನಾ ಕಾರಾಗೃಹದ 93 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ


ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈ ಕೈದಿಗಳ ಬಿಡುಗಡೆ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬೆಳಗಾವಿ, ಮೈಸೂರು, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಧಾರವಾಡ ಕೇಂದ್ರ ಕಾರಾಗೃಹಗಳು ಸೇರಿ ಒಟ್ಟು 86 ಪುರುಷ ಹಾಗೂ 7 ಮಹಿಳಾ ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಪಿಪಿಪಿ ಯೋಜನೆಯಡಿ ತಲಾ 46,750 ಮೆಟ್ರಿಕ್‌ ಟನ್‌ ಸಾಮರ್ಥ್ಯ‌ದ 7 ಉಗ್ರಾಣಗಳನ್ನು ತಲಾ 32,800 ಮೆಟ್ರಿಕ್‌ ಟನ್‌ ಸಾಮರ್ಥ್ಯ‌ದ ಶೀತಲ ಗೃಹಗಳನ್ನಾಗಿ ಪರಿವರ್ತಿಸಲಾಗುವುದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಸಮ್ಮತಿಸಲಾಗಿದೆ. ತೋಟಗಾರಿಕೆ ಬೆಳೆಗಳ ದರ ಕುಸಿತವಾದಾಗ ಆವರ್ತ ನಿಧಿಯಿಂದ ಬಳಕೆ ಮಾಡಿಕೊಂಡಿರುವ 19.93 ಕೋಟಿ ರೂ. ಮನ್ನಾ ಮಾಡಲು ತೀರ್ಮಾನವಾಗಿದೆ ಎಂದರು.

ಎಲ್ಲ ವಿಮಾನ ನಿಲ್ದಾಣಗಳಿಗೆ ಟೆಂಡರ್‌ ಶೂರ್‌

ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಟೆಂಡರ್‌ ಶೂರ್‌ ಯೋಜನೆಯಡಿ ಮೇಲ್ದರ್ಜೆಗೆ ಏರಿಸಲಾಗುವುದು. ಸದ್ಯದ ಪ್ರಸ್ತಾವನೆಯಂತೆ ಹುಬ್ಬಳ್ಳಿಯಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿ - 73 ರಲ್ಲಿನ ಒಟ್ಟು 2.200 ಕಿ.ಮೀ. ರಸ್ತೆಯ ಕಾಮಗಾರಿಯ 10.35 ಕೋಟಿ ರೂ. ಅಂದಾಜಿಗೆ ಅನುಮೋದನೆ ನೀಡಲಾಯಿತು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ಇತರೆ ಪ್ರಮುಖ ನಿರ್ಣಯ
* ತೊಗರಿ ಅಭಿವೃದ್ಧಿ ಮಂಡಳಿ ಕಚೇರಿ, ಸಂಸ್ಕರಣಾ ಘಟಕಕ್ಕೆ ಕಲಬುರ್ಗಿಯ ಕೊಟ್ನೂರು (ಡಿ) ಗ್ರಾಮದಲ್ಲಿ 2.4 ಹೆಕ್ಟೇರ್‌ ಜಮೀನು
* ಹೈದರಾಬಾದ್‌ ಕರ್ನಾಟಕದಲ್ಲಿ 126 ಪಶು ವೈದ್ಯಾಧಿಕಾರಿಗಳ ಹುದ್ದೆ ಭರ್ತಿ
* ಗೋಕಾಕ್‌ನಲ್ಲಿ 100 ಹಾಸಿಗೆ ಸಾಮರ್ಥ್ಯ‌ದ ಎಂಸಿಎಚ್‌ ಆಸ್ಪತ್ರೆ ನಿರ್ಮಾಣಕ್ಕೆ 18.75 ಕೋಟಿ ರೂ.
* ಅಂಬೇಡ್ಕರ್‌ ಸಹಾಯ ಹಸ್ತ ಯೋಜನೆಯನ್ನು ಕಾರ್ಮಿಕ ಬಂಧು ಮೂಲಕ ಜಾರಿಗೊಳಿಸಲು ತೀರ್ಮಾನ.
* ಬ್ಯಾಂಕ್‌ ಗ್ಯಾರಂಟಿ ಉದ್ದೇಶಕ್ಕೆ ಹೊನ್ನಾವರ ಬಂದರು ಅಭಿವೃದ್ಧಿಯ ಒಡಂಬಡಿಕೆಯ ಮೂಲ ಒಪ್ಪಂದದ ಬದಲಾವಣೆ.
* ಬೆಂಗಳೂರಿನ ಜೀವನ್‌ಭೀಮಾನಗರದಲ್ಲಿ ಗ್ರೂಫ್‌-ಎ ಅಧಿಕಾರಿಗಳ ವಸತಿ ಸಂಕೀರ್ಣಕ್ಕೆ 7.50 ಕೋಟಿ ರೂ.
* ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು, ಒಳಚರಂಡಿ ಕಲ್ಪಿಸುವ 13 ಯೋಜನೆಗಳಿಗೆ 398.30 ಕೋಟಿ ರೂ.
* ಸುಪ್ರೀಂ ಕೋರ್ಟ್‌ ಸೂಚನೆಯಂತೆ ಮೈಸೂರು ವಿಜಯಶ್ರೀಪುರ ಬಡಾವಣೆ ಪ್ರಕರಣಕ್ಕೆ ಸಂಬಂಧಿಸಿ 55.70 ಕೋಟಿ ರೂ.
* ಬಂಟ್ವಾಳದ ಅಮ್ಮುಂಜೆಯಲ್ಲಿ 10 ಕೋಟಿ ರೂ. ದಲ್ಲಿ ಕ್ರೀಡಾಂಗಣ
* ಕಲಬುರ್ಗಿ ಜಿಲ್ಲೆಯಲ್ಲಿ ವಸತಿ ಶಿಕ್ಷಣ ಸಂಸ್ಥೆಯಿಂದ 9 ಹಾಸ್ಟೆಲ್‌ ಕಟ್ಟಡ ನಿರ್ಮಿಸಲು 64.53 ಕೋಟಿ ರೂ.
* ಯಲ್ಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಹಿತ್ಲಕಾರಗದ್ದೆ (ವಾರ್ಡ್‌ ನಂ.12), ಬಾಳಗಿಮನೆಯ (ವಾರ್ಡ್‌ ನಂ.5) ಸೇರ್ಪಡೆ
* ಸುರತ್ಕಲ್‌ನಲ್ಲಿ ಮಂಗಳೂರು ಮನಪಾದಿಂದ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು 61 ಕೋಟಿ ರೂ.ಗೆ ಸಮ್ಮತಿ.
* ಹೇಮಾವತಿ ಎಡದಂಡೆ ನಾಲೆ (ಸಾಹುಕಾರ್‌ ಚೆನ್ನಯ್ಯ ನಾಲೆ) 72.26 ಕಿ.ಮೀ. ನಿಂದ 214.30 ಕಿ.ಮೀ. ವರೆಗೆ ಆಧುನೀಕರಣಕ್ಕೆ 8.9.58 ಕೋಟಿ ರೂ.
* ಮಲಪ್ರಭಾ ನದಿಯಿಂದ ಕಿತ್ತೂರು, ಬೈಲಹೊಂಗಲದ 64 ಕೆರೆ ತುಂಬಿಸುವ 248.20 ಕೋಟಿ ರೂ.
* ಯಾದಗಿರಿ ತಾಲೂಕಿನ 35 ಕೆರೆ ತುಂಬಿಸುವ 440 ಕೋಟಿ ರೂ. ಸೊಂತಿ ಏತ ನೀರಾವರಿ ವಿಸ್ತ್ರತ ಯೋಜನಾ ವರದಿಗೆ ಸಮ್ಮತಿ.
* ಬಳ್ಳಾರಿಯ ಬಿಳಿಕಲ್‌ ಅರಣ್ಯ ಪ್ರದೇಶದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯ ನಿರ್ಮಿಸುವ 68.43 ಕೋಟಿ ಪ್ರಸ್ತಾವನೆಗೆ ಒಪ್ಪಿಗೆ.

Prisoners set to free on merit of good conduct

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ