ಆ್ಯಪ್ನಗರ

50ಕ್ಕೂ ಅಧಿಧಿಕ ಎಂಜಿನಿಯರ್‌ಗಳ ವರ್ಗಾವಣೆಗೆ ಕೆಎಟಿ ತಡೆ

ಲೋಕೋಯೋಗಿ ಇಲಾಖೆಯಲ್ಲಿ ಮಾಡಲಾಗಿದ್ದ ಭಾರಿ ಪ್ರಮಾಣದ ಎಂಜಿನಿಯರ್‌ಗಳ ವರ್ಗಾವಣೆಯಲ್ಲಿ ಸುಮಾರು 50ಕ್ಕೂ ಅಧಿಕ ಎಂಜಿನಿಯರ್‌ಗಳ ವರ್ಗಾವಣೆಗೆ ಕರ್ನಾಟಕ ...

Vijaya Karnataka 30 Jul 2019, 5:00 am
ಬೆಂಗಳೂರು: ಲೋಕೋಯೋಗಿ ಇಲಾಖೆಯಲ್ಲಿ ಮಾಡಲಾಗಿದ್ದ ಭಾರಿ ಪ್ರಮಾಣದ ಎಂಜಿನಿಯರ್‌ಗಳ ವರ್ಗಾವಣೆಯಲ್ಲಿ ಸುಮಾರು 50ಕ್ಕೂ ಅಧಿಕ ಎಂಜಿನಿಯರ್‌ಗಳ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ( ಕೆಎಟಿ) ತಡೆ ನೀಡಿದೆ.
Vijaya Karnataka Web pwd engineer transfer
50ಕ್ಕೂ ಅಧಿಧಿಕ ಎಂಜಿನಿಯರ್‌ಗಳ ವರ್ಗಾವಣೆಗೆ ಕೆಎಟಿ ತಡೆ


ಕೆಎಟಿ ಅಧ್ಯಕ್ಷ ಡಾ.ಕೆ.ಭಕ್ತವತ್ಸಲ ಹಾಗೂ ಆಡಳಿತ ಸದಸ್ಯ ವಿ.ಪಿ.ಬಳಿಗಾರ್‌ ಅವರಿದ್ದ ನ್ಯಾಯಪೀಠ ಪ್ರತಿ ದಿನ ಸುಮಾರು 10ಕ್ಕೂ ಅಧಿಕ ಪ್ರಕರಣಗಳಲ್ಲಿ ತಡೆ ನೀಡುತ್ತಿದೆ. ಹಾಗಾಗಿ ಈವರೆಗೆ ಸುಮಾರು 50ಕ್ಕೂ ಅಧಿಕ ಎಂಜಿನಿಯರ್‌ಗಳ ವರ್ಗಾವಣೆಗೆ ತಡೆ ನೀಡಿದೆ. ಚಾರ್ಜ್‌ ನೀಡದಿರುವ ಇನ್ನೂ ಕೆಲವು ಪ್ರಕರಣಗಳಲ್ಲಿ ,ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಲಾಗಿದೆ.

ಬಹುತೇಕ ವರ್ಗಾವಣೆಗಳು ಅವಧಿಗೆ ಮುನ್ನ ಮಾಡಲಾಗಿದೆ ಹಾಗೂ ವರ್ಗಾವಣೆ ಆಗಿರುವವರಿಗೆ ಹೊಸ ಹುದ್ದೆಗಳನ್ನು ತೋರಿಸಿಲ್ಲ, ಹಾಗಾಗಿ ವರ್ಗಾವಣೆಗಳಿಗೆ ಕೆಎಟಿ ತಡೆಯಾಜ್ಞೆ ಜಾರಿಗೊಳಿಸುತ್ತಿದೆ.

ಸೋಮವಾರ ಕೆಎಟಿ ಎತ್ತಿನಹೊಳೆ ಯೋಜನೆಯಲ್ಲಿ ಎಂಜಿನಿಯರ್‌ ಆಗಿದ್ದ ಅನಿಲ್‌ ಕುಮಾರ್‌ ವರ್ಗಾವಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಎತ್ತಿನಹೊಳೆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಮೊದಲು ಜೂ.29ರಂದು ಕೆಐಎಡಿಬಿಗೆ ವರ್ಗಾವಣೆ ಮಾಡಲಾಗಿತ್ತು. ಮತ್ತೆ ಜು.15ಕ್ಕೆ ಅವರನ್ನು ಎತ್ತಿನಹೊಳೆ ಯೋಜನೆಗೆ ವರ್ಗಾಯಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ