ಆ್ಯಪ್ನಗರ

ರಾಮ, ಕೃಷ್ಣ ಮಾಂಸಹಾರಿಗಳಾಗಿದ್ದರು: ಪ್ರಮೋದ್ ಮಧ್ವರಾಜ್

'ಬೇಡರ ಸಮುದಾಯಕ್ಕೆ ಸೇರಿದ ರಾಮಾಯಣ ಬರೆದ ವಾಲ್ಮೀಕಿ, ಕ್ಷತ್ರೀಯ ಸಮಾಜದ ಶ್ರೀರಾಮ ಹಾಗೂ ಶ್ರೀಕೃಷ್ಣ ಮಾಂಸಹಾರಿಗಳಾಗಿದ್ದರು,' ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ವಿಕ ಸುದ್ದಿಲೋಕ 15 Oct 2016, 2:58 pm
ಉಡುಪಿ: 'ಬೇಡರ ಸಮುದಾಯಕ್ಕೆ ಸೇರಿದ ರಾಮಾಯಣ ಬರೆದ ವಾಲ್ಮೀಕಿ, ಕ್ಷತ್ರೀಯ ಸಮಾಜದ ಶ್ರೀರಾಮ ಹಾಗೂ ಶ್ರೀಕೃಷ್ಣ ಮಾಂಸಹಾರಿಗಳಾಗಿದ್ದರು,' ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
Vijaya Karnataka Web rama krishna were non vegetarians pramod madhwaraj
ರಾಮ, ಕೃಷ್ಣ ಮಾಂಸಹಾರಿಗಳಾಗಿದ್ದರು: ಪ್ರಮೋದ್ ಮಧ್ವರಾಜ್


ಜಿಲ್ಲಾಡಳಿತ ಆಯೋಜಿಸಿದ್ದ ವಾಲ್ಮೀಕಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, 'ದೇಶಾದ್ಯಂತ ನಡೆಯುತ್ತಿರುವ ಆಹಾರ ಪದ್ಧತಿ ಕುರಿತ ಚರ್ಚೆಗೆ ಪುರಾಣ ಪುರಷರೂ ಮಾಂಸಹಾರ ತಿನ್ನುತ್ತಿದ್ದರು ಎನ್ನುವುದು ಪ್ರಸ್ತುತ. ಈ ಬಗ್ಗೆಯೂ ಚರ್ಚೆಯಾಗಲಿ,' ಎಂದು ಆಶಿಸಿದರು.

'ಮಹಾ ಸಾಧನೆ ಮಾಡಲು ಜಾತಿ ಮುಖ್ಯವಲ್ಲ. ಮಹಾಭಾರತ ಬರೆದ ವ್ಯಾಸ ಅವಿವಾಹಿತ ಮೀನುಗಾರ ಮಹಿಳೆಯ ಪುತ್ರ. ಈ ಕಾಲದಲ್ಲಿ ಅಂತವರು ಇದ್ದಿದ್ದರೆ, ಸಮಾಜ ಬಹಿಷ್ಕರಿಸುತ್ತಿತ್ತು. ಜಾತಿ ಬಗ್ಗೆ ಮಾತನಾಡಲು ನಮಗೆ ಮಾತ್ರ ಅಧಿಕಾರ ಹಾಗೂ ಪೂಜೆ ಮಾಡುವುದು ನಮ್ಮ ಹಕ್ಕು ಎಂದು ಹೇಳಿಕೊಳ್ಳುವವರಿಗೆ ಪುರಾಣ, ಇತಿಹಾಸಗಳು ಕಣ್ಣು ತೆರೆಸುತ್ತವೆ,' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ