ಆ್ಯಪ್ನಗರ

7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ರಾಜ್ಯದಲ್ಲಿ ಮುಂಗಾರಿನ ಆರ್ಭಟ ಮುಂದುವರಿದಿದೆ...

Vijaya Karnataka 11 Aug 2019, 5:00 am
ಬೆಂಗಳೂರು: ರಾಜ್ಯದಲ್ಲಿ ಮುಂಗಾರಿನ ಆರ್ಭಟ ಮುಂದುವರಿದಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಆ.11ರ ವರೆಗೆ ಹಾಗೂ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಿಗೆ ಆ.12ರ ವರೆಗೆ ರೆಡ್‌ ಅಲರ್ಟ್‌ ನೀಡಲಾಗಿದೆ.
Vijaya Karnataka Web BNG-BJP-10NLTD1D


ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕೊಟ್ಟಿಗೆಹಾರದಲ್ಲಿ ಒಂದೇ ದಿನ 570 ಮಿ.ಮೀ. ಮಳೆ ಸುರಿದಿದೆ. ಹುಂಚದಕಟ್ಟೆಯಲ್ಲಿ 390 ಮಿ.ಮೀ., ಕಳಸದಲ್ಲಿ 320 ಮಿ.ಮೀ., ಮೂಡಿಗೆರೆ, ಸುಬ್ರಹ್ಮಣ್ಯದಲ್ಲಿ 310 ಮಿ.ಮೀ., ಲಿಂಗನಮಕ್ಕಿಯಲ್ಲಿ 270 ಮಿ.ಮೀ., ಭಾಗಮಂಡಲದಲ್ಲಿ 260 ಮಿ.ಮೀ., ಧರ್ಮಸ್ಥಳ, ಹೊಸನಗರದಲ್ಲಿ 230 ಮಿ.ಮೀ., ಬೆಳ್ತಂಗಡಿಯಲ್ಲಿ 220 ಮಿ.ಮೀ., ಸಿದ್ದಾಪುರ (ಉತ್ತರ ಕನ್ನಡ), ಕಮ್ಮರಡಿ, ಜಯಪುರದಲ್ಲಿ 210 ಮಿ.ಮೀ., ಪೊನ್ನಂಪೇಟೆ, ಸಕಲೇಶಪುರ, ತೀರ್ಥಹಳ್ಳಿಯಲ್ಲಿ 190 ಮಿ.ಮೀ., ವಿರಾಜಪೇಟೆಯಲ್ಲಿ 180 ಮಿ.ಮೀ., ಉಪ್ಪಿನಂಗಡಿ, ಮಂಗಳೂರು, ಶೃಂಗೇರಿ, ಮೂಡಬಿದಿರೆಯಲ್ಲಿ 170 ಮಿ.ಮೀ., ಆಲೂರು, ಸಾಗರದಲ್ಲಿ 160 ಮಿ.ಮೀ., ಮಾಣಿಯಲ್ಲಿ 150 ಮಿ.ಮೀ., ಸುಳ್ಯ, ತಾಳಗುಪ್ಪದಲ್ಲಿ 140 ಮಿ.ಮೀ., ಪಣಂಬೂರು, ಕಾರ್ಕಳ, ಲಕ್ಕವಳ್ಳಿ, ಮಡಿಕೇರಿಯಲ್ಲಿ 130 ಮಿ.ಮೀ., ಬೆಳಗಾವಿಯಲ್ಲಿ 120 ಮಿ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ