ಆ್ಯಪ್ನಗರ

ರಾಕೇಶ್‌ ಸಿದ್ದರಾಮಯ್ಯ ಸಾವಿಗೆ ಹೆಬ್ಬಾಳ ಶಾಸಕ ಕಾರಣ

ಸಿದ್ದರಾಮಯ್ಯ ಪುತ್ರ ರಾಕೇಶ್‌ ಸಾವಿಗೆ ಶಾಸಕ ಬೈರತಿ ಸುರೇಶ್‌ ಕಾರಣ ಎಂದು ...

Vijaya Karnataka 23 Sep 2019, 5:00 am
ಸೂಲಿಬೆಲೆ: ಸಿದ್ದರಾಮಯ್ಯ ಪುತ್ರ ರಾಕೇಶ್‌ ಸಾವಿಗೆ ಶಾಸಕ ಬೈರತಿ ಸುರೇಶ್‌ ಕಾರಣ ಎಂದು ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ಗಂಭೀರ ಆರೋಪ ಮಾಡಿದ್ದಾರೆ.
Vijaya Karnataka Web hoskote mtb nagaraj (congress)


ಬೆಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹೊಸಕೋಟೆಯಲ್ಲಿಶನಿವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿಕೈ ನಾಯಕರು ಆಡಿದ ಮಾತುಗಳಿಗೆ ತಿರುಗೇಟು ನೀಡಿದರು.

''ರಾಕೇಶ್‌ಗೆ ದಿನ ಕುಡಿಸಿ ಹಾಳು ಮಾಡಿ ಸಾಯಿಸಿ¨. ಅವನು ಇನ್ನೂ ರಾಜಕೀಯದಲ್ಲಿಬಚ್ಚ, ನನ್ನ ಬಗ್ಗೆ ಮಾತನಾಡಲು ಅವನಿಗೆ ನೈತಿಕತೆ ಏನಿದೆ,'' ಎಂದು ಹೆಬ್ಬಾಳ ಶಾಸಕರ ವಿರುದ್ಧ ಏಕವಚನದಲ್ಲಿವಾಗ್ದಾಳಿ ನಡೆಸಿದರು.

'' ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರೋದಕ್ಕೂ ಮೊದ್ಲೇ ನಾನಿದ್ದೇನೆ. ಸರಕಾರ ನಡೆಸಿದ ದೇವೇಗೌಡ, ಎಸ್‌.ಎಂ.ಕೃಷ್ಣ ಸೇರಿ ಎಲ್ಲಮುಖ್ಯ ಮಂತ್ರಿಗಳು ಆಯಾ ಸಮುದಾಯಕ್ಕೆ ಹೆಚ್ಚಿನ ಮಂತ್ರಿ ಸ್ಥಾನಗಳನ್ನು ನೀಡಿದ್ದರು. ಸಿದ್ದರಾಮಯ್ಯ ಎಷ್ಟು ಜನ ಕುರುಬರನ್ನು ಮಂತ್ರಿ ಮಾಡಿದ್ದಾರೆ,'' ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲಿಶೋಬನಾ ಮಾಡಿಕೊಂಡ್ರಾ?

ತಮ್ಮನ್ನು ನಮಕ್‌ಹರಾಮ್‌ ಎಂದು ಜರಿದ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ವಿರುದ್ಧವೂ ವಾಗ್ದಾಳಿ ನಡೆಸಿದ ಎಂಟಿಬಿ, ''ಆತ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾನೆ. ಕೆ.ಎಚ್‌ ಮುನಿಯಪ್ಪ ಸೋಲಿಗೆ ರಮೇಶ್‌ ಕುಮಾರ್‌ ಕಾರಣ. ಈ ಬಗ್ಗೆ ಮುನಿಯಪ್ಪ ದೂರು ಕೊಟ್ಟರೂ ಯಾಕೆ ಕಿತ್ತಾಕಿಲ್ಲ. 64 ಎಕರೆ ಅರಣ್ಯ ಭೂಮಿ ಕಬಳಿಕೆ ಮಾಡಿದ್ದು ಗೊತ್ತಿಲ್ವಾ? ಅವರೇನು ಕಾಂಗ್ರೆಸ್‌ ನಲ್ಲಿಮದುವೆಯಾಗಿದ್ರಾ? ಜೆಡಿಎಸ್‌ನಲ್ಲಿಮದುವೆಯಾಗಿ ಕಾಂಗ್ರೆಸ್‌ನಲ್ಲಿಶೋಭನಾ ಮಾಡಿಕೊಂಡ್ರಾ?,'' ಎಂದು ಲೇವಡಿ ಮಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ