ಆ್ಯಪ್ನಗರ

Bitcoin: ರಾಜ್ಯ ಸರಕಾರಕ್ಕೆ ಪ್ರಿಯಾಂಕ್ ಖರ್ಗೆ 'ಪಂಚ್' ಪ್ರಶ್ನೆಗಳು

ರಾಜ್ಯ ಸರಕಾರದಿಂದ ಪಾರದರ್ಶಕ ತನಿಖೆ ಅಸಾಧ್ಯ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್‌ನಲ್ಲಿ ಹಲವು ವಿಚಾರವೂ ಇದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ತನಿಖೆ ಆಗಲಿ. ಆಗ ಮಾತ್ರ ಕರ್ನಾಟಕದ ಜನರಿಗೆ ಸತ್ಯ ಗೊತ್ತಾಗಲಿದೆ

Vijaya Karnataka Web 12 Nov 2021, 5:06 pm
ಬೆಂಗಳೂರು: ಬಿಟ್ ಕಾಯಿನ್ ಹಗರಣರ ತನಿಖೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ನಡೆಸಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
Vijaya Karnataka Web ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ


ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರಕ್ಕೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

ಸರಕಾರಕ್ಕೆ ಪ್ರಿಯಾಂಕ್ ಖರ್ಗೆ ಕೇಳಿದ ಪಂಚ್‌ ಪ್ರಶ್ನೆಗಳು

* ಶ್ರೀಕಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಡ್ರಗ್ ಸೇವನೆ ಮಾಡಿದ್ದನಾ? ಪೊಲೀಸರು ಡ್ರಗ್ ನೀಡಿ ಬಿಟ್ ಕಾಯಿನ್ ಹ್ಯಾಕ್ ಮಾಡಿಸಿದ್ದಾರಾ? ಈ ಬಗ್ಗೆ ತನಿಖೆ ಆಗಬೇಕು.

* ಪಂಚನಾಮದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತೋರಿಸಿದ್ದ 31.8 ಬಿಟ್ ಕಾಯಿನ್ ಹಾಗೂ 186 ಬಿಟ್ ಕಾಯಿನ್ ಕಾಣೆಯಾಗಿದೆ. ಹಾಗಾದರೆ ಇದು ಎಲ್ಲಿ ಹೋಯಿತು?

ಕ್ರಿಪ್ಟೋ ಕರೆನ್ಸಿ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌!

* ಆರೋಪಿ ಶ್ರೀಕಿ ಲಿಖಿತ ಹೇಳಿಕೆಯ ಪ್ರಕಾರ ನಾನು ಐದು ಸಾವಿರ ಬಿಟ್ ಕಾಯಿನ್ ಹ್ಯಾಕ್ ಮಾಡಿದ್ದೇನೆ ಎಂದಿದ್ದಾನೆ. ಇದರ ಮೌಲ್ಯ 2500 ಕೋಟಿ ಈ ಬಿಟ್ ಕಾಯಿನ್ ಎಲ್ಲಿದೆ? ಇಷ್ಟು ಗಂಭೀರವಾಗಿದ್ದರೂ ಈ ಪ್ರಕರಣವನ್ನು ಇಡಿಗೆ,‌ ಸಿಬಿಐಗೆ ಏಕೆ ಕೊಟ್ಟಿರಲಿಲ್ಲ?

* ಪ್ರಕರಣದ ಕುರಿತಾಗಿ ಉದ್ದೇಶಪೂರ್ವಕವಾಗಿ ಇಡಿ,‌ಸಿಬಿಐ, ಇಂಟರ್ ಪೋಲ್ ಗೆ ತಿಳಿಸಲು ವಿಳಂಬ ಯಾಕೆ?

*ಆರ್ಥಿಕ ಅಪರಾಧ ಮಾಡಿರುವ ಬಗ್ಗೆ ಆರೋಪಿ ಶ್ರೀಕಿ ಒಪ್ಪಿಕೊಂಡಿದ್ದಾನೆ, ಡ್ರಗ್ ದಂಧೆಯ ಬಗ್ಗೆಯೂ ಹೇಳಿಕೆ ನೀಡಿದ್ದಾನೆ. ಆದರೆ ಈ ಪ್ರಕರಣವನ್ನು ನಿರ್ವಹಣೆ ಮಾಡುವಲ್ಲಿ ಸರ್ಕಾರ ಹಾಗೂ ಪೊಲೀಸರ ದಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

ಸಿದ್ದರಾಮಯ್ಯ ಮಹಾನ್ ಆರ್ಥಿಕ ತಜ್ಞರು..! ಬಿಟ್‌ ಕಾಯಿನ್‌ ಬಗ್ಗೆ ನಮಗೆ ವಿವರಿಸಲಿ: ಪ್ರತಾಪ್‌ ಸಿಂಹ ತಿರುಗೇಟು

ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಪಾರದರ್ಶಕ ತನಿಖೆ ಅಸಾಧ್ಯ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್‌ನಲ್ಲಿ ಹಲವು ವಿಚಾರವೂ ಇದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ತನಿಖೆ ಆಗಲಿ ಹಾಗೂ ಸತ್ಯಾಂಶ ಹೊರಬರಲಿ. ಹಾಗಾದಲ್ಲಿ ಮಾತ್ರ ಕರ್ನಾಟಕದ ಜನರಿಗೆ ಸತ್ಯ ಗೊತ್ತಾಗಲಿದೆ ಎಂದರು.

ಬಿಟ್ ಕಾಯಿನ್ ಪ್ರಕರಣವನ್ನು ಸರಕಾರ ಇಡಿ ಹಾಗೂ ಸಿಬಿಐಗೆ ಕೊಟ್ಟಿರುವುದು ಅನುಮಾನ, ಹಾಗಿದ್ದಲ್ಲಿ ದಾಖಲೆ ಬಿಡುಗಡೆ ಮಾಡಲಿ ಎಂದು ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ