ನಟ ರಜನಿಕಾಂತ್ ಪತ್ನಿಗೆ ನಗರ ಪೊಲೀಸರ ನೋಟಿಸ್
ವಂಚನೆ ಆರೋಪ ಪ್ರಕರಣದಲ್ಲಿ ಖ್ಯಾತ ನಟ, ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ಲತಾ ರಜನಿಕಾಂತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ...
Vijaya Karnataka 12 May 2019, 5:00 am
ಬೆಂಗಳೂರು: ವಂಚನೆ ಆರೋಪ ಪ್ರಕರಣದಲ್ಲಿ ಖ್ಯಾತ ನಟ, ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ಲತಾ ರಜನಿಕಾಂತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವಂಚನೆ, ನಕಲಿ ದಾಖಲೆ ಸಲ್ಲಿಕೆ ಆರೋಪದಲ್ಲಿ ಆ್ಯಡ್ಬ್ಯುರೋ ಅಡ್ವರ್ಟೈಸಿಂಗ್ ಪ್ರೈ.ಲಿನ ಅಭಿಚಂದ್ ನಹರ್ ಎಂಬುವರು ಲತಾ ರಜನೀಕಾಂತ್ ವಿರುದ್ಧ 2015ರಲ್ಲಿ ಪ್ರಕರಣ ದಾಖಲಿಸಿದ್ದರು.
ಕೊಚಡಯ್ಯನ್ ಸಿನಿಮಾ ನಿರ್ಮಾಣದ ಕುರಿತು ಅಭಿಚಂದ್ ನಹರ್ ಮತ್ತು ಲತಾ ರಜನಿಕಾಂತ್ ಕೋಟ್ಯಂತರ ಒಪ್ಪಂದವಾಗಿತ್ತು. ನಂತರ ಇಬ್ಬರ ನಡುವೆ ಕಲಹ ಉಂಟಾಗಿತ್ತು. ಈ ವೇಳೆ ಅಭಿಚಂದ್ ಕಂಪನಿಯ ಕುರಿತಾಗಿ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ ತಮ್ಮ ಪರ ಆದೇಶವೊಂದನ್ನು ಪಡೆದುಕೊಂಡಿದ್ದ ಆರೋಪ ಲತಾ ರಜನಿಕಾಂತ್ ಅವರ ಮೇಲೆ ಇತ್ತು. ಲತಾ ಅವರು ನಗರದ ಕ್ರೆಸೆಂಟ್ ರಸ್ತೆಯ ವಿಳಾಸ ನೀಡಿದ್ದ ಕಾರಣ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಂಚನೆ ಪ್ರಕರಣದಲ್ಲಿ ಈ ಹಿಂದೆ ನಿಮ್ಮಿಂದ ಹೇಳಿಕೆ ಪಡೆಯಲಾಗಿದೆ. ಈಗ ಹೆಚ್ಚಿನ ಮಾಹಿತಿ ಪಡೆಯಬೇಕಾಗಿರುವ ಕಾರಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ನೋಟಿಸ್ಗೆ ಪ್ರತಿಕ್ರಿಯಿಸಿರುವ ಲತಾ ಅವರು, ಪ್ರಯಾಣ ಮಾಡುತ್ತಿರುವ ಕಾರಣ ಮೇ 20ರ ನಂತರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.
ವಂಚನೆ, ನಕಲಿ ದಾಖಲೆ ಸಲ್ಲಿಕೆ ಆರೋಪದಲ್ಲಿ ಆ್ಯಡ್ಬ್ಯುರೋ ಅಡ್ವರ್ಟೈಸಿಂಗ್ ಪ್ರೈ.ಲಿನ ಅಭಿಚಂದ್ ನಹರ್ ಎಂಬುವರು ಲತಾ ರಜನೀಕಾಂತ್ ವಿರುದ್ಧ 2015ರಲ್ಲಿ ಪ್ರಕರಣ ದಾಖಲಿಸಿದ್ದರು.
ಕೊಚಡಯ್ಯನ್ ಸಿನಿಮಾ ನಿರ್ಮಾಣದ ಕುರಿತು ಅಭಿಚಂದ್ ನಹರ್ ಮತ್ತು ಲತಾ ರಜನಿಕಾಂತ್ ಕೋಟ್ಯಂತರ ಒಪ್ಪಂದವಾಗಿತ್ತು. ನಂತರ ಇಬ್ಬರ ನಡುವೆ ಕಲಹ ಉಂಟಾಗಿತ್ತು. ಈ ವೇಳೆ ಅಭಿಚಂದ್ ಕಂಪನಿಯ ಕುರಿತಾಗಿ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ ತಮ್ಮ ಪರ ಆದೇಶವೊಂದನ್ನು ಪಡೆದುಕೊಂಡಿದ್ದ ಆರೋಪ ಲತಾ ರಜನಿಕಾಂತ್ ಅವರ ಮೇಲೆ ಇತ್ತು. ಲತಾ ಅವರು ನಗರದ ಕ್ರೆಸೆಂಟ್ ರಸ್ತೆಯ ವಿಳಾಸ ನೀಡಿದ್ದ ಕಾರಣ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಂಚನೆ ಪ್ರಕರಣದಲ್ಲಿ ಈ ಹಿಂದೆ ನಿಮ್ಮಿಂದ ಹೇಳಿಕೆ ಪಡೆಯಲಾಗಿದೆ. ಈಗ ಹೆಚ್ಚಿನ ಮಾಹಿತಿ ಪಡೆಯಬೇಕಾಗಿರುವ ಕಾರಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ನೋಟಿಸ್ಗೆ ಪ್ರತಿಕ್ರಿಯಿಸಿರುವ ಲತಾ ಅವರು, ಪ್ರಯಾಣ ಮಾಡುತ್ತಿರುವ ಕಾರಣ ಮೇ 20ರ ನಂತರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.