ಆ್ಯಪ್ನಗರ

ಮನಸ್ಸು ಮಾಡಿದರೆ ಮಹೇಶ್‌ ಕಿತ್ತೊಗೆಯುತ್ತೇವೆ: ಶಿಕ್ಷಣ ಸಚಿವರ ವಿರುದ್ಧ ಹರಿಹಾಯ್ದ ಸಿ.ಪುಟ್ಟರಂಗಶೆಟ್ಟಿ

ನಾವು (ಕಾಂಗ್ರೆಸ್‌) ಮನಸ್ಸು ಮಾಡಿದರೆ ಮಹೇಶನನ್ನು ಸಂಪುಟದಿಂದಲೇ ತೆಗೆಸಿ ಬಿಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಶಿಕ್ಷಣ ಸಚಿವ ಮಹೇಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Vijaya Karnataka 26 Sep 2018, 9:01 am
ಚಾಮರಾಜನಗರ: ನಾವು (ಕಾಂಗ್ರೆಸ್‌) ಮನಸ್ಸು ಮಾಡಿದರೆ ಮಹೇಶನನ್ನು ಸಂಪುಟದಿಂದಲೇ ತೆಗೆಸಿ ಬಿಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಶಿಕ್ಷಣ ಸಚಿವ ಮಹೇಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web puttarangashetty congress


ಇತ್ತೀಚೆಗೆ ಸ್ವಚ್ಚತಾ ಅಭಿಯಾನದಲ್ಲಿ ಪಾರ್ಥೇನಿಯಂ ಗಿಡ ಕಿತ್ತು ಕಾಂಗ್ರೆಸ್‌ ಗಿಡ ಕಿತ್ತು ಹಾಕಿದ್ದೇನೆ ಎಂದು ಸಚಿವ ಮಹೇಶ್‌ ಹೇಳಿದ್ದರು. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಪುಟ್ಟರಂಗಶೆಟ್ಟಿ, ''ಅವನ್ಯಾರು ಕಾಂಗ್ರೆಸ್‌ ಕಿತ್ತು ಹಾಕೋಕೆ. ಅವನೇ ಕಿತ್ತು ಹೋಗ್ತಾನೆ. ಅವನು ಒನ್‌ ಮ್ಯಾನ್‌ ಆರ್ಮಿ. ನಾವು 80 ಜನ ಶಾಸಕರು ಇದ್ದೇವೆ. ಜೆಡಿಎಸ್‌ 37ಜನರಿದ್ದಾರೆ. ನಾವು ಒಂದು ನಿಮಿಷ ಮನಸ್ಸು ಮಾಡಿದರೆ ಎನ್‌. ಮಹೇಶ್‌ ಉಳಿಯಲ್ಲ. ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಈ ರೀತಿ ಹೇಳಿಕೆ ಕೊಡಬಾರದು. ಏನೋ ಅವನ ಪುಣ್ಯಕ್ಕೆ ಸಚಿವ ಸ್ಥಾನ ಸಿಕ್ಕಿದೆ. ಅವನೇನು ದೀರ್ಘ ಕಾಲ ರಾಜಕೀಯ ಮಾಡಿ ಬಂದಿಲ್ಲ. ನಾವು ಕಾಂಗ್ರೆಸ್‌ನವರು ಮನಸ್ಸು ಮಾಡಿದರೆ ಕ್ಯಾಬಿನೆಟ್‌ನಿಂದ ಅವನನ್ನು ತೆಗೆಸಿಹಾಕಿಬಿಡ್ತೀವಿ, ಅದನ್ನು ತಿಳಿದುಕೊಳ್ಳಬೇಕು,'' ಎಂದು ಕಿಡಿಕಾರಿದರು.

ಮಹೇಶ್‌


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ