ಆ್ಯಪ್ನಗರ

ನಿಮಗೆ ತಾಕತ್ತಿದ್ದರೆ ಸಂವಿಧಾನ ಬದಲಿಸಿ: ರಾಹುಲ್‌ ಸವಾಲ್‌

ತಾಕತ್ತಿದ್ದರೆ ಸಂವಿಧಾನ ಬದಲಿಸುವ ದಾಷ್ಟ್ರ್ಯ ತೋರಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸವಾಲು ಹಾಕಿದ್ದಾರೆ.

Vijaya Karnataka 10 May 2018, 7:11 am
ಬೆಂಗಳೂರು: ತಾಕತ್ತಿದ್ದರೆ ಸಂವಿಧಾನ ಬದಲಿಸುವ ದಾಷ್ಟ್ರ್ಯ ತೋರಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸವಾಲು ಹಾಕಿದ್ದಾರೆ.
Vijaya Karnataka Web 0805-2-2-02


ನಗರದ ವಿವಿಧೆಡೆ ರೋಡ್‌ಶೋ ನಡೆಸಿ ಶಿವಾಜಿನಗರದಲ್ಲಿ ಭಾಷಣ ಮಾಡಿದ ಅವರು, ''ಸಂವಿಧಾನ ಬದಲಿಸುವ ಮಾತು ಬದಿಗಿರಲಿ. ತಾಕತ್ತಿದ್ದರೆ ಸಂವಿಧಾನವನ್ನು ಮುಟ್ಟಿ ನೋಡಿ. ಆರ್‌ಎಸ್‌ಎಸ್‌ ಈ ದೇಶವನ್ನು ಆಳಲು ನೋಡುತ್ತಿದೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ,'' ಎಂದು ವಾಗ್ದಾಳಿ ನಡೆಸಿದರು.

ಪ್ರಚಾರ ಭಾಷಣದುದ್ದಕ್ಕೂ ಕರ್ನಾಟಕವನ್ನು ಪ್ರಧಾನಿ ಮೋದಿ ಅಪಮಾನಿಸಿದ್ದಾರೆ. ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಕರ್ನಾಟಕಕ್ಕೆ ಮೋದಿ ಕೊಡುಗೆ ಏನೂ ಇಲ್ಲ. ಇದಕ್ಕೆಲ್ಲ ಜನರು ತಕ್ಕ ಉತ್ತರ ಕೊಡುತ್ತಾರೆ. ಮುಂದೆ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡದಲ್ಲೂ ಬಿಜೆಪಿ ಅಧಿಕಾರ ಕಳೆದುಕೊಳ್ಳಿದೆ ಎಂದರು.

''ನ್ಯಾಯಮೂರ್ತಿ ಲೋಯಾ ಸಾವಿನ ಪ್ರಕರಣದಲ್ಲಿ ಬಿಜೆಪಿ ನಾಯಕರ ಕೈವಾಡವಿದೆ. ಈ ಬಗ್ಗೆ ಮೋದಿ ಮಾತಾಡುವುದೇ ಇಲ್ಲ. ತಮ್ಮ ಸ್ನೇಹಿತರು ಬ್ಯಾಂಕ್‌ ಲೂಟಿ ಹೊಡೆದು ಓಡಿ ಹೋದಾಗಲೂ ಮೋದಿ ಸುಮ್ಮನಿದ್ದರು. ರೆಡ್ಡಿ ಬ್ರದರ್ಸ್‌ಗೆ ಟಿಕೆಟ್‌ ಕೊಟ್ಟ ಬಗ್ಗೆಯೂ ಮೋದಿ ಮೌನ ಮುರಿಯಲಿಲ್ಲ,'' ಎಂದು ಕಟುವಾಗಿ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ