-ವಿಕ ಫೋನ್ ಕಾರ್ಯಕ್ರಮದಲ್ಲಿ ಪಪೂ ಶಿಕ್ಷಣ ಇಲಾಖೆ ನಿರ್ದೇಶಕರ ಅಭಯ-
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಾರಿ, ನುರಿತ ವಿಷಯ ತಜ್ಞರಿಂದಲೇ ಉತ್ತಮ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಹೈಟೆಕ್ ತಂತ್ರಜ್ಞಾನ ವ್ಯವಸ್ಥೆ ಅಳವಡಿಸಿಕೊಂಡಿದೆ.
ಹಿಂದಿನ ವರ್ಷ ಗಣಿತ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳು ನುಸುಳಿ ಕೃಪಾಂಕ ನೀಡಬೇಕಾಯಿತು. ಅಲ್ಲದೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ‘ವಿಜಯ ಕರ್ನಾಟಕ’ ವಿಷಯ ತಜ್ಞರೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಎಸ್. ಜಯಕುಮಾರ್ (ಮಾನ್ಯತೆ ಮತ್ತು ಅನುದಾನ) ಈ ವಿಷಯ ತಿಳಿಸಿದರು.
‘ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಅನುಭವ ಪಡೆದ ನುರಿತ ವಿಷಯ ತಜ್ಞರಿಂದಲೇ ಈ ಬಾರಿ ಉತ್ತಮ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ, ಕೃಪಾಂಕ ನೀಡುವಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಇಲಾಖೆ, ಪ್ರಶ್ನೆ ಪತ್ರಿಕೆ ತಯಾರಿ, ಮುದ್ರಣ ಹಂತದಿಂದ ಹಿಡಿದು ಜಿಲ್ಲಾ ಖಜಾನೆಗಳಲ್ಲಿ ಪ್ರಶ್ನೆ ಪತ್ರಿಕೆ ಸಂಗ್ರಹಿಸಿಡುವ ಹಾಗೂ ಹೊರ ತೆಗೆಯುವ ಸಂದರ್ಭದಲ್ಲಿ ಕೇವಲ ನಾಲ್ವರು ಸಿಬ್ಬಂದಿ ಹೊರತುಪಡಿಸಿದರೆ ಇತರರಿಗೆ ಅವಕಾಶ ನೀಡುತ್ತಿಲ್ಲ. ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಂಡು ಅಲ್ಲಿ ಕರ್ತವ್ಯ ನಿರ್ವಹಿಸುವ ಇಲಾಖೆ ಹಾಗೂ ಭದ್ರತಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಒಂದು ವೇಳೆ ಅನಧಿಕೃತ ವ್ಯಕ್ತಿಗಳು ಸುಳಿದರೆ ವಿಡಿಯೊ ತುಣುಕು ಸಮೇತ ‘ಅಲರ್ಟ್’ ಮಾಡುವ ಅತ್ಯಾಧುನಿಕ ‘ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್’ ಅಳವಡಿಸಿಕೊಳ್ಳಲಾಗಿದೆ,’ ಎಂದು ಹೇಳಿದರು.
ಸಹಾಯವಾಣಿ ಆರಂಭ
080-23083900
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ ಪೂ ಶಿಕ್ಷಣ ಇಲಾಖೆ ‘ಸಹಾಯವಾಣಿ’ ಆರಂಭಿಸುತ್ತಿದೆ. ಮಾ.6ರ ಬೆಳಗ್ಗೆ 10 ಗಂಟೆ ನಂತರ ಈ ಸಹಾಯವಾಣಿ ಕಾರ್ಯಾರಂಭಿಸಲಿದೆ.
ನೇರವಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಹೆಲ್ಪ್ ‘ಡೆಸ್ಕ್’ ಸೋಮವಾರದಿಂದ ಆರಂಭವಾಗಲಿದೆ.
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಾರಿ, ನುರಿತ ವಿಷಯ ತಜ್ಞರಿಂದಲೇ ಉತ್ತಮ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಹೈಟೆಕ್ ತಂತ್ರಜ್ಞಾನ ವ್ಯವಸ್ಥೆ ಅಳವಡಿಸಿಕೊಂಡಿದೆ.
ಹಿಂದಿನ ವರ್ಷ ಗಣಿತ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳು ನುಸುಳಿ ಕೃಪಾಂಕ ನೀಡಬೇಕಾಯಿತು. ಅಲ್ಲದೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ‘ವಿಜಯ ಕರ್ನಾಟಕ’ ವಿಷಯ ತಜ್ಞರೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಎಸ್. ಜಯಕುಮಾರ್ (ಮಾನ್ಯತೆ ಮತ್ತು ಅನುದಾನ) ಈ ವಿಷಯ ತಿಳಿಸಿದರು.
‘ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಅನುಭವ ಪಡೆದ ನುರಿತ ವಿಷಯ ತಜ್ಞರಿಂದಲೇ ಈ ಬಾರಿ ಉತ್ತಮ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ, ಕೃಪಾಂಕ ನೀಡುವಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಇಲಾಖೆ, ಪ್ರಶ್ನೆ ಪತ್ರಿಕೆ ತಯಾರಿ, ಮುದ್ರಣ ಹಂತದಿಂದ ಹಿಡಿದು ಜಿಲ್ಲಾ ಖಜಾನೆಗಳಲ್ಲಿ ಪ್ರಶ್ನೆ ಪತ್ರಿಕೆ ಸಂಗ್ರಹಿಸಿಡುವ ಹಾಗೂ ಹೊರ ತೆಗೆಯುವ ಸಂದರ್ಭದಲ್ಲಿ ಕೇವಲ ನಾಲ್ವರು ಸಿಬ್ಬಂದಿ ಹೊರತುಪಡಿಸಿದರೆ ಇತರರಿಗೆ ಅವಕಾಶ ನೀಡುತ್ತಿಲ್ಲ. ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಂಡು ಅಲ್ಲಿ ಕರ್ತವ್ಯ ನಿರ್ವಹಿಸುವ ಇಲಾಖೆ ಹಾಗೂ ಭದ್ರತಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಒಂದು ವೇಳೆ ಅನಧಿಕೃತ ವ್ಯಕ್ತಿಗಳು ಸುಳಿದರೆ ವಿಡಿಯೊ ತುಣುಕು ಸಮೇತ ‘ಅಲರ್ಟ್’ ಮಾಡುವ ಅತ್ಯಾಧುನಿಕ ‘ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್’ ಅಳವಡಿಸಿಕೊಳ್ಳಲಾಗಿದೆ,’ ಎಂದು ಹೇಳಿದರು.
ಸಹಾಯವಾಣಿ ಆರಂಭ
080-23083900
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ ಪೂ ಶಿಕ್ಷಣ ಇಲಾಖೆ ‘ಸಹಾಯವಾಣಿ’ ಆರಂಭಿಸುತ್ತಿದೆ. ಮಾ.6ರ ಬೆಳಗ್ಗೆ 10 ಗಂಟೆ ನಂತರ ಈ ಸಹಾಯವಾಣಿ ಕಾರ್ಯಾರಂಭಿಸಲಿದೆ.
ನೇರವಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಹೆಲ್ಪ್ ‘ಡೆಸ್ಕ್’ ಸೋಮವಾರದಿಂದ ಆರಂಭವಾಗಲಿದೆ.