ಆ್ಯಪ್ನಗರ

ಕಸಾಯಿಖಾನೆಗೆ ಮೀಸಲಿಟ್ಟಿದ್ದ ಐದು ಎತ್ತುಗಳ ಖರೀದಿಸಿದ ರಕ್ಷಿಸಿದ ರಾಮಚಂದ್ರಾಪುರ ಮಠ

ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಕಸಾಯಿಖಾನೆಗೆ ಮಾರಾಟವಾಗಲಿದ್ದ ಓಂಗೋಲ್‌ ತಳಿಯ ಐದು ಎತ್ತುಗಳನ್ನು ರಾಮಚಂದ್ರಾಪುರ ಮಠದ ಗೋ ...

Vijaya Karnataka 1 Aug 2019, 5:00 am
ಬೆಂಗಳೂರು: ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಕಸಾಯಿಖಾನೆಗೆ ಮಾರಾಟವಾಗಲಿದ್ದ ಓಂಗೋಲ್‌ ತಳಿಯ ಐದು ಎತ್ತುಗಳನ್ನು ರಾಮಚಂದ್ರಾಪುರ ಮಠದ ಗೋ ಸಂಜೀವಿನಿ ಯೋಜನೆಯಡಿ ಖರೀದಿಸಿ ಜೀವದಾನ ಮಾಡಲಾಗಿದೆ.
Vijaya Karnataka Web Bulls Protected


ಬಕ್ರೀದ್‌ ಹಬ್ಬಕ್ಕಾಗಿ ಮಧ್ಯವರ್ತಿಯೊಬ್ಬರು ಆಂಧ್ರ ಪ್ರದೇಶದಿಂದ ಐದು ಎತ್ತುಗಳನ್ನು ಖರೀದಿಸಿ ತಂದು ರಸ್ತೆ ಬದಿಯಲ್ಲಿ ಕಟ್ಟಿದ್ದರು. ರಾಘವೇಶ್ವರಭಾರತೀ ಶ್ರೀಗಳ ಸಲಹೆಯಂತೆ ಕಾಮದುಘಾ ವಿಭಾಗದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಮಧ್ಯವರ್ತಿ ಜತೆ ಮಾತುಕತೆ ನಡೆಸಿದರು. ನಂತರ 3.2 ಲಕ್ಷ ರೂ. ಪಾವತಿಸಿ ಎತ್ತುಗಳನ್ನು ಖರೀದಿಸಿ ಪೂಚಕ್ಕಾಡು ಗೋ ಶಾಲೆಗೆ ಕಳುಹಿಸಲಾಯಿತು ಎಂದು ಮಠದ ಪ್ರಕಟಣೆ ತಿಳಿಸಿದೆ. ಈ ಹಿಂದೆ ಮಲೆ ಮಹದೇಶ್ವರ ಬೆಟ್ಟದ ಬಳಿ ತಮಿಳುನಾಡಿನ ಆಡಿ ಜಾತ್ರೆಯಲ್ಲಿ ಮಾರಾಟವಾಗಲಿದ್ದ 1,500 ಕ್ಕೂ ಹೆಚ್ಚು ಗೋವುಗಳನ್ನು ಒಂದೂವರೆ ಕೋಟಿ ರೂ. ಪಾವತಿಸಿ ಖರೀದಿಸಿ ರಕ್ಷಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ