ಆ್ಯಪ್ನಗರ

ಖಾತೆ ಹಂಚಿಕೆ ಕಸರತ್ತು: ಈಡೇರುತ್ತಾ ರಮೇಶ್‌ ಜಾರಕಿಹೊಳಿ ಬೇಡಿಕೆ ?

ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಹೊಸ ತಲೆನೋವಾಗಿದೆ. ನೂತನ ಸಚಿವರು ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿದ್ದು ಎಲ್ಲವೂ ಸುಖಾಂತ್ಯಗೊಂಡರೆ ಸೋಮವಾರ ಖಾತೆ ಹಂಚಿಕೆ ನಡೆಯಲಿದೆ.

Vijaya Karnataka Web 10 Feb 2020, 10:10 am
ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಗೊಂದಲ ಸಿಎಂ ಬಿಎಸ್‌ ಯಡಿಯೂರಪ್ಪ ಪಾಲಿಗೆ ಹೊಸ ತಲೆನೋವು ತಂದಿಟ್ಟಿದೆ. ಪ್ರಬಲ ಖಾತೆಯ ಮೇಲೆ ನೂತನ ಸಚಿವರು ಕಣ್ಣಿಟ್ಟಿದ್ದು ಸಮಸ್ಯೆ ಬಗೆಹರಿದರೆ ಸೋಮವಾರ ಖಾತೆ ಹಂಚಿಕೆಯಾಗಲಿದೆ.
Vijaya Karnataka Web ramesh jarkiholi demand for powerful portfolio
ಖಾತೆ ಹಂಚಿಕೆ ಕಸರತ್ತು: ಈಡೇರುತ್ತಾ ರಮೇಶ್‌ ಜಾರಕಿಹೊಳಿ ಬೇಡಿಕೆ ?


ನೂತನವಾಗಿ ಪ್ರಮಾನ ವಚನ ಸ್ವೀಕರಿಸಿದ ಹತ್ತು ಸಚಿವರಿಗೆ ಯಾವ ಖಾತೆಯನ್ನು ನೀಡಬೇಕು ಎಂದು ಬಿಎಸ್‌ವೈ ಪಟ್ಟಿ ಮಾಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಗೆ ಕಣ್ಣಿಟ್ಟಿದ್ದಾರೆ. ಜೊತೆಗೆ ಕೆ.ಗೋಪಾಲಯ್ಯ ಕೂಡಾ ಪ್ರಭಾವಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ.

ಸದ್ಯ ಸಿಎಂ ಬಿಎಸ್‌ ಯಡಿಯೂರಪ್ಪ ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ದಿ, ನಗರಾಭಿವೃದ್ದಿ ಹಾಗೂ ಮೂಲಭೂತ ಸೌಕರ್ಯ ಖಾತೆಗಳನ್ನು ಹೊಂದಿದ್ದಾರೆ. ಈ ಪೈಕಿ ಕೆಲವು ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲಿದ್ದಾರೆ.

ಇನ್ನು 15 ಸಚಿವರಲ್ಲಿ ಹೆಚ್ಚುವರಿ ಖಾತೆಗಳಿದ್ದು ಈ ಖಾತೆಗಳನ್ನು ನೂತನ ಸಚಿವರಿಗೆ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿವೆ. ಈಗಾಗಲೇ ಇರುವ ಖಾತೆಗಳನ್ನು ಸಚಿವರಿಂದ ತೆಗೆದುಕೊಂಡು ನೂತನ ಸಚಿವರಿಗೆ ಹಂಚಿಕೆ ಮಾಡುನ ನಿಟ್ಟಿನಲ್ಲಿ ಸಿಎಂ ಬಿಎಸ್‌ವೈ ಅಂತಿಮ ತಯಾರಿಯಲ್ಲಿದ್ದಾರೆ.

ಎಲ್ಲಾ ಅಂದುಕೊಂಡಂತೆ ನಡೆದರೆ ಸೋಮವಾರ ಖಾತೆ ಹಂಚಿಕೆಗೆ ರಾಜ್ಯಪಾಲರ ಸಹಿ ಬೀಳಲಿದೆ. ಆದರೆ ಪ್ರಬಲ ಖಾತೆಗಾಗಿ ರಮೇಶ್ ಜಾರಕಿಹೊಳಿ ಸೇರಿದಂತೆ ನೂತನ ಸಚಿವರು ಪಟ್ಟು ಹಿಡಿದರೆ ಖಾತೆ ಜಂಜಾಟ ಮುಂದುವರಿಯುವ ಸಾಧ್ಯತೆ ಇದೆ.

ಸಚಿವರು ಹೊಂದಿರುವ ಖಾತೆಗಳು ಹಾಗೂ ಹೆಚ್ಚುವರಿ ಖಾತೆಗಳು


ಡಾ. ಸಿಎಸ್‌ ಅಶ್ವಥನಾರಾಯಣ - ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ
ಹೆಚ್ಚುವರಿ ಖಾತೆ - ವೈದ್ಯಕೀಯ ಶಿಕ್ಷಣ

ಲಕ್ಷ್ಮಣ ಸವದಿ - ಸಾರಿಗೆ
ಹೆಚ್ಚುವರಿ ಖಾತೆ- ಕೃಷಿ

ಗೋವಿಂದ್ ಕಾರಜೋಳ - ಲೋಕೋಪಯೋಗಿ
ಹೆಚ್ಚುವರಿ ಖಾತೆ - ಸಮಾಜ ಕಲ್ಯಾಣ

ಬಸವರಾಜು ಬೊಮ್ಮಾಯಿ - ಗೃಹ
ಹೆಚ್ಚುವರಿ ಖಾತೆ - ಸಹಕಾರ

ಕೆ.ಎಸ್‌ ಈಶ್ವರಪ್ಪ - ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್
ಹೆಚ್ಚುವರಿ ಖಾತೆ - ಕ್ರೀಡೆ ಹಾಗೂ ಯುವಜನ ಸೇವೆ

ಆರ್‌. ಅಶೋಕ್ - ಕಂದಾಯ
ಹೆಚ್ಚುವರಿ ಖಾತೆ- ಪೌರಾಡಳಿತ, ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು

ಜಗದೀಶ್ ಶೆಟ್ಟರ್ - ಕೈಗಾರಿಕೆ
ಹೆಚ್ಚುವರಿ ಖಾತೆ - ಸಾರ್ವಜನಿಕ ಉದ್ದಿಮೆ

ಎಸ್‌. ಸುರೇಶ್ ಕುಮಾರ್ - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ
ಹೆಚ್ಚುವರಿ ಖಾತೆ - ಕಾರ್ಮಿಕ

ಬಿ. ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಹೆಚ್ಚುವರಿ ಖಾತೆ- ಹಿಂದುವಳಿದ ವರ್ಗಗಳ ಕಲ್ಯಾಣ

ಸಿ.ಟಿ ರವಿ - ಪ್ರವಾಸೋದ್ಯಮ
ಹೆಚ್ಚುವರಿ ಖಾತೆ- ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ

ವಿ. ಸೋಮಣ್ಣ - ವಸತಿ
ಹೆಚ್ಚುವರಿ ಖಾತೆ - ತೋಟಗಾರಿಕೆ ಹಾಗೂ ರೇಶ್ಮೆ

ಸಿ.ಸಿ ಪಾಟೀಲ - ಗಣಿ
ಹೆಚ್ಚುವರಿ ಖಾತೆ- ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ

ಎಚ್‌. ನಾಗೇಶ್ - ಅಬಕಾರಿ
ಹೆಚ್ಚುವರಿ ಖಾತೆ - ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ

ಶಶಿಕಲಾ ಜೊಲ್ಲೆ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಹೆಚ್ಚುವರಿ ಖಾತೆ - ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ಸೇವೆಗಳು

ಪ್ರಭು ಚೌವ್ಹಾಣ್ - ಪಶುಸಂಗೋಪನೆ
ಹೆಚ್ಚುವರಿ ಖಾತೆ - ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ