ಆ್ಯಪ್ನಗರ

ಸಾರ್ವಜನಿಕರಿಗೆ ರಾಜಭವನ ಪ್ರವೇಶಕ್ಕೆ ಅವಕಾಶ

ವಿ.ಎಸ್‌.ರಮಾದೇವಿ ಅಧಿಕಾರಾವಧಿ ಬಳಿಕ ಸಾಮಾನ್ಯರ ಪಾಲಿಗೆ ಮುಚ್ಚಿದ್ದ ರಾಜಭವನದ ಗೇಟುಗಳು ಈ ತಿಂಗಳ 16 ರಿಂದ 31ರವರೆಗೆ ತೆರೆದುಕೊಳ್ಳಲಿವೆ.

Vijaya Karnataka Web 8 Aug 2018, 10:28 am
ಬೆಂಗಳೂರು: ‘ಜನಸಾಮಾನ್ಯರ ರಾಜ್ಯಪಾಲರು’ ಎಂಬ ಖ್ಯಾತಿ ಗಳಿಸಿದ್ದ ವಿ.ಎಸ್‌.ರಮಾದೇವಿ ಅಧಿಕಾರಾವಧಿ ಬಳಿಕ ಸಾಮಾನ್ಯರ ಪಾಲಿಗೆ ಮುಚ್ಚಿದ್ದ ರಾಜಭವನದ ಗೇಟುಗಳು ಈ ತಿಂಗಳ 16 ರಿಂದ 31ರವರೆಗೆ ತೆರೆದುಕೊಳ್ಳಲಿವೆ.
Vijaya Karnataka Web rajbhavan


ಇತ್ತೀಚಿನ ದಿನಗಳಲ್ಲಿ ಆಹ್ವಾನಿತ ಗಣ್ಯರು ಮತ್ತು ಅತಿಗಣ್ಯರ ಮಾತ್ರ ಸೀಮಿತವಾಗಿದ್ದ ರಾಜಭವನಕ್ಕೆ ಆ.16 ರಿಂದ ಎರಡು ವಾರಗಳ ಕಾಲ ಸಾರ್ವಜನಿಕರೂ ಪ್ರವೇಶ ಪಡೆಯಬಹುದಾಗಿದೆ. ದಿಲ್ಲಿ ರಾಷ್ಟ್ರಪತಿ ಭವನ ಮಾದರಿಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಭವನಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಅವಧಿಯಲ್ಲಿ ಸಾರ್ವಜನಿಕರು ರಾಜಭವನದ ಭವ್ಯ ಕಟ್ಟಡ, ವಿಶಾಲ ಉದ್ಯಾನ, ಗಾಜಿನ ಮನೆ ಎಲ್ಲವನ್ನೂ ವೀಕ್ಷಿಸಬಹುದಾಗಿದೆ. ಆದರೆ, ಸಾರ್ವಜನಿಕ ಪ್ರವೇಶಕ್ಕೆ ಕೆಲವು ನಿಯಮ, ಷರತ್ತುಗಳು ಅನ್ವಯಿಸುತ್ತವೆ.

ಪ್ರವೇಶ ನಿಯಮ
ಆ.16 ರಿಂದ 31ರವರೆಗೆ ಸಂಜೆ 4 ಗಂಟೆಯಿಂದ 6.30ರವರೆಗೆ ಸಾರ್ವತ್ರಿಕ ರಜಾ ದಿನಗಳಲ್ಲೂ ಪ್ರವೇಶ , ಭೇಟಿಗೆ ಕನಿಷ್ಟ ಐದು ದಿನಗಳ ಮೊದಲು ಹೆಸರು ನೋಂದಣಿಯಾಗಬೇಕು.

ಪ್ರವೇಶ ಉಚಿತ

ಒಂದು ತಂಡದಲ್ಲಿ 30 ಜನರಿಗೆ ಪ್ರವೇಶಾವಕಾಶ

ಪ್ರತಿ ತಂಡದ ಸುತ್ತಾಟಕ್ಕೆ 30 ನಿಮಿಷ ಮಾತ್ರ ಅವಕಾಶ

ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲು ಬರಬೇಕು

ಗುರುತಿನ ಚೀಟಿ ಹೊಂದಿರಬೇಕು

ಕೈಚೀಲ, ಮೊಬೈಲ್‌, ಕ್ಯಾಮೆರಾ ಕೊಂಡೊಯ್ಯುವಂತಿಲ್ಲ

ಹೆಸರು ನೋಂದಣಿ ವೆಬ್‌: http://ajbhavan.kar.nic.in
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ