ಆ್ಯಪ್ನಗರ

ದೇವಾಲಯದ ಹೊರಗೆ ಪೂಜೆ ಮಾಡಿದರೆ ದೇವರನ್ನು ತಲುಪಲ್ಲ: ಕುಕ್ಕೆ ಆಡಳಿತ ಮಂಡಳಿ

ದೇವಾಲಯದ ಹೊರಗೆ ಪೂಜೆ ಮಾಡಿದರೆ ಅದು ದೇವರನ್ನು ತಲುಪುವುದು ಅನುಮಾನ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಸಾರ್ವಜನಿಕ ಸುತ್ತೋಲೆಯನ್ನು ಹೊರಡಿಸಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದರಿಂದ ದೇವಾಲಯದ ಆಡಳಿತ ಮಂಡಳಿ ಈ ರೀತಿ ಸುತ್ತೋಲೆ ಹೊರಡಿಸಿದೆ ಎಂದು ತಿಳಿದುಬಂದಿದೆ.

TIMESOFINDIA.COM 13 Jun 2018, 11:58 am
ಬೆಂಗಳೂರು: ದೇವಾಲಯದ ಹೊರಗೆ ಪೂಜೆ ಮಾಡಿದರೆ ಅದು ದೇವರನ್ನು ತಲುಪುವುದು ಅನುಮಾನ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಸಾರ್ವಜನಿಕ ಸುತ್ತೋಲೆಯನ್ನು ಹೊರಡಿಸಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದರಿಂದ ದೇವಾಲಯದ ಆಡಳಿತ ಮಂಡಳಿ
Vijaya Karnataka Web Kukke subrahmanya temple

ಈ ರೀತಿ ಸುತ್ತೋಲೆ ಹೊರಡಿಸಿದೆ ಎಂದು ತಿಳಿದುಬಂದಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಬಳಿ ಮಧ್ಯವರ್ತಿಗಳು ಭಕ್ತರನ್ನು ಆಕರ್ಷಿಸಿ ಬೇರೆ ಕಡೆ ಕರೆದೊಯ್ದು ಖಾಸಗಿ ಪೂಜೆ ಹಾಗೂ ವಿಶೇಷ ಧಾರ್ಮಿಕ ಆಚರಣೆಯ ಹೆಸರಲ್ಲಿ ಸಾಕಷ್ಟು ಹಣ ವಂಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮದುವೆ ಮಂಟಪಗಳಲ್ಲಿ, ನದಿಯ ದಡಗಳಲ್ಲಿ ಹಾಗೂ ಇತರೆ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸುವುದು ಖಾಸಗಿಯಾದುದು. ಈ ರೀತಿಯ ಪೂಜೆ ಅಥವಾ ದಾನ ಧರ್ಮಗಳು ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ತಲುಪುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಕುಕ್ಕೆ ದೇವಾಲಯ ಶ್ರೀಮಂತವಾಗಿದ್ದು, ವರ್ಷಕ್ಕೆ 95 ಕೋಟಿ ಆದಾಯ ಬರುತ್ತಿದೆ. ಕಳೆದ ವರ್ಷ ಸೇವೆಯಿಂದಲೇ 40 ಕೋಟಿ ಆದಾಯ ಬಂದಿರುವುದು ಗಮನಾರ್ಹವಾಗಿದೆ. ಇನ್ನು, ಪ್ರತಿನಿತ್ಯ ಸುಮಾರು 10,000 ಭಕ್ತರು ದೇವಾಲಯಕ್ಕೆ ತೆರಳುತ್ತಿದ್ದು, ಬಹುತೇಕವಾಗಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠಾ ಮುಂತಾದ ಧಾರ್ಮಿಕ ಆಚರಣೆಗಳನ್ನು ಮಾಡಿಸುತ್ತಾರೆ. ಇಂತಹ ಆಚರಣೆಗಳಿಂದ ಒಳ್ಳೆಯದಾಗುತ್ತದೆಂಬುದು ಭಕ್ತರ ನಂಬಿಕೆಯಾಗಿದೆ. ಆದರೆ, ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಧ್ಯವರ್ತಿಗಳು ತಮ್ಮದೇ ವೆಬ್‌ಸೈಟ್‌ಗಳನ್ನು ಹೊಂದುವ ಮೂಲಕ ಭಕ್ತರನ್ನು ಸೆಳೆಯುತ್ತಿದ್ದಾರೆ. ಹೀಗಾಗಿ ಸುತ್ತೋಲೆ ಹೊರಡಿಸಬೇಕಾಯಿತು ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಮಧ್ಯವರ್ತಿಗಳ ಹಾವಳಿಯಿಂದ ದೇವಾಲಯದ ಆದಾಯಕ್ಕೆ ಹೊಡೆತ ಬೀಳಬಹುದು ಎಂದು ದೇವಾಲಯದ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ, ದೇವಾಲಯದ ಕಡೆಯಿಂದ ಯಾವುದೇ ಬ್ರೋಕರ್‌ಗಳನ್ನಾಗಲೀ, ಮಧ್ಯವರ್ತಿಗಳನ್ನಾಗಲೀ ನೇಮಕ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ದೇವಾಲಯದ ಕಚೇರಿ ಹಾಗೂ ವೆಬ್‌ಸೈಟ್‌ ಅನ್ನು ಹೊರತುಪಡಿಸಿ ಹೊರಗಿನಿಂದ ದಾನ ಧರ್ಮಗಳನ್ನು ಮಾಡುವುದು ಅಥವಾ ಸೇವೆ ಮಾಡುವುದರಿಂದ ಭಕ್ತರ ಉದ್ದೇಶ ಈಡೇರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ