ಆ್ಯಪ್ನಗರ

ರಕ್ಷಿತ್ ಶೆಟ್ಟಿಯಿಂದ ಹೊಸ ಮೊಬೈಲ್ ಆ್ಯಪ್‌ ಬಿಡುಗಡೆ

ಇದೊಂದು ಸುರಕ್ಷತಾ ಆ್ಯಪ್‌. ತೊಂದರೆಗೆ ಸಿಲುಕಿದವರು, ಅಪಾಯದ ಪರಿಸ್ಥಿತಿಯಲ್ಲಿರುವವರು ಯಾರು ಬೇಕಾದರೂ ಈ ಆ್ಯಪ್‌ನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಓಎಸ್ ಆವೃತ್ತಿಗಳಲ್ಲಿ ಇದು ಲಭ್ಯ. ಮುಖ್ಯವಾಗಿ ಮಹಿಳೆಯರು, ಮಕ್ಕಳು, ವೃದ್ಧರಿಗಾಗಿ ಬೆಂಗಳೂರು ನಗರ ಪೊಲೀಸರು ಇದನ್ನು ಹೊರತಂದಿದ್ದಾರೆ.

ವಿಕ ಸುದ್ದಿಲೋಕ 25 May 2017, 5:07 pm
ಬೆಂಗಳೂರು: ಇದೊಂದು ಸುರಕ್ಷತಾ ಆ್ಯಪ್‌. ತೊಂದರೆಗೆ ಸಿಲುಕಿದವರು, ಅಪಾಯದ ಪರಿಸ್ಥಿತಿಯಲ್ಲಿರುವವರು ಯಾರು ಬೇಕಾದರೂ ಈ ಆ್ಯಪ್‌ನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಓಎಸ್ ಆವೃತ್ತಿಗಳಲ್ಲಿ ಇದು ಲಭ್ಯ. ಮುಖ್ಯವಾಗಿ ಮಹಿಳೆಯರು, ಮಕ್ಕಳು, ವೃದ್ಧರಿಗಾಗಿ ಬೆಂಗಳೂರು ನಗರ ಪೊಲೀಸರು ಇದನ್ನು ಹೊರತಂದಿದ್ದಾರೆ.
Vijaya Karnataka Web rakshit shetty launches suraksha bengaluru city police
ರಕ್ಷಿತ್ ಶೆಟ್ಟಿಯಿಂದ ಹೊಸ ಮೊಬೈಲ್ ಆ್ಯಪ್‌ ಬಿಡುಗಡೆ


ಈ ಆ್ಯಪ್‌ನ್ನು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು ಬಿಡುಗಡೆ ಮಾಡಿದರು. ಈ ಆ್ಯಪ್‌ ಹೆಸರು ಸುರಕ್ಷಾ ಆ್ಯಪ್‌. ಇದರ ವಿಶೇಷತೆಗಳೇನೆಂದರೆ, ಈ ಆ್ಯಪ್‌ನಲ್ಲಿನ ಟ್ರಿಗ್ಗರ್ ಬಟನ್ ಐದು ಸಲ ಪ್ರೆಸ್ ಮಾಡಿದರೆ, 10 ಸೆಕೆಂಡ್‌ಗಳ ವಿಡಿಯೋ ಕ್ಲಿಪ್ಪಿಂಗ್ ರೆಕಾರ್ಡ್ ಆಗಿ ಅಪ್‌ಲೋಡ್ ಆಗುತ್ತದೆ. ನೀವಿರುವ ಸ್ಥಳ, ವಿಡಿಯೋ ಪೊಲೀಸರಿಗೆ ರವಾನೆಯಾಗುತ್ತದೆ. ಗೆಳೆಯರು, ಸಂಬಂಧಿಕರಿಗೂ ಈ ವಿಡಿಯೋ ತಲುಪುತ್ತದೆ.

ಅಪಾಯಕ್ಕೆ ಒಳಗಾಗಿರುವರರ ಸ್ಥಳ ಜಿಪಿಎಸ್ ಮೂಲಕ ಪೊಲೀಸರಿಗೆ ಗೊತ್ತಾಗಲಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಆಪರೇಟಿಂಗ್ ಸಿಸ್ಟಂಗಳಲ್ಲೂ ಈ ಸುರಕ್ಷಾ ಆ್ಯಪ್‌ ಲಭ್ಯ. ಅಂದಹಾಗೆ ಇದು ಸಂಪೂರ್ಣ ಉಚಿತ. ಇದರಲ್ಲಿ ಮೊಬೈಲ್ ನಂಬರ್ ಸೇರಿದಂತೆ ನಿಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ