ಆ್ಯಪ್ನಗರ

ಸಿಎಂ ಹಾಗೂ ಜಮೀರ್‌ಗೆ ರಾಗಿ ಮುದ್ದೆ ಚಾಲೆಂಜ್ ನೀಡಿದ ಸಾರ್ವಜನಿಕರು

ಫಿಟ್‌ನೆಸ್‌ ಚಾಲೆಂಜ್‌ ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಸಚಿವ ಜಮೀರ್‌ ಅಹ್ಮದ್‌ಗೆ ರಾಗಿ ಮುದ್ದೆ ಚಾಲೆಂಜ್‌ ನೀಡಲಾಗಿದ್ದು, ಅದರಲ್ಲೂ ಹೊಸ ವಿಧಾನ ಅನುಸರಿಸಲಾಗಿದೆ.

TIMESOFINDIA.COM 22 Jun 2018, 3:25 pm
ಬೆಂಗಳೂರು: ಟ್ವಿಟರ್‌ ಹಾಗೂ ಸಮಾಜಿಕ ತಾಣಗಳಲ್ಲಿ ಫಿಟ್‌ನೆಸ್‌ ಚಾಲೆಂಜ್‌ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೇ ಫಿಟ್‌ನೆಸ್‌ ಚಾಲೆಂಜ್‌ ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಸಚಿವ ಜಮೀರ್‌ ಅಹ್ಮದ್‌ಗೆ ರಾಗಿ ಮುದ್ದೆ ಚಾಲೆಂಜ್‌ ನೀಡಲಾಗಿದ್ದು, ಅದರಲ್ಲೂ ಹೊಸ ವಿಧಾನ ಅನುಸರಿಸಲಾಗಿದೆ.
Vijaya Karnataka Web ragi


ಕಳೆದ ಕೆಲವು ದಿನಗಳಿಂದ ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ರಾಗಿ ಸರಿಯಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ, ಕುಮಾರಸ್ವಾಮಿ ಹಾಗೂ ಜಮೀರ್‌ ಅವರ ಮನೆಗೆ ಕುರುಬರಹಳ್ಳಿಯ ಕೆಲವು ಜನರು ರಾಗಿಯನ್ನು ಪಾರ್ಸೆಲ್‌ ಮಾಡಿದ್ದಾರೆ. ಅಲ್ಲದೆ ಪೂರೈಕೆಯಾಗುತ್ತಿರುವ ರಾಗಿ ಕಳಪೆ ಗುಣಮಟ್ಟದ್ದಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಇದಕ್ಕಾಗಿಯೇ ರಾಗಿಯನ್ನು ಜಮೀರ್ ಅಹ್ಮದ್‌ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪಾರ್ಸೆಲ್‌ ಮಾಡಿದ್ದು, ಇದನ್ನೇ ಬಳಸಿ ಅವರು ಮುದ್ದೆ ತಯಾರಿಸಿ, ಸೇವಿಸಲಿ ಎಂದು ಚಾಲೆಂಜ್‌ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ರಾಗಿ ಮನುಷ್ಯ ಬಳಕೆಗೆ ಯೋಗ್ಯವಾಗಿಲ್ಲ. ರಾಗಿಯನ್ನು ಸ್ವಚ್ಛ ಮಾಡುವ ವೇಳೆ ಅವುಗಳಲ್ಲಿ ಹುಳಗಳಾಗಿರುವುದನ್ನು ಗುರಿತಿಸಿದ್ದೇನೆ. ಹೀಗಾಗಿ ಅವನ್ನು ಕೋಳಿಗಳಿಗಳಿ ನೀಡಿದ್ದೇವೆ. ಕೆಲವು ಬಾರಿ ಅವುಗಳಿಗೆ ನೀಡಲು ಯೋಗ್ಯವಾಗಿರುವುದಿಲ್ಲ ಎಂದು ಜೆಸಿ ನಗರದ ಸುನಂದ ಎಂಬವರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ