ಆ್ಯಪ್ನಗರ

ರಾಜೀವ್ ಚಂದ್ರಶೇಖರ್ ಕನ್ನಡಪರ ಹೋರಾಟಗಾರ: ಬಿಎಸ್‌ವೈ

ರಾಜೀವ್ ಚಂದ್ರಶೇಖರ್ ಕನ್ನಡದವರೇ, ಕನ್ನಡಪರ ವಿಷಯಗಳಿಗೆ ಹೋರಾಟ ಮಾಡಿದವರು. ಅವರು ಬಿಜೆಪಿ ಸೇರಿರುವುದು ಉತ್ತಮ ಬೆಳವಣಿಗೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Vijaya Karnataka Web 12 Mar 2018, 2:12 pm
ಬೆಂಗಳೂರು: ರಾಜೀವ್ ಚಂದ್ರಶೇಖರ್ ಕನ್ನಡದವರೇ, ಕನ್ನಡಪರ ವಿಷಯಗಳಿಗೆ ಹೋರಾಟ ಮಾಡಿದವರು. ಕರ್ನಾಟಕದಲ್ಲಿಯೇ ಬಹಳ ವರ್ಷಗಳಿಂದ ನೆಲೆಸಿದ್ದಾರೆ. ಬೆಂಗಳೂರು ನಗರದಲ್ಲಿ ಹಲವು ಜನಪರ ವಿಷಯಗಳ ಕುರಿತು ಹೋರಾಟ ನಡೆಸಿದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web rajeev chandrasekhar nomination filing
ರಾಜೀವ್ ಚಂದ್ರಶೇಖರ್ ಕನ್ನಡಪರ ಹೋರಾಟಗಾರ: ಬಿಎಸ್‌ವೈ


ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಕನ್ನಡದವರಿಗೆ ಯಾಕೆ ಬಿಜೆಪಿ ಆದ್ಯತೆ ಕೊಡಲಿಲ್ಲ ಎಂಬ ಪ್ರಶ್ನೆಗೆ ಯಡಿಯೂರಪ್ಪ ಈ ಪ್ರತಿಕ್ರಿಯೆ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆ

ರಾಜ್ಯ ಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ರಾಜ್ಯ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿ ಎಸ್. ಮೂರ್ತಿಗೆ ನಾಮ ಪತ್ರ ಸಲ್ಲಿಸಿದಾಗ ಅವರ ತಂದೆ ತಾಯಿ, ಯಡಿಯೂರಪ್ಪ ,ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಜತೆಗಿದ್ದರು.

ಕಾಂಗ್ರೆಸ್ ಮುಕ್ತ ಭಾರತ ಮಾಡುವುದೇ ನನ್ನ ಉದ್ದೇಶ. ನನ್ನ ನಿಲುವು ಬಿಜೆಪಿಗೆ ಹೊಂದಿಕೆಯಾಗುವುದರಿಂದ ಇಂದು ಬಿಜೆಪಿ ಸೇರಿದ್ದೇನೆ ಮೋದಿಯ ಉದ್ದೇಶ ಸಾಕಾರಗೊಳಿಸುವ ಉದ್ದೇಶವಿದೆ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದರು.

ರಾಜೀವ್‌ ಚಂದ್ರಶೇಖರ್‌12 ವರ್ಷದಿಂದ 'ಬೆಂಗಳೂರು ರಕ್ಷಿಸಿ' ಹೋರಾಟ ಮಾಡುತ್ತಿದ್ದಾರೆ. ಜನರ ರಕ್ಷಣೆ, ಸ್ವಚ್ಛತೆ ಬಗ್ಗೆ ನ್ಯಾಯಲಯದ ಒಳಗೆ ಹಾಗೂ ಹೊರಗೆ ಹೋರಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ, ನೆರೆ ಹಾವಳಿ ಸಂತ್ರಸ್ತರಿಗೆ ಅಪಾರ ಸಹಾಯಧನ ಮಾಡಿದ್ದರು. ಅವರಿಂದು ಪಕ್ಷ ಸೇರಿರುವುದು ಉತ್ತಮ ಬೆಳವಣಿಗೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ