ಮೋದಿಯನ್ನು ಅಧಿಕಾರದಿಂದ ಇಳಿಸಬೇಕು: ಗೌರಿ ಹತ್ಯೆಗೆ 1 ವರ್ಷ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಆಗ್ರಹ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಅಧಿಕಾರದಿಂದ ಕೆಳಗಿಳಿಸದಿದ್ದರೆ ಗೌರಿ ಲಂಕೇಶ್ಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.
Vijaya Karnataka 6 Sep 2018, 8:57 am
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಅಧಿಕಾರದಿಂದ ಕೆಳಗಿಳಿಸದಿದ್ದರೆ ಗೌರಿ ಲಂಕೇಶ್ಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.
ಗೌರಿ ಲಂಕೇಶ್ ಬಳಗ ಮತ್ತು ಗೌರಿ ಮೆಮೋರಿಯಲ್ ಟ್ರಸ್ಟ್ ಬುಧವಾರ ಆಯೋಜಿಸಿದ್ದ 'ಗೌರಿ ದಿನ-ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ'ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
''ಬಿಜೆಪಿಯನ್ನು ನಡೆಸುತ್ತಿರುವ ಆರ್ಎಸ್ಎಸ್ ನಮ್ಮ ನಿಜವಾದ ಶತ್ರು. ಈ ಕೋಮುವಾದಿಗಳನ್ನು ಹಿಂದಕ್ಕೆ ಸರಿಸಬೇಕೆಂದರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು. ಮೋದಿ ಅಧಿಕಾರದಲ್ಲಿದ್ದರೆ ಗೌರಿಗೆ ನ್ಯಾಯ ಸಿಗದು. ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ತೆರಳಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. 52 ಇಂಚಿನ ಎದೆ ನಮಗೆ ಇರದಿದ್ದರೂ ಹೋರಾಡುವ ಶಕ್ತಿಯಂತೂ ಇದ್ದೇ ಇದೆ,'' ಎಂದರು.
ಒಡೆದು ಆಳುವ ನೀತಿ
ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ''ಮೋದಿಯವರದ್ದು ಬ್ರಿಟಿಷರಂತೆ ಒಡೆದು ಆಳುವ ನೀತಿ. ಹಿಂದೂ ಧರ್ಮದಿಂದ ಅವರಿಗೆ ಏನೂ ಆಗಬೇಕಿಲ್ಲ. ರೈತರು, ಬಡವರು, ದಲಿತರ ಬಗ್ಗೆ ಮಾತನಾಡಿದರೆ ಹಿಂದೂ ಧರ್ಮ ಆತಂಕದಲ್ಲಿದೆ ಎಂದು ಹೇಳುತ್ತಾರೆ. ನಾವು ನಗರ ನಕ್ಸಲರು, ದೇಶ ವಿರೋಧಿಗಳು ಎಂದು ಪಟ್ಟ ಕಟ್ಟುತ್ತಾರೆ. ಆದರೆ ಮೋದಿಯವರು ಪ್ರಧಾನಿಯಾಗಿರುವುದಕ್ಕೇ ಹಿಂದೂ ಧರ್ಮ ಆತಂಕದಲ್ಲಿದೆ ಎಂಬುದನ್ನು ಜನರು ಅರಿಯಬೇಕು,'' ಎಂದರು.
ನಟ ಪ್ರಕಾಶ್ ರೈ ಮಾತನಾಡಿ ''ಮೋದಿಯಂಥವರಿಂದ ಹಿಂದೂಗಳು ಕುರಿಗಳಾಗಿದ್ದಾರೆ. ಮನುಷ್ಯ ಧರ್ಮವನ್ನು ಇವರಿಂದ ಕಾಪಾಡಬೇಕು ಎಂದು ಹಿಂದೆ ಹೇಳುತ್ತಿದ್ದೆ. ಈಗ ಹಿಂದೂ ಧರ್ಮವನ್ನೇ ಇವರಿಂದ ಕಾಪಾಡಬೇಕಿದೆ,'' ಎಂದರು.
''ಹೋರಾಟಗಾರರನ್ನು ಹತ್ತಿಕ್ಕಲು ನಗರ ನಕ್ಸಲ ಎಂಬ ಹಣೆಪಟ್ಟಿ ಕಟ್ಟಿ ಬಂಧಿಸಲಾಗುತ್ತಿದೆ. ನಾನು ಕೂಡ ನಗರ ನಕ್ಸಲ,'' ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದರು.
ಎಚ್ ಎಸ್ ದೊರೆಸ್ವಾಮಿ, ಮರುಳಸಿದ್ದಪ್ಪ, ಚಂಪಾ ಮತ್ತಿತರರು ಹಾಜರಿದ್ದರು.
ಗೌರಿ ಲಂಕೇಶ್ ಬಳಗ ಮತ್ತು ಗೌರಿ ಮೆಮೋರಿಯಲ್ ಟ್ರಸ್ಟ್ ಬುಧವಾರ ಆಯೋಜಿಸಿದ್ದ 'ಗೌರಿ ದಿನ-ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ'ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
''ಬಿಜೆಪಿಯನ್ನು ನಡೆಸುತ್ತಿರುವ ಆರ್ಎಸ್ಎಸ್ ನಮ್ಮ ನಿಜವಾದ ಶತ್ರು. ಈ ಕೋಮುವಾದಿಗಳನ್ನು ಹಿಂದಕ್ಕೆ ಸರಿಸಬೇಕೆಂದರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು. ಮೋದಿ ಅಧಿಕಾರದಲ್ಲಿದ್ದರೆ ಗೌರಿಗೆ ನ್ಯಾಯ ಸಿಗದು. ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ತೆರಳಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. 52 ಇಂಚಿನ ಎದೆ ನಮಗೆ ಇರದಿದ್ದರೂ ಹೋರಾಡುವ ಶಕ್ತಿಯಂತೂ ಇದ್ದೇ ಇದೆ,'' ಎಂದರು.
ಒಡೆದು ಆಳುವ ನೀತಿ
ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ''ಮೋದಿಯವರದ್ದು ಬ್ರಿಟಿಷರಂತೆ ಒಡೆದು ಆಳುವ ನೀತಿ. ಹಿಂದೂ ಧರ್ಮದಿಂದ ಅವರಿಗೆ ಏನೂ ಆಗಬೇಕಿಲ್ಲ. ರೈತರು, ಬಡವರು, ದಲಿತರ ಬಗ್ಗೆ ಮಾತನಾಡಿದರೆ ಹಿಂದೂ ಧರ್ಮ ಆತಂಕದಲ್ಲಿದೆ ಎಂದು ಹೇಳುತ್ತಾರೆ. ನಾವು ನಗರ ನಕ್ಸಲರು, ದೇಶ ವಿರೋಧಿಗಳು ಎಂದು ಪಟ್ಟ ಕಟ್ಟುತ್ತಾರೆ. ಆದರೆ ಮೋದಿಯವರು ಪ್ರಧಾನಿಯಾಗಿರುವುದಕ್ಕೇ ಹಿಂದೂ ಧರ್ಮ ಆತಂಕದಲ್ಲಿದೆ ಎಂಬುದನ್ನು ಜನರು ಅರಿಯಬೇಕು,'' ಎಂದರು.
ನಟ ಪ್ರಕಾಶ್ ರೈ ಮಾತನಾಡಿ ''ಮೋದಿಯಂಥವರಿಂದ ಹಿಂದೂಗಳು ಕುರಿಗಳಾಗಿದ್ದಾರೆ. ಮನುಷ್ಯ ಧರ್ಮವನ್ನು ಇವರಿಂದ ಕಾಪಾಡಬೇಕು ಎಂದು ಹಿಂದೆ ಹೇಳುತ್ತಿದ್ದೆ. ಈಗ ಹಿಂದೂ ಧರ್ಮವನ್ನೇ ಇವರಿಂದ ಕಾಪಾಡಬೇಕಿದೆ,'' ಎಂದರು.
''ಹೋರಾಟಗಾರರನ್ನು ಹತ್ತಿಕ್ಕಲು ನಗರ ನಕ್ಸಲ ಎಂಬ ಹಣೆಪಟ್ಟಿ ಕಟ್ಟಿ ಬಂಧಿಸಲಾಗುತ್ತಿದೆ. ನಾನು ಕೂಡ ನಗರ ನಕ್ಸಲ,'' ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದರು.
ಎಚ್ ಎಸ್ ದೊರೆಸ್ವಾಮಿ, ಮರುಳಸಿದ್ದಪ್ಪ, ಚಂಪಾ ಮತ್ತಿತರರು ಹಾಜರಿದ್ದರು.