ಆ್ಯಪ್ನಗರ

Rahul Gandhi Disqualified : ರಾಹುಲ್‌ ಗಾಂಧಿ ಅನರ್ಹ; ಸಂವಿಧಾನದ ಘೋರ ಅತ್ಯಾಚಾರ, ಇದ್ರ ಹಿಂದೆ ಯಾರಿದ್ದಾರೆ ಅಂತಾ ಎಳೆ ಮಕ್ಕಳಿಗೂ ಗೊತ್ತಿದೆ- ರಮೇಶ್‌ ಕುಮಾರ್‌

Rahul Gandhi Disqualified : ಲೋಕಸಭೆಯಿಂದ ರಾಹುಲ್‌ ಗಾಂಧಿ ಅವರನ್ನು ತರಾತುರಿಯಲ್ಲಿ ಅನರ್ಹ ಮಾಡಿದ್ದಾರೆ ಎಂದು ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಆರೋಪಿಸಿದ್ದಾರೆ. ಅನರ್ಹತೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Authored by ಜಯಪ್ರಕಾಶ್‌ ಬಿರಾದಾರ್‌ | Vijaya Karnataka Web 24 Mar 2023, 6:36 pm

ಹೈಲೈಟ್ಸ್‌:

  • ರಾಹುಲ್‌ ಗಾಂಧಿ ಅವರನ್ನು ತರಾತುರಿಯಲ್ಲಿ ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದು, ಇದು ಸಂವಿಧಾನದ ಮೇಲಿನ ಘೋರ ಅತ್ಯಾಚಾರ.
  • ರಾಹುಲ್‌ ಗಾಂಧಿ ಅನರ್ಹತೆ ಹಿಂದೆ ಯಾರಿದ್ದಾರೆ ಎಂದು ಎಳೆಯ ಮಕ್ಕಳಿಗೂ ಗೊತ್ತಾಗುತ್ತದೆ ಎಂದ ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌.
  • ರಾಹುಲ್‌ ಗಾಂಧಿಯವರನ್ನು ಅನರ್ಹಗೊಳಿಸಿರುವುದನ್ನು ದೇಶವನ್ನು ಪ್ರೀತಿಸುವ ಯಾರೊಬ್ಬರು ಒಪ್ಪುವುದಿಲ್ಲ ಎಂದ ರಮೇಶ್‌ ಉಮಾರ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rahul gandhi congress
ರಾಹುಲ್ ಗಾಂಧಿ
ಬೆಂಗಳೂರು: ರಾಹುಲ್‌ ಗಾಂಧಿ ಅವರನ್ನು ತರಾತುರಿಯಲ್ಲಿ ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದು, ಇದು ಸಂವಿಧಾನದ ಮೇಲಿನ ಘೋರ ಅತ್ಯಾಚಾರ. ಇದರ ಹಿಂದೆ ಯಾರಿದ್ದಾರೆ ಎಂದು ಎಳೆಯ ಮಕ್ಕಳಿಗೂ ಗೊತ್ತಾಗುತ್ತದೆ ಎಂದು ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಕಿಡಿಕಾರಿದ್ದಾರೆ.
ಲೋಕಸಭೆ ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹಗೊಳಿಸಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಮಾಜಿ ಸಭಾಧ್ಯಕ್ಷ ಹಾಗೂ ಶಾಸಕ ರಮೇಶ್‌ ಕುಮಾರ್‌, ರಾಹುಲ್‌ ಗಾಂಧಿಗೆ ಶಿಕ್ಷೆ ವಿಧಿಸಿದ್ದ ಕೋರ್ಟ್‌ ತನ್ನ ಆದೇಶ ಜಾರಿಯನ್ನು 30 ದಿನಗಳ ಅಮಾನತಿನಲ್ಲಿದೆ. ಜತೆಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟಿದೆ. ಆದರೆ, ಲೋಕಸಭೆ ಸ್ಪೀಕರ್‌ ತರಾತುರಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಅನರ್ಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಅನರ್ಹತೆಯಿಂದ ಯಾರಿದ್ದಾರೆ ಎಂದು ಎಳೆಯ ಮಕ್ಕಳಿಗೂ ಗೊತ್ತಾಗುತ್ತೆ

ಯಾವ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ನೀಡಿತ್ತೋ ಆದೇಶವನ್ನು ಅನರ್ಹ ಮಾಡಿದೆ. ನ್ಯಾಯಾಲಯದ ಅನರ್ಹ ಆದೇಶವನ್ನು ಆಧಾರವಾಗಿಟ್ಟುಕೊಂಡು ತೀರ್ಪು ಬಂದ 24 ಗಂಟೆಯಲ್ಲಿಯೇ ಯಾವುದೇ ಕಾನೂನು ಸಾಧ್ಯತೆಗಳನ್ನು ಅವಲೋಕಿಸದೇ, ಯಾವುದೇ ಮಾಹಿತಿ ನೀಡದೇ, ನೋಟಿಸ್‌ ಕೊಡದೇ ರಾಹುಲ್‌ ಗಾಂಧಿ ಅವರಿಗೆ ಲೋಕಸಭೆ ಸ್ಪೀಕರ್‌ ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಇದು ಲೋಕಸಭೆ ಸ್ಪೀಕರ್‌ ಆದೇಶವೋ ಅಥವಾ ಇದರ ಹಿಂದೆ ಇರುವವರ ಆದೇಶವೋ. ಇದರ ಹಿಂದೆ ಯಾರಿದ್ದಾರೆ ಎಂದು ಎಳೆಯ ಮಕ್ಕಳಿಗೂ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Rahul Gandhi Disqualified :ರಾಹುಲ್‌ ಗಾಂಧಿ ಲೋಕಸಭೆಯಿಂದ ಅನರ್ಹ; ಇದು ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ಎಂದ ರಾಜ್ಯ ಬಿಜೆಪಿ ನಾಯಕರು

ದೇಶವನ್ನು ಪ್ರೀತಿಸುವ ಯಾರೊಬ್ಬರು ಒಪ್ಪುವುದಿಲ್ಲ

ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ದೇಶವನ್ನು ಪ್ರೀತಿಸುವ ಯಾರೊಬ್ಬರು ಒಪ್ಪುವುದಿಲ್ಲ. ಇದಕ್ಕಿಂತಲೂ ಘೋರ ಅಪಚಾರ ಇನ್ನೊಂದಿಲ್ಲ. ಸಮಾಜಕ್ಕೆ ಆತ್ಮವಂಚನೆ ಮಾಡಿದ್ದಾರೆ. ನಮಗೆ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಮಗೆ ನಂಬಿಕೆ ಇಲ್ಲ ಎಂಬ ಸಂದೇಶವನ್ನು ಲೋಕಸಭೆ ಸ್ಪೀಕರ್‌ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Rahul Gandhi Disqualified: ರಾಹುಲ್‌ ಗಾಂಧಿ ಹೇಳುವ ಸತ್ಯ ಎದುರಿಸಲಾಗದೇ ಹೇಡಿ ಮೋದಿ ಸರ್ಕಾರ ಅವರನ್ನು ಅನರ್ಹಗೊಳಿಸಿದೆ - ಸಿದ್ದರಾಮಯ್ಯ ಕಿಡಿ

ಮಹನೀಯರು ಸ್ಪೀಕರ್‌ ಆಗಿದ್ದರು

ಸೋಮನಾಥ ಚಟರ್ಜಿಯಂತಹ ಮಹಾನ್‌ ನಾಯಕರು ಸ್ಪೀಕರ್‌ ಆಗಿದ್ದ ದೇಶವಿದೆ. ಆದರೆ, ತರಾತುರಿಯ ನಿರ್ಧಾರ ಮಾಡಿ ಸದ್ಯ ಇರುವ ಲೋಕಸಭೆ ಸ್ಪೀಕರ್‌ ಆ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ದೇಶದ ಸಂವಿಧಾನ ಎಂಥಯಾ ಗತಿ ಬಂದಿದೆ ಎಂದು ರಮೇಶ್‌ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ