ಆ್ಯಪ್ನಗರ

ಮತ್ತೆ ಫೀಲ್ಡ್‌ಗೆ ಇಳಿದರೇ ಜಾರಕಿಹೊಳಿ!

ಕಾಂಗ್ರೆಸ್‌ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಮತ್ತೆ ರಾಜಧಾನಿಗೆ ಮರಳಿದ್ದು, ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್‌ ಕುಮಠಳ್ಳಿ ಹಾಗೂ ಆರ್‌...

Vijaya Karnataka 5 May 2019, 5:00 am
ಬೆಂಗಳೂರು: ಕಾಂಗ್ರೆಸ್‌ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಮತ್ತೆ ರಾಜಧಾನಿಗೆ ಮರಳಿದ್ದು, ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್‌ ಕುಮಠಳ್ಳಿ ಹಾಗೂ ಆರ್‌.ಶಂಕರ್‌ ಅವರೊಟ್ಟಿಗೆ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದೆ.
Vijaya Karnataka Web Ramesh Jarkiholi - congress


ಮೂವರೂ ಅತೃಪ್ತರು ಶನಿವಾರ ಬೆಂಗಳೂರಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬಂಡಾಯದ ಬಾವುಟ ಹಾರಿಸಿದ್ದ ಜಾರಕಿಹೊಳಿ ಬಳಿಕ ಏಕಾಂಗಿಯಾದರು ಎಂಬ ಮಾತುಗಳ ಬೆನ್ನಲ್ಲೇ, ಮತ್ತೆ ಅತೃಪ್ತರ ಗುಂಪು ಕ್ರಿಯಾಶೀಲವಾಗಿರುವುದು ಮೈತ್ರಿ ಸರಕಾರದ ನೆಮ್ಮದಿ ಕದಡಿದೆ.

ಸಂಪುಟದಿಂದ ಕೈಬಿಟ್ಟ ಬಳಿಕ ಅಸಮಾಧಾನಗೊಂಡಿರುವ ಆರ್‌.ಶಂಕರ್‌ ಹಾಗೂ ಶಾಸಕ ಕುಮಠಳ್ಳಿ ಅವರು ರಮೇಶ್‌ ಜಾರಕಿಹೊಳಿ ಅವರೊಂದಿಗೆ ಮತ್ತೆ ಗುರುತಿಸಿಕೊಂಡಿದ್ದು, ಅತೃಪ್ತರನ್ನು ಕಲೆಹಾಕುವ ಪ್ರಯತ್ನ ಮುಂದುವರಿದಿದೆ. ಈ ಮೂಲಕ ತಮ್ಮನ್ನು ಮೂಲೆಗುಂಪು ಮಾಡಲು ಹೊರಟ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ರಮೇಶ್‌ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನಲಾಗಿದೆ.

ತಾವು ಸದ್ಯದಲ್ಲೇ ರಾಜೀನಾಮೆ ನೀಡುವುದಾಗಿ ಹಾಗೂ ಇನ್ನೂ ಹಲವು ಕಾಂಗ್ರೆಸ್‌ ಶಾಸಕರೂ ತಮ್ಮ ನಿರ್ಧಾರವನ್ನು ಅನುಸರಿಸಲಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಕಳೆದ ಏ.23 ರಂದು ಬಹಿರಂಗವಾಗಿಯೇ ಹೇಳಿದ್ದರು. ಬೆಳಗಾವಿಗೆ ಮರಳಿದ್ದ ರಮೇಶ್‌ ಜಾರಕಿಹೊಳಿ ಮತ್ತೆ ಬೆಂಗಳೂರಿಗೆ ಮರಳಿ ಕ್ರಿಯಾಶೀಲರಾಗಿದ್ದು, ಅತೃಪ್ತರನ್ನು ಸಂಪರ್ಕಿಸಿ ಒಟ್ಟುಗೂಡಿಸುವ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ