ರಾಜ್ಯ ಬಜೆಟ್ ಪಾಸ್ಗೂ ಎದುರಾದ ಸವಾಲು
ರಾಜಕೀಯ ಅತಂತ್ರ ಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್ ಅನುಮೋದನೆಗೂ ಸವಾಲು ಎದುರಾಗಿದೆ.
Vijaya Karnataka 9 Jul 2019, 5:00 am
ಬೆಂಗಳೂರು : ರಾಜಕೀಯ ಅತಂತ್ರ ಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್ ಅನುಮೋದನೆಗೂ ಸವಾಲು ಎದುರಾಗಿದೆ.
ಲೋಕಸಭೆ ಚುನಾವಣೆಗೆ ಮುನ್ನ 2019-20ರ ಬಜೆಟ್ ಮಂಡಿಸಿದ್ದ ಹಣಕಾಸು ಖಾತೆ ಹೊಂದಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ 4 ತಿಂಗಳ ಅವಧಿಗೆ ಲೇಖಾನುದಾನ ತೆಗೆದುಕೊಂಡಿದ್ದರು. ಜುಲೈ 31ಕ್ಕೆ ಈ ಅವಧಿ ಪೂರ್ಣಗೊಳ್ಳಲಿದೆ.
ಹಾಗಾಗಿ ಜುಲೈ 12ರಿಂದ ನಡೆಸಲು ಉದ್ದೇಶಿಸಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಜೆಟ್ ಪಾಸು ಮಾಡಿಕೊಳ್ಳಬೇಕಿದೆ. ಆದರೆ, ದೋಸ್ತಿ ಸರಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಅಧಿವೇಶನ ನಡೆಯುವುದೂ ಅನುಮಾನ ಎಂಬಂತಾಗಿದೆ. ಅಂತಹ ಸಂದರ್ಭದಲ್ಲಿ ಪರ್ಯಾಯ ಸರಕಾರ ರಚನೆಯಾದರೆ ತಕ್ಷಣವೇ ಈ ಪ್ರಕ್ರಿಯೆ ಪೂರೈಸಬೇಕಾಗುತ್ತದೆ.
ಪರ್ಯಾಯ ಸರಕಾರವೂ ಅಸ್ತಿತ್ವಕ್ಕೆ ಬಾರದೆ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿ ರಾಷ್ಟ್ರಪತಿ ಆಳ್ವಿಕೆ ಬಂದರೆ ರಾಜ್ಯಪಾಲರು ಈ ಪ್ರಕ್ರಿಯೆ ಮಾಡಬೇಕಾಗುತ್ತದೆ. ರಾಜ್ಯದ ಬಜೆಟ್ ಅಂಗೀಕರಿಸಿದ ಬಳಿಕ ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡಬೇಕು. ಅದು ಸಂಸತ್ತಿನಲ್ಲೂ ಪಾಸಾಗಬೇಕು. ಸಂಸತ್ ಅಧಿವೇಶನ ಜುಲೈ 26ಕ್ಕೆ ಸಮಾಪ್ತಿಯಾಗಲಿದೆ. ಹಾಗಾಗಿ ಅಷ್ಟರೊಳಗೇ ರಾಜ್ಯ ಬಜೆಟ್ ಅನುಮೋದಿಸಿ ಕೇಂದ್ರಕ್ಕೆ ರವಾನಿಸುವ ತುರ್ತು ಇದೆ. ಇಲ್ಲದಿದ್ದರೆ ಆಡಳಿತ ಯಂತ್ರ ಕುಸಿದು ಬೀಳುವುದರ ಜತೆಗೆ ಸರಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ ತಾಂತ್ರಿಕ ತೊಡಕುಂಟಾಗಲಿದೆ.
ಲೋಕಸಭೆ ಚುನಾವಣೆಗೆ ಮುನ್ನ 2019-20ರ ಬಜೆಟ್ ಮಂಡಿಸಿದ್ದ ಹಣಕಾಸು ಖಾತೆ ಹೊಂದಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ 4 ತಿಂಗಳ ಅವಧಿಗೆ ಲೇಖಾನುದಾನ ತೆಗೆದುಕೊಂಡಿದ್ದರು. ಜುಲೈ 31ಕ್ಕೆ ಈ ಅವಧಿ ಪೂರ್ಣಗೊಳ್ಳಲಿದೆ.
ಹಾಗಾಗಿ ಜುಲೈ 12ರಿಂದ ನಡೆಸಲು ಉದ್ದೇಶಿಸಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಜೆಟ್ ಪಾಸು ಮಾಡಿಕೊಳ್ಳಬೇಕಿದೆ. ಆದರೆ, ದೋಸ್ತಿ ಸರಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಅಧಿವೇಶನ ನಡೆಯುವುದೂ ಅನುಮಾನ ಎಂಬಂತಾಗಿದೆ. ಅಂತಹ ಸಂದರ್ಭದಲ್ಲಿ ಪರ್ಯಾಯ ಸರಕಾರ ರಚನೆಯಾದರೆ ತಕ್ಷಣವೇ ಈ ಪ್ರಕ್ರಿಯೆ ಪೂರೈಸಬೇಕಾಗುತ್ತದೆ.
ಪರ್ಯಾಯ ಸರಕಾರವೂ ಅಸ್ತಿತ್ವಕ್ಕೆ ಬಾರದೆ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿ ರಾಷ್ಟ್ರಪತಿ ಆಳ್ವಿಕೆ ಬಂದರೆ ರಾಜ್ಯಪಾಲರು ಈ ಪ್ರಕ್ರಿಯೆ ಮಾಡಬೇಕಾಗುತ್ತದೆ. ರಾಜ್ಯದ ಬಜೆಟ್ ಅಂಗೀಕರಿಸಿದ ಬಳಿಕ ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡಬೇಕು. ಅದು ಸಂಸತ್ತಿನಲ್ಲೂ ಪಾಸಾಗಬೇಕು. ಸಂಸತ್ ಅಧಿವೇಶನ ಜುಲೈ 26ಕ್ಕೆ ಸಮಾಪ್ತಿಯಾಗಲಿದೆ. ಹಾಗಾಗಿ ಅಷ್ಟರೊಳಗೇ ರಾಜ್ಯ ಬಜೆಟ್ ಅನುಮೋದಿಸಿ ಕೇಂದ್ರಕ್ಕೆ ರವಾನಿಸುವ ತುರ್ತು ಇದೆ. ಇಲ್ಲದಿದ್ದರೆ ಆಡಳಿತ ಯಂತ್ರ ಕುಸಿದು ಬೀಳುವುದರ ಜತೆಗೆ ಸರಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ ತಾಂತ್ರಿಕ ತೊಡಕುಂಟಾಗಲಿದೆ.