ಆ್ಯಪ್ನಗರ

ಸಿಎಂ ಆಗೋ ಯೋಗ ನಿಮಗಿದೆ ಎಂದ ನಿಡುಮಾಮಿಡಿ ಸ್ವಾಮೀಜಿ; ಮುಖದ ಮೇಲೆ ಕೈ ಇಟ್ರು ಅಶೋಕ್!

ಸಚಿವ ಆರ್‌. ಅಶೋಕ್ ಮುಂದಿನ ದಿನಗಳಲ್ಲಿ ಸಿಎಂ ಆಗಲಿದ್ದಾರೆ ಎಂದು ನಿಡುಮಾಡಿಮಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಸ್ವಾಮೀಜಿಯ ಮಾತಿಗೆ ಅಶೋಕ್ ತನ್ನ ಮುಖದ ಮೇಲೆ ಎರಡೂ ಕೈಗಳನ್ನಿಟ್ಟು ಆಶ್ಚರ್ಯ ವ್ಯಕ್ತಪಡಿಸಿದರು.

Vijaya Karnataka Web 28 Jan 2020, 6:02 pm
ಬೆಂಗಳೂರು: ಕಂದಾಯ ಸಚಿವ ಆರ್‌. ಅಶೋಕ್‌ಗೆ ಸಿಎಂ ಆಗುವ ಯೋಗ ಇದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
Vijaya Karnataka Web r ashoka will be next chief minister of karnataka says veerabhadra chennamalla swami
ಸಿಎಂ ಆಗೋ ಯೋಗ ನಿಮಗಿದೆ ಎಂದ ನಿಡುಮಾಮಿಡಿ ಸ್ವಾಮೀಜಿ; ಮುಖದ ಮೇಲೆ ಕೈ ಇಟ್ರು ಅಶೋಕ್!


ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವಾಮೀಜಿ ವೇದಿಕೆಯಲ್ಲಿದ್ದ ಸಚಿವ ಅಶೋಕ್‌ ಅವರನ್ನು ನೋಡಿ ನಿಮಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದರು. ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸುವ ರೀತಿಯಲ್ಲಿ ಆಶೋಕ್ ತಮ್ಮ ಎರಡೂ ಕೈಗಳನ್ನು ಮುಖದ ಮೇಲಿಟ್ಟುಕೊಂಡರು.

ಪಂಚಮಸಾಲಿ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ v/s ಯಡಿಯೂರಪ್ಪ, ವೇದಿಕೆಯಿಂದ ಹೊರನಡೆಯಲೆತ್ನಿಸಿದ ಸಿಎಂ

ಸಚಿವ ಆಶೋಕ್ ಅವರು ಜನರ ಜೊತೆ ಇರುವವರು, ಹೀಗಾಗಿ ಮುಂದೆ ಸಿಎಂ ಆಗುವ ಅವಕಾಶ ಸಿಗಲಿದೆ. ಸೋಮಣ್ಣನವರಿಗೂ ಆ ದೇವರು ಅನುಗ್ರಹ ನೀಡಲಿ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹಾರೈಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಮುಂದುವರಿಕೆ: ಕಾಂಗ್ರೆಸ್ ಹೈಕಮಾಂಡ್‌ ಸೂಚನೆ

ಕಂದಾಯ ಸಚಿವರಾಗಿರುವ ಆರ್. ಅಶೋಕ್ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವೂ ಇವರ ಪಾಲಿಗೆ ಒಲಿದು ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಉಪಚುನಾವಣೆಯ ಸಂದರ್ಭದಲ್ಲಿ ಕೊಂಚ ಅಸಮಧಾನಗೊಂಡಿದ್ದರು.

ಮಂಗಳವಾರ ಬೆಂಗಳೂರನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಬಿಎಸ್‌ವೈ ಸಮ್ಮುಖದಲ್ಲೇ ನಿಡುಮಾಮಿಡಿ ಸ್ವಾಮೀಜಿ ಆರ್. ಅಶೋಕ್‌ ಅವರಿಗೆ ಸಿಎಂ ಭಾಗ್ಯ ಒದಗಿಬರಲಿದೆ ಎಂದು ಭವಿಷ್ಯ ನುಡಿದಿರುವುದು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ