ಆ್ಯಪ್ನಗರ

ಬಡ್ತಿ ಮೀಸಲು ಕಾಯಿದೆ ಜಾರಿಗೆ ಗಡುವು ನೀಡಿದ ಎಸ್‌ಸಿ, ಎಸ್‌ಟಿ ನೌಕರರು

ಬಡ್ತಿ ಮೀಸಲು ಪ್ರಕರಣದಿಂದ ಪರಿಶಿಷ್ಟರನ್ನು ಪಾರು ಮಾಡಲು ರಾಜ್ಯದ ಕಾಯಿದೆಯನ್ನು ಜನವರಿ 7 ರೊಳಗೆ ಜಾರಿಗೊಳಿಸದಿದ್ದರೆ ಹೋರಾಟದ ದಾರಿ ತುಳಿಯುವುದಾಗಿ ...

Vijaya Karnataka 30 Dec 2018, 5:00 am
ಬೆಂಗಳೂರು: ಬಡ್ತಿ ಮೀಸಲು ಪ್ರಕರಣದಿಂದ ಪರಿಶಿಷ್ಟರನ್ನು ಪಾರು ಮಾಡಲು ರಾಜ್ಯದ ಕಾಯಿದೆಯನ್ನು ಜನವರಿ 7 ರೊಳಗೆ ಜಾರಿಗೊಳಿಸದಿದ್ದರೆ ಹೋರಾಟದ ದಾರಿ ತುಳಿಯುವುದಾಗಿ ಎಸ್‌ಸಿ, ಎಸ್‌ಟಿ ನೌಕರರ ಸಂಘಟನೆ ಪ್ರತಿನಿಧಿಗಳು ಸರಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web promotion reservation implement
ಬಡ್ತಿ ಮೀಸಲು ಕಾಯಿದೆ ಜಾರಿಗೆ ಗಡುವು ನೀಡಿದ ಎಸ್‌ಸಿ, ಎಸ್‌ಟಿ ನೌಕರರು


ಬಿ.ಕೆ.ಪವಿತ್ರ ಪ್ರಕರಣದ ಪರಾಮರ್ಶೆ ಸಂಬಂಧ ಹೊಸದಾಗಿ ಕಾನೂನು ಖಾತೆ ವಹಿಸಿಕೊಂಡಿರುವ ಡಿಸಿಎಂ ಜಿ.ಪರಮೇಶ್ವರ್‌ ವಿಧಾನಸೌಧದಲ್ಲಿ ಶನಿವಾರ ಸಭೆ ನಡೆಸಿದರು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಉನ್ನತಾಧಿಕಾರಿಗಳೂ ಸಭೆಯಲ್ಲಿದ್ದರು. ರಾಜ್ಯದ ಕಾಯಿದೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನೂ ಡಿಸಿಎಂ ನೀಡಿದರು.

ಇದರಿಂದ ಅಸಮಾಧಾನಗೊಂಡ ಸಂಘಟನೆ ಪ್ರತಿನಿಧಿಗಳು, ಜನವರಿ ಮೊದಲ ವಾರವೇ ಈ ಪ್ರಕ್ರಿಯೆ ಆಗಬೇಕು ಎಂಬ ಒತ್ತಡ ತಂದರು ಎನ್ನಲಾಗಿದೆ.

ಬಿ.ಕೆ.ಪವಿತ್ರ ಪ್ರಕರಣದ ತೀರ್ಪಿನ ಬಳಿಕ ಈಗಾಗಲೇ 3,750 ಪರಿಶಿಷ್ಟ ನೌಕರರು ಹಿಂಬಡ್ತಿಗೆ ಒಳಗಾಗಿದ್ದಾರೆ. ಅವರ ಭವಿಷ್ಯವೂ ಅತಂತ್ರಕ್ಕೆ ಸಿಲುಕಿದೆ. ಈ ನೌಕರರ ಹಿತ ಕಾಯಲು ರಾಜ್ಯ ಸರಕಾರ ತಂದಿರುವ ಕಾಯಿದೆಗೆ ರಾಷ್ಟ್ರಪತಿಯವರೇ ಅಂಕಿತ ಹಾಕಿದ್ದಾರೆ. ಕಾಯಿದೆ ಜಾರಿ ಮಾಡದಂತೆ ಕೋರ್ಟ್‌ನಿಂದಲೂ ತಡೆಯಾಜ್ಞೆಯಿಲ್ಲ. ಕಾಯಿದೆ ಜಾರಿಗೆ ರಾಜ್ಯ ಸರಕಾರ ಇಚ್ಛಾಶಕ್ತಿ ತೋರಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರಕಾರದ ಪರ ವಕಾಲತು ವಹಿಸಿರುವ ಮುಕುಲ್‌ ರೋಹಟಗಿ ತಿಳಿಸಿದ್ದಾರೆ. ಈ ಸಂಬಂಧ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರವನ್ನೂ ಕಳುಹಿಸಿದ್ದಾರೆ. ಇಷ್ಟಾದ ಬಳಿಕವೂ ವಿಳಂಬ ನೀತಿಯೇಕೆ ಎಂದು ಪ್ರಶ್ನಿಸಿದರೆಂದು ಗೊತ್ತಾಗಿದೆ.

ಇನ್ನು ಬಗ್ಗುವುದಿಲ್ಲ

ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್‌, ''ನಾವು ಈಗಾಗಲೇ ಸಾಕಷ್ಟು ಬಗ್ಗಿದ್ದೇವೆ. ಜಾರಿಗೆ ಗಡವು ನೀಡಿದ್ದೇವೆ. ಜಾರಿ ಮಾಡದಿದ್ದರೆ ಜನವರಿ 8 ರಿಂದಲೇ ಪ್ರತಿಭಟನೆ ಪ್ರಾರಂಭಿಸಲಾಗುತ್ತದೆ,'' ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ